More

    ಮೇಯಲು ಹೋದ ಕುರಿಗಳು ದಾರುಣ ಸಾವು; ರೈತರು ಅಂದುಕೊಂಡಿದ್ದೇ ಒಂದು…ಆದರೆ ಆಗಿದ್ದು ದುರಂತ..

    ಚಿತ್ರದುರ್ಗ: ಹಿರಿಯೂರು ತಾಲೂಕಿನ ವೇಣುಕಲ್ಲುಗುಡ್ಡಗ ಗೊಲ್ಲರಹಟ್ಟಿಯಲ್ಲಿ 50 ಕುರಿಗಳು ದಾರುಣವಾಗಿ ಸಾವನ್ನಪ್ಪಿವೆ.

    ಲಾಕ್​ಡೌನ್​ ಹಿನ್ನೆಲೆಯಲ್ಲಿ ಸರಿಯಾಗಿ ಮೇವು ಸಿಗದ ಕಾರಣ ಗ್ರಾಮದ ಸುನೀಲ್​ ಮತ್ತು ರಾಮಕೃಷ್ಣಪ್ಪ ಎಂಬುವರು ಖರ್ಬೂಜ ಬೆಳೆ ಮೇಯಲು ತಮ್ಮ ಕುರಿಗಳು ಬಿಟ್ಟಿದ್ದರು. ಆದರೆ ಆ ಬಳ್ಳಿ ತಿಂದ ಕುರಿಗಳು ಸಾವನ್ನಪ್ಪಿವೆ.

    ಕೊಳೆತ ಬಳ್ಳಿಗಳು ಮತ್ತು ಬೂಸ್ಟ್ ಹಿಡಿದಿದ್ದ ಹಣ್ಣುಗಳನ್ನು ತಿಂದ ಪರಿಣಾಮ ಕುರಿಗಳು ಮೃತಪಟ್ಟಿವೆ ಎಂದು ಹೇಳಲಾಗುತ್ತಿದೆ.
    ಪಶುವೈದ್ಯಾಧಿಕಾರಿ ಹನುಮಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಬ್ಬಿನಹೊಳೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts