More

    ಬಿಗ್​ಬಾಸ್​ನಲ್ಲಿ ವೈಷ್ಣವಿ ಮೇಲೆ ಎಗರಿ, ಸೋಲಿಸಲು ಮುಂದಾದ ಶಂಕರ್​! ಮನೆ ಮಂದಿ ಅಸಮಾಧಾನ

    ಬೆಂಗಳೂರು: ಬಿಗ್​ಬಾಸ್​ ಸೀಸನ್​ 8ರಲ್ಲಿ ಈ ವಾರ ನೀರಿಗೊಂದು ಎಲ್ಲೆ ಎಲ್ಲಿದೆ ಟಾಸ್ಕ್​ ಕೊಡಲಾಗಿತ್ತು. ಎರಡು ತಂಡ ಮಾಡಲಾಗಿದ್ದು, ಒಂದು ತಂಡದಿಂದ ದಿವ್ಯಾ ಸುರೇಶ್​ ಹಾಗೂ ಇನ್ನೊಂದು ತಂಡದ ಪ್ರತಿನಿಧಿಯಾಗಿ ವೈಷ್ಣವಿ ಸ್ವಿಮ್ಮಿಂಗ್​ ಫೂಲ್​ನಲ್ಲಿಟ್ಟಿದ್ದ ಬಾಕ್ಸ್​ ಮೇಲೆ ಕುಳಿತಿದ್ದರು. ಹೇಗಾದರೂ ಆಟ ಮುಗಿಸಿಬೇಕೆಂಬ ಕಾರಣಕ್ಕೆ ವೈಷ್ಣವಿಯನ್ನು ಬೀಳಿಸಲು ಶಂಕರ್​ ಅಶ್ವಥ್​ ಸ್ವಿಮ್ಮಿಂಗ್​ ಫೂಲ್​ಗೆ ಹಾರಿದ್ದು, ಮನೆ ಮಂದಿಗೆ ಅಸಮಾಧಾನವಾಗುವಂತಾಗಿದೆ.

    ಸುಮಾರು 24 ಗಂಟೆಗಳ ಕಾಲ ವೈಷ್ಣವಿ ಮತ್ತು ದಿವ್ಯಾ ಸುರೇಶ್​ ಊಟ, ತಿಂಡಿ, ನಿದ್ರೆ ಬಿಟ್ಟು ಬಾಕ್ಸ್​ ಮೇಲೆ ಕುಳಿತಿದ್ದರು. ಎರಡೂ ತಂಡಗಳು ಅದೆಷ್ಟೇ ಪ್ರಯತ್ನ ಪಟ್ಟರೂ ಅವರನ್ನು ಕೆಳಗಿಳಿಸಲು ಸಾಧ್ಯವಾಗಿರಲಿಲ್ಲ. ಅವರ ಕಷ್ಟ ನೋಡಲಾಗದೆ ಹೇಗಾದರೂ ಮಾಡಿ ಆಟ ಮುಗಿಸಬೇಕೆಂದು ಶಂಕರ್​ ಅವರನ್ನು ಕೇಳಿಕೊಂಡರು. ಆದರೆ ಆಟವನ್ನು ಬಿಡಲು ಸ್ಪರ್ಧಾಳುಗಳು ಸಿದ್ಧವಿರಲಿಲ್ಲ. ಶುಭ ಮತ್ತು ನಿಧಿ ಸೇರಿಕೊಂಡು ದುಪ್ಪಟ್ಟದಿಂದ ದಿವ್ಯಾ ಸುರೇಶನನ್ನು ಬೀಳಿಸಬೇಕೆಂದು ಹೊರಟಿದ್ದಾಗ ತಕ್ಷಣ ಶಂಕರ್ ಅವರು ಸ್ವಿಮ್ಮಿಂಗ್​ ಫೂಲ್​ಗೆ ಹಾರಿದ್ದಾರೆ. ಅಲ್ಲಿ ಕುಳಿತಿದ್ದ ವೈಷ್ಣವಿಯನ್ನು ತಳ್ಳಿದ್ದಾರೆ. ಅದರಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ವೈಷ್ಣವಿಗೆ ದೊಡ್ಡ ಮಟ್ಟದ ಪೆಟ್ಟಾಗುತ್ತಿತ್ತು ಎಂದು ಆಕೆಯ ತಂಡದ ಸದಸ್ಯರು ಆರೋಪಿಸಿದ್ದಾರೆ.

    ನೀರಿಗೆ ಬೀಳದೆಯೇ ಸ್ಪರ್ಧಾಳುವನ್ನು ಬೀಳಿಸಬೇಕೆಂಬ ನಿಯಮವಿತ್ತು. ಆದರೆ ಅದರಲ್ಲಿ ಶಂಕರ್​ ಅವರು ವಿಫಲವಾದ ಹಿನ್ನೆಲೆಯಲ್ಲಿ ವೈಷ್ಣವಿ ಅವರ ತಂಡವನ್ನೇ ಜಯಶಾಲಿಗಳೆಂದು ಘೋಷಿಸಲಾಗಿದೆ. (ಏಜೆನ್ಸೀಸ್​)

    ‘ಮೊಸಳೆ ಕಣ್ಣೀರು ಹಾಕ್ತಾರೆ’ ಎನ್ನುವುದರ ಹಿಂದಿನ ಕಥೆಯೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts