ಕಾಸರಗೋಡು: ಶಬರಿಮಲೆ ಕರ್ಕಾಟಕ ಮಾಸ ಪೂಜೆಗಾಗಿ ಜುಲೈ 16ರಂದು ಗರ್ಭಗುಡಿ ಬಾಗಿಲು ತೆರೆಯಲಾಗುವುದು. ತಂತ್ರಿ ಕಂಠರರ್ ಮಹೇಶ್ ಮೋಹನರ್ ನೇತೃತ್ವದಲ್ಲಿ ಮುಖ್ಯ ಅರ್ಚಕ ಎನ್.ಪರಮೇಶ್ವರ ನಂಬೂದಿರಿ ಗರ್ಭಗುಡಿ ಬಾಗಿಲು ತೆರೆಯುವರು. ಅಂದು ವಿಶೇಷ ಪೂಜೆ ಇಲ್ಲ. 17ರಂದು ಬೆಳಗ್ಗೆ ತುಪ್ಪಾಭಿಷೇಕದೊಂದಿಗೆ ನಿತ್ಯಪೂಜೆ ಆರಂಭಗೊಳ್ಳುವುದು. ದೇವರ ದರ್ಶನಕ್ಕಾಗಿ ವರ್ಚುವಲ್ ಕ್ಯೂ ವ್ಯವಸ್ಥೆ ಜಾರಿಯಲ್ಲಿರಲಿದೆ. ಇದಕ್ಕಾಗಿ ನೀಲಕ್ಕಲ್ನಲ್ಲಿ ಸ್ಥಳದಲ್ಲೇ ಬುಕಿಂಗ್ ವ್ಯವಸ್ಥೆ ಮಾಡಲಾಗಿದೆ. ಜು.21ರಂದು ರಾತ್ರಿ ಹರಿವರಾಸನಂ ಹಾಡಿನೊಂದಿಗೆ ಗರ್ಭಗುಡಿ ಬಾಗಿಲು ಮುಚ್ಚಲಾಗುವುದು. ನಂತರ ಸಿಂಹ ಮಾಸದ ಪೂಜೆಗಾಗಿ ಆ.16ರಂದು ಗರ್ಭಗುಡಿ ಬಾಗಿಲು ತೆರೆಯಲಾಗುವುದು.