More

    ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದವನೀಗ ಪೊಲೀಸರ ಅತಿಥಿ: ಆಡಳಿತ ಮಂಡಳಿಗೆ ದೂರು ಕೊಟ್ಟರೂ ಆಗಿರಲಿಲ್ಲ ಪ್ರಯೋಜನ

    ಬೆಂಗಳೂರು: ಸಹೊದ್ಯೋಗಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.

    ಬೆಳ್ಳಂದೂರು ನಿವಾಸಿ ಶಾಂತರಾಜು ಬಂಧಿತ. 29 ವರ್ಷದ ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿ ಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಫೈನಾನ್ಸ್ ಕಂಪನಿಯಲ್ಲಿ ಉದ್ಯೋಗಿಯಾ ಗಿದ್ದು, ಶಾಂತರಾಜು ಸಹ ಅಲ್ಲಿಯೇ ಕೆಲಸ ಮಾಡುತ್ತಿದ್ದ. ಶಾಂತರಾಜು ಇದ್ದ ಆರೋಪಿ ತಂಡದಲ್ಲಿ ಸಂತ್ರಸ್ತೆ ಕೆಲಸ ಮಾಡುತ್ತಿದ್ದರು.

    ಪ್ರತಿದಿನ ಕೆಲಸ ಮುಗಿದ ನಂತರ ಮಹಿಳೆ ಶಾಂತರಾಜುಗೆ ಹೇಳಿ ಹೋಗಬೇಕಿತ್ತು. ಅಲ್ಲದೆ, ಮನೆಗೆ ಹೋದ ಬಳಿಕವೂ ಕರೆ ಮಾಡಿ ಮಾತನಾಡುವಂತೆ ಒತ್ತಾಯ ಮಾಡುತ್ತಿದ್ದ. ಮೊದಲಿಗೆ ಕಂಪನಿ ವಿಚಾರವಾಗಿ ಮಾತನಾಡುತ್ತಿದ್ದ. ಕ್ರಮೇಣ ತನ್ನ ಖಾಸಗಿ ವಿಚಾರಗಳ ಬಗ್ಗೆ ರ್ಚಚಿಸುತ್ತಿದ್ದ. ಅಲ್ಲದೆ, ಕೆಲಸಕ್ಕೆ ಬಂದಾಗ ಅನುಚಿತವಾಗಿ ವರ್ತನೆ ತೋರುತ್ತಿದ್ದ. ಫೆ.22ರಂದು ಮಹಿಳೆ ಕೆಲಸ ಮುಗಿಸಿ

    ಮನೆಗೆ ಹೋಗುವ ಸಮಯದಲ್ಲಿ ಲೈಂಗಿಕ ಕಿರುಕುಳ ಕೊಟ್ಟಿದ್ದ. ಈ ಬಗ್ಗೆ ಮಹಿಳೆ ಆಡಳಿತ ಮಂಡಳಿಗೆ ದೂರು ನೀಡಿದರೂ ಪ್ರಯೋಜನವಾಗಿರಲಿಲ್ಲ. ಆರೋಪಿ ತನ್ನ ಹಳೇ ಚಾಳಿಯನ್ನೇ ಮುಂದುವರಿಸಿದ್ದರಿಂದ ನೊಂದ ಸಂತ್ರಸ್ತೆ ನ್ಯಾಯಕ್ಕಾಗಿ ಪೊಲೀಸರು ಮೊರೆ ಹೋಗಿದ್ದರು.

    ಲಾಕ್​ಡೌನ್ ಎಂಜಾಯ್​ಮೆಂಟ್​- ಕಾಡುಹಂದಿ, ಜಿಂಕೆ ಬೇಟೆಯಾಡಿದವರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts