ದುಗ್ಗಳ ಸದಾನಂದ ನಾಪೋಕ್ಲು
ಚೆರಿಯ ಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ನಮ್ಮೆಯ ಬುಧವಾರದ ಪಂದ್ಯಗಳಲ್ಲಿ ಸಣ್ಣುವಂಡ, ಕನ್ನಂಡ, ಚೇಂದಿರ, ಮಾರ್ತಾಂಡ, ಕೊಳ್ಳಿರ, ನಂಬುಡ ಮಾಡ, ಕಡೇಮಾಡ ತಂಡಗಳು ಜಯ ಗಳಿಸಿದವು.
ಚೇನಂಡ ಮತ್ತು ಮಾದಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೇಂದಿರ ತಂಡ 4-0 ಅಂತರದಿಂದ ಮಾದಂಡ ತಂಡದ ವಿರುದ್ಧ ಭರ್ಜರಿ ಜಯ ಗಳಿಸಿತು. ಚೇತನ್, ವಿನು ಹಾಗೂ ಪುನೀತ್ ಗಳಿಸಿದ ಗೋಲುಗಳ ನೆರವಿನಿಂದ ಚೇಂದಿರ ತಂಡಕ್ಕೆ ಭರ್ಜರಿ ಜಯ ಲಭಿಸಿತು.
ಸಣ್ಣುವಂಡ ತಂಡ, ಐಚಂಡ ತಂಡದ ವಿರುದ್ಧ 3- 0 ಅಂತರದಲ್ಲಿ, ಕನ್ನಂಡ ತಂಡ, ಕುಟ್ಟಂಡ ತಂಡದ ವಿರುದ್ಧ 2-1 ಅಂತರದಲ್ಲಿ ಗೆಲುವು ದಾಖಲಿಸಿತು. ಸೋಮಯಂಡ ಮತ್ತು ಮಾರ್ತಾಂಡ ತಂಡಗಳ ನಡುವೆ ಸಮ ಬಲದ ಹೋರಾಟ ನಡೆಯಿತು. ಬಳಿಕ ಟೈ ಬ್ರೇಕರ್ನಲ್ಲಿ ಮಾರ್ತಾಂಡ ತಂಡ 7-5 ಅಂತರದಿಂದ ಸೋಮಯಂಡ ತಂಡದ ವಿರುದ್ಧ ಜಯ ಸಾಧಿಸಿತು. ಮುಂಡಚಾಡಿರ ತಂಡ, ಕೊಳ್ಳಿರ ತಂಡದ ವಿರುದ್ಧ 1-0 ಅಂತರದಿಂದ ಜಯ ದಾಖಲಿಸಿದರೆ, ನಂಬುಡಮಾಡ ತಂಡ ತೀತಿಮಾಡ ತಂಡದ ವಿರುದ್ಧ 3-1 ಅಂತರದ ಗೆಲುವು ದಾಖಲಿಸಿತು. ಕಡೇಮಾಡ ತಂಡಕ್ಕೆ ಪಳಂಗಂಡ ತಂಡದ ವಿರುದ್ಧ 2-0 ಅಂತರದ ಜಯ ಲಭಿಸಿತು. ನಾಪಂಡ ತಂಡ ಮನೆಯಪಂಡ ತಂಡದ ವಿರುದ್ಧ 3-0 ಅಂತರದಿಂದ ಗೆದ್ದರೆ, ಮೇರಿಯಂಡ ತಂಡ ಬಾರಿಯಂಡ ತಂಡದ ವಿರುದ್ಧ 4-1ರ ಅಂತರದಿಂದ ಗೆಲವು ಸಾಧಿಸಿತು.
ಇಂದಿನ ಪಂದ್ಯಗಳು
ಮೈದಾನ ಒಂದು
9 ಗಂಟೆಗೆ ನೆಲ್ಲಮಕ್ಕಡ-ಕರ್ತಮಾಡ
10 ಗಂಟೆಗೆ ಅರೆಯಡ-ಕರೋಟಿರ
11 ಗಂಟೆಗೆ ಅಂಜಪರವಂಡ-ಅಪ್ಪಚೆಟ್ಟೋಳಂಡ
12 ಗಂಟೆಗೆ ಚೆರುಮಂದಂಡ-ಬಲ್ಲಚಂಡ
1 ಗಂಟೆಗೆ ಪಾಂಡಂಡ-ಪೆಮ್ಮಂಡ
2 ಗಂಟೆಗೆ ಕೂತಂಡ-ಚಿಂದಮಾಡ
3 ಗಂಟೆಗೆ ಮೂಕೊಂಡ-ಬೊಳ್ಳಂಡ
ಮೈದಾನ 2
9 ಗಂಟೆಗೆ ಕುಪ್ಪಂಡ(ಕೈಕೇರಿ)-ಬೊಪ್ಪಂಡ
10 ಗಂಟೆಗೆ ಕುಲ್ಲೇಟಿರ-ಕಲಿಯಾಟಂಡ
11 ಗಂಟೆಗೆ ಕೊಕ್ಕಂಡ-ಮುಕ್ಕಾಟಿರ(ಹರಿಹರ)
12ಗಂಟೆಗೆ ಚೀಯಕಪೂವಂಡ-ಕಳ್ಳಿಚಂಡ
1 ಗಂಟೆಗೆ ಮಂಡೇಪಂಡ-ನಾಗಂಡ
2 ಗಂಟೆಗೆ ಐನಂಡ-ಮುರುವಂಡ
3 ಗಂಟೆಗೆ ಚೌರೀರ (ಹೊದ್ದೂರು)-ಬಾಳೆಯಡ