ಕೆ.ಆರ್.ಸಾಗರ: ಇಲ್ಲಿನ ದಕ್ಷಿಣ ಬೃಂದಾವನದಲ್ಲಿ ಬುಧವಾರ ಸಂಜೆ ಕಾವೇರಿ ನೀರಾವರಿ ನಿಗಮದ ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಕೆಲ ಸಿಬ್ಬಂದಿ ಕನ್ನಡ ಚಲನಚಿತ್ರಗಳ ಹಾಡನ್ನು ಹಾಡಿ ವೀಕ್ಷಕರನ್ನು ರಂಜಿಸಿದರು.
ಕಾವೇರಿ ನೀರಾವರಿ ನಿಗಮದ ಕೆಲ ನೌಕರರು ಸಹ ಹಾಡುಗಳನ್ನು ಹಾಡಿ ಗಮನಸೆಳೆದರು. ಕೆ.ಆರ್.ಸಾಗರ ಯುವ ಪ್ರತಿಭೆ ಮಾಲ್ಕಂ ಮಾರ್ಷಲ್ ನಡೆಸಿಕೊಟ್ಟ ಲೈವ್ ಮಿಕ್ಸಿಂಗ್ ಡಿಜೆ ಕಾರ್ಯಕ್ರಮ ಚಪ್ಪಾಳೆ ಗಿಟ್ಟಿಸಿತು.