More

    ದ್ವಿತೀಯ ಪಿಯು ಪರೀಕ್ಷೆ ಸರಳಗೊಳಿಸಿದ ಶಿಕ್ಷಣ ಇಲಾಖೆ; ಮಾದರಿ ಪ್ರಶ್ನೆಪತ್ರಿಕೆ ಪ್ರಕಟಿಸಿದ ಪರೀಕ್ಷಾ ಮಂಡಳಿ

    | ಎನ್.ಎಲ್.ಶಿವಮಾದು ಬೆಂಗಳೂರು
    ದ್ವಿತೀಯ ಪಿಯು ಕಲಾ ಮತ್ತು ವಾಣಿಜ್ಯ ವಿಭಾಗದ ಪರೀಕ್ಷೆಗಳಿಗೆ 20 ಆಂತರಿಕ ಅಂಕಗಳನ್ನು ನಿಗದಿ ಮಾಡಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಸುಲಭಗೊಳಿಸಿದ್ದ ಶಾಲಾ ಶಿಕ್ಷಣ ಇಲಾಖೆ, ಇದೀಗ ಪ್ರಶ್ನೆಪತ್ರಿಕೆಯನ್ನು ಕೂಡ ಸುಲಭಗೊಳಿಸಿದೆ.

    ಪರೀಕ್ಷೆಯಲ್ಲಿ ವಾಕ್ಯದ ಆಧಾರದಲ್ಲಿ ಬರೆದು ಉತ್ತರಿಸುವುದಕ್ಕಿಂತ ಒಂದು ಪದದ ಉತ್ತರ, ಬಹು ಆಯ್ಕೆ ಪ್ರಶ್ನೆಗಳು (ಎಂಸಿಕ್ಯು), ಹೊಂದಿಸಿ ಬರೆಯಿರಿ, ಬಿಟ್ಟ ಸ್ಥಳ ತುಂಬುವಂತಹ ಪ್ರಶ್ನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಟ್ಟು 100 ಅಂಕಗಳಲ್ಲಿ 20 ಆಂತರಿಕ, 20 ಒಂದಂಕ, 24 ಎರಡು ಅಂಕದ ಪ್ರಶ್ನೆಗಳಿದ್ದು, 36 ಅಂಕಗಳಿಗಷ್ಟೇ ವಿವರಣಾತ್ಮಕ ಉತ್ತರನಗಳನ್ನು ಬರೆಯಬೇಕಾಗಿದೆ.

    ಪ್ರಶ್ನೆ ಪತ್ರಿಕೆ ಮಾದರಿ ಹೇಗಿರಲಿದೆ?: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು (ಕೆಎಸ್​ಇಎಬಿ) ದ್ವಿತೀಯ ಪಿಯುಸಿ ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡುಗಡೆ ಮಾಡಿದೆ. ಆ ಪ್ರಕಾರ, ಕನ್ನಡ ಪರೀಕ್ಷೆಯಲ್ಲಿ 10 ಅಂಕಗಳಿಗೆ ಒಂದು ವಾಕ್ಯದ 10 ಪ್ರಶ್ನೆಗಳು, 5 ಅಂಕಗಳಿಗೆ ಹೊಂದಿಸಿ ಬರೆಯಿರಿ, 5 ಅಂಕಗಳಿಗೆ ಬಿಟ್ಟ ಸ್ಥಳ ತುಂಬುವುದು ಸೇರಿ 20 ಅಂಕಗಳಿಗೆ ಒಂದು ಅಂಕದ ಪ್ರಶ್ನೆಗಳಿವೆ. 2 ಅಂಕದ 12 ಪ್ರಶ್ನೆಗಳಿವೆ. 3 ಅಂಕಗಳ 4 ಪ್ರಶ್ನೆಗಳು ಮತ್ತು 4 ಅಂಕಗಳ 6 ಪ್ರಶ್ನೆಗಳಿದ್ದು, 36 ಪ್ರಶ್ನೆಗಳಿಗೆ ಉತರಿಸಬೇಕಾಗುತ್ತದೆ. ಇದೇ ರೀತಿ ವಿವಿಧ ವಿಷಯಗಳಲ್ಲಿಯೂ ಕನಿಷ್ಠ 20 ಅಂಕಗಳು ಒಂದು ಅಂಕದ ಪ್ರಶ್ನೆಗಳಾಗಿವೆ.

    ಇದರ ಜತೆಗೆ 20 ಅಂಕಗಳಿಗೆ ಆಂತರಿಕ ಅಂಕ ನಿಗದಿ ಮಾಡಿದೆ. ಕಿರು ಪರೀಕ್ಷೆ ಮತ್ತು ಮಧ್ಯ ವಾರ್ಷಿಕ ಪರೀಕ್ಷೆ ಸೇರಿ 10 ಅಂಕ, ಉಳಿದ 10 ಅಂಕಗಳಿಗೆ ಕಾಲೇಜು ಹಂತದಲ್ಲಿ ಪ್ರಾಜೆಕ್ಟ್ ಹಾಗೂ ಅಸೈನ್​ವೆುಂಟ್​ಗಳಲ್ಲಿನ ಬರವಣಿಗೆ ವಿಭಾಗಕ್ಕೆ 5 ಅಂಕ, ಪ್ರಸ್ತುತಪಡಿಸುವಿಕೆಗೆ 3 ಅಂಕ ಮತ್ತು ಸಂದರ್ಶನಕ್ಕೆ 2 ಅಂಕಗಳನ್ನು ನಿಗದಿ ಮಾಡಿದೆ.

    ಗುಣಮಟ್ಟ ಕುಸಿಯುವ ಆತಂಕ: ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿಕೊಂಡು ಫಲಿತಾಂಶ ಹೆಚ್ಚಳ ಮಾಡಲು ಸರ್ಕಾರ ಮುಂದಾಗಿದೆ. ಆದರೆ, ಕರೊನಾ ಬಳಿಕ ಶಾಲಾ ಶಿಕ್ಷಣ ಇಲಾಖೆಯೇ ನಡೆಸಿರುವ ಸಮೀಕ್ಷೆಯಲ್ಲಿ ‘ವಾಕ್ಯ ರಚನೆ’ಯಲ್ಲಿ ವಿದ್ಯಾರ್ಥಿಗಳು ಹಿಂದುಳಿದಿದ್ದಾರೆ. ಪದ ಬಳಕೆ, ವಾಕ್ಯ ರಚನೆ, ವ್ಯಾಕರಣ ಮತ್ತು ಗಣಿತದಲ್ಲಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ತೀರಾ ಕಳಪೆಯಾಗಿದೆ ಎಂಬುದು ಸಾಬೀತಾಗಿದೆ. ಮತ್ತೆ ಶಿಕ್ಷಣ ಇಲಾಖೆಯು ಪರೀಕ್ಷೆಯಲ್ಲಿ ಎಂಸಿಕ್ಯು ಮಾದರಿಯೇ ಹೆಚ್ಚಳ ಅಂಕಗಳಿಗೆ ಅನ್ವಯವಾಗುವಂತೆ ಪ್ರಶ್ನೆಪತ್ರಿಕೆ ಸಿದ್ಧ ಪಡಿಸುವುದದರಿಂದ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದರೂ ಗುಣಮಟ್ಟದಲ್ಲಿ ಹಿಂದುಳಿಯಲಿದ್ದಾರೆ ಎಂದು ಸರ್ಕಾರಿ ಕಾಲೇಜಿನ ಉಪನ್ಯಾಸಕ ರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

    ದ್ವಿತೀಯ ಪಿಯು ಪರೀಕ್ಷೆ ಸರಳಗೊಳಿಸಿದ ಶಿಕ್ಷಣ ಇಲಾಖೆ; ಮಾದರಿ ಪ್ರಶ್ನೆಪತ್ರಿಕೆ ಪ್ರಕಟಿಸಿದ ಪರೀಕ್ಷಾ ಮಂಡಳಿ

    ಪರೀಕ್ಷೆ/ಮೌಲ್ಯಂಕನ ಅದಲು ಬದಲು ಮಾಡಿಕೊಂಡಂತಾಗಿದೆ. ಮಕ್ಕಳ ಎಲ್ಲ ಕೌಶಲಗಳನ್ನು ಪರೀಕ್ಷೆ ಮಾಡಬೇಕಾಗುತ್ತದೆ. ಜ್ಞಾನ, ತಿಳಿವಳಿಕೆ, ವಿಶ್ಲೇಷಣೆ ಮಾಡಲು ವಿವರಣಾತ್ಮಕ ಪ್ರಶ್ನೆಗಳು ಅಗತ್ಯ. ಕೇವಲ ಎಂಸಿಕ್ಯುಗಳಿಂದ ಉತ್ತೀರ್ಣರಾಗುವವರ ಸಂಖ್ಯೆ ಹೆಚ್ಚಳ ವಾಗುತ್ತದೆಯೇ ಹೊರತು, ಗುಣಮಟ್ಟ ಹೆಚ್ಚಲ್ಲ.

    | ಡಾ. ವಿ.ಪಿ. ನಿರಂಜನಾರಾಧ್ಯ. ಶಿಕ್ಷಣ ತಜ್ಞ 

    ಪ್ರಾಜೆಕ್ಟ್ ವರ್ಕ್​ಗೆ ಆಕ್ಷೇಪ: ವಿದ್ಯಾರ್ಥಿಗಳಿಗೆ 10 ಆಂತರಿಕ ಅಂಕಗಳನ್ನು ನೀಡಲು ಆರಂಭದಲ್ಲಿ ಸ್ಥಳೀಯ ವಿಚಾರಗಳಿಗೆ ಆದ್ಯತೆ ನೀಡುವಂತೆ ಸೂಚಿಸಲಾಗಿತ್ತು. ಈಗ ರಾಜ್ಯಕ್ಕೆ ಸಂಬಂಧಿಸಿದ ಮತ್ತು ಕೆಲವು ಪ್ರಶ್ನೆಗಳು ಪಠ್ಯೇತರ ವಿಷಯಗಳನ್ನು ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟತೆ ನೀಡಿದರೆ ಅನುಕೂಲ ಎಂದು ಉಪನ್ಯಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವ ಹೃದಯ ನನಗೆ ಕೊಡೆ ತಾಯಿ ನನಗೆ ಕೊಡೆ: ಹೈಕೋರ್ಟ್​​ ತಡೆ ಸಿಗುತ್ತಿದ್ದಂತೆ ಉಪೇಂದ್ರ ಫಸ್ಟ್ ರಿಯಾಕ್ಷನ್​

    ಟೆಲಿಗ್ರಾಮ್​ಗೆ ದಶಕದ ಸಂಭ್ರಮ: ಇವತ್ತಿನಿಂದಲೇ ಹಂತಹಂತವಾಗಿ ಎಲ್ಲ ಬಳಕೆದಾರರಿಗೆ ಹೊಸದೊಂದು ಫೀಚರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts