More

    ಪ್ರಶಸ್ತಿ ಪರಸ್ಕೃತರ ವಿಳಾಸಕ್ಕೆ ಹುಡುಕಾಟ!

    ಕಾರವಾರ: ಬನವಾಸಿ ಕದಂಬೋತ್ಸವದಲ್ಲಿ ಪ್ರದಾನ ಮಾಡಬೇಕಿದ್ದ ಪಂಪ ಪ್ರಶಸ್ತಿಯನ್ನು ಕೊನೆಯ ಕ್ಷಣದಲ್ಲಿ ಘೊಷಿಸಲಾಗಿದೆ. ಇದರಿಂದ ಜಿಲ್ಲಾಡಳಿತ ಉತ್ಸವದಲ್ಲಿ ಪ್ರಶಸ್ತಿ ನೀಡಲು ಸಾಹಿತಿಗಳನ್ನು ಕರೆತರಲು ಕೊನೆಯ ಕ್ಷಣದಲ್ಲಿ ಅವರ ಮನೆಯ ವಿಳಾಸ ಹುಡುಕುತ್ತಿದೆ.

    ಫೆ. 28 ರಂದು ಬನವಾಸಿಯಲ್ಲಿ ಕದಂಬೋತ್ಸವ ಆಯೋಜನೆಯಾಗಿದೆ. ಕದಂಬೋತ್ಸವದಲ್ಲೇ ಪಂಪ ಪ್ರಶಸ್ತಿ ನೀಡುವ ವಾಡಿಕೆ ರೂಢಿಯಲ್ಲಿದೆ. 2021 ಹಾಗೂ 22 ರ ಲ್ಲಿ ಕೋವಿಡ್ ಕಾರಣಕ್ಕೆ ಕದಂಬೋತ್ಸವ ನಡೆದಿರಲಿಲ್ಲ. ಆಗ ಪಂಪ ಪ್ರಶಸ್ತಿಯೂ ಘೊಷಣೆಯಾಗಿರಲಿಲ್ಲ. 27 ರಂದು ರಾತ್ರಿ ಮೂರು ವರ್ಷಗಳ ಪ್ರಶಸ್ತಿ ಘೊಷಿಸಲಾಗಿದೆ.
    ಸೋಮವಾರ ಸಭೆ ನಡೆಸಿದ ಡಾ.ಜಿ.ಬಿ. ಕೃಷ್ಣಮೂರ್ತಿ ಅಧ್ಯಕ್ಷತೆಯ ಆಯ್ಕೆ ಸಮಿತಿ ಪಂಪ ಪ್ರಶಸ್ತಿಗೆ 2022ನೇ ಸಾಲಿನ ಪ್ರಶಸ್ತಿಯನ್ನು ಡಾ.ಎಸ್.ಆರ್.ರಾಮಸ್ವಾಮಿ ಅವರಿಗೆ ನೀಡುವಂತೆ ಶಿಫಾರಸು ಮಾಡಿದೆ.
    ಅದರಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನ ಕಾರ್ಯದರ್ಶಿ ಕೆ.ಆರ್. ರಮೇಶ ಅವರು ಮೂರು ವರ್ಷಗಳ ಪ್ರಶಸ್ತಿಯನ್ನು ಘೊಷಿಸಿದೆ.

    2020 ನೇ ಸಾಲಿಗೆ ಸಿ.ಪಿ.ಕೃಷ್ಣಕುಮಾರ, 2021ನೇ ಸಾಲಿಗೆ ಡಾ. ಬಾಬು ಕೃಷ್ಣಮೂರ್ತಿ ಅವರಿಗೆ ಪ್ರಶಸ್ತಿ ಘೊಷಿಸಲಾಗಿದೆ.
    ಇಂದೇ ಪ್ರಶಸ್ತಿ ಪ್ರದಾನ ಮಾಡಬೇಕಿರುವುದರಿಂದ ಜಿಲ್ಲಾಡಳಿತ ಗಡಿಬಿಡಿಬಿದ್ದಿದೆ. ಈ ಹಿಂದೆ ಪಂಪ ಪ್ರಶಸ್ತಿ ಸ್ವೀಕರಿಸುವವರ ಮನೆಗೇ ತೆರಳಿ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸುವ ಪರಿಪಾಠವಿತ್ತು.

    ಈ ಬಾರಿ ಮನೆಗೆ ತೆರಳಿ ಆಹ್ವಾನ ನೀಡುವುದಿರಲಿ ಅವರನ್ನು ಕರೆತರುವುದೇ ಕಷ್ಟವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts