ಯಾದಗಿರಿ: ಇಂದು(ಫೆ.11) ಅಮಾವಾಸ್ಯೆ. ನಿನ್ನೆ ತಡರಾತ್ರಿ ಜಿಲ್ಲೆಯ ಐತಿಹಾಸಿಕ ಸ್ಥಳ ಗುಡ್ಡದ ತಿಮ್ಮಪ್ಪನ ಸನ್ನಿಧಿಗೆ ಬಂದ ನಿಧಿಗಳ್ಳರು ಗುಂಡಿ ತೋಡಿದ್ದು, ಭಕ್ತರು ಬೆಚ್ಚಿಬಿದ್ದಿದ್ದಾರೆ.
ಅಮಾವಾಸ್ಯೆ ಹಿನ್ನೆಲೆ ಸುರಪುರ ತಾಲೂಕಿನ ದೇವರಗೋನಾಲ ಗ್ರಾಮದ ಶ್ರೀ ಗುಡ್ಡದ ತಿಮ್ಮಪ್ಪನ ಸನ್ನಿಧಿಯಲ್ಲಿ ನಿಧಿಗಾಗಿ ಶೋಧಿಸಿರುವ ಕಳ್ಳರು ದೇವಸ್ಥಾನದ ಬಳಿ ಭೂಮಿ ಅಗೆದಿದ್ದಾರೆ. ಇದನ್ನೂ ಓದಿರಿ ಆಂಜನೇಯ ದೇಗುಲಕ್ಕೆ ಬೆಂಕಿ ಇಟ್ಟು ವಿಕೃತಿ ಮೆರೆದ ಕಿಡಿಗೇಡಿಗಳು!
ಅನೇಕ ಭಕ್ತರ ಆರಾಧ್ಯದೈವ ಈ ಗುಡ್ಡದ ತಿಮ್ಮಪ್ಪ. ಈ ದೇಗುಲದಲ್ಲಿ ವಿಸ್ಮಯಕಾರಿ ಪವಾಡ ನಡೆದಿರುವುದು ಇತಿಹಾಸ. ದೇವಸ್ಥಾನದ ಕಲ್ಲು ಕೊಳದಲ್ಲಿ ಈಗಲೂ ನೀರು ಹರಿಯುವುದೇ ವಿಶೇಷ. ಹಲವು ಭಕ್ತರಿಂದ ದೇವರಿಗೆ ಹೋಮ, ಹವನ ನಡೆಯುಯತ್ತಲೇ ಇರುತ್ತೆ. ವಿಶೇಷ ದಿನಗಳಲ್ಲಿ ಭಕ್ತಸಾಗರವೇ ತುಂಬಿರುತ್ತೆ.
ಇಂತಹ ದೇಗುಲವನ್ನೇ ಟಾರ್ಗೆಟ್ ಮಾಡಿದ ಕಿಡಿಗೇಡಿಗಳು ಅಮಾವಾಸ್ಯೆ ಶುರುವಾಗುತ್ತಿದ್ದಂತೆ ನಿಧಿಗಾಗಿ ದೇವಸ್ಥಾನದ ಮೆಟ್ಟಿಲು ಬಳಿ ಗುಂಡಿ ತೋಡಿದ್ದಾರೆ. ಇಂದು ಬೆಳಗ್ಗೆ ಅಮಾವಾಸ್ಯೆ ಪೂಜೆಗೆಂದು ದೇವಾಲಯಕ್ಕೆ ಬಂದ ಜನರು, ನಿಧಿಗಳ್ಳರ ಕೃತ್ಯ ಬಯಲಾಗಿದೆ.
ಜೆಡಿಎಸ್ಗೆ ಮತ್ತೊಂದು ಶಾಕ್! ಮುಂದಿನ ವಾರವೇ ಮಧುಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ
ಬೇಡ ಬೇಡ ಅಂದ್ರೂ ಸಾವಿನ ಮನೆಯ ಕದ ತಟ್ಟಿದ 15ರ ಬಾಲಕ! ಕಳೆದ ವಾರವೇ ಪೊಲೀಸರು ಎಚ್ಚರಿಸಿದ್ದರು