More

    ವೈಜ್ಞಾನಿಕ ಭಾವನೆ ಬೆಳೆಸಿಕೊಳ್ಳಿರಿ

    ಮಾನ್ವಿ: ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದುಶಿಕ್ಷಕ ಎಂ.ಎಂ.ಹಿರೇಮಠ ಹೇಳಿದರು.

    ಪಟ್ಟಣದ ಕಲ್ಮಠ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಅತ್ಯಂತ ಸಣ್ಣ ಕಣದಲ್ಲಿ ಬೆಳಕಿನ ಕಿರಣಗಳು ಚದುರುತ್ತವೆ ಎಂಬ ಅಂಶವನ್ನು ಸಿ.ವಿ.ರಾಮನ್ ಜಗತ್ತಿಗೆ ತಿಳಿಸಿದರು. ಅವರ ಈ ಸಾಧನೆಗಾಗಿ ನೊಬೆಲ್ ಪ್ರಶಸ್ತಿ ದೊರೆಯಿತು ಎಂದರು.
    ಶಿಕ್ಷಕ ನರಸಿಂಹ, ಉಪನ್ಯಾಸಕಿ ಪವಿತ್ರ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ವಿಜ್ಞಾನದ ವಿವಿಧ ಚಿತ್ರಗಳು, ರಂಗೋಲಿ ಬಿಡಿಸಿದರು. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ ಕಮತರ ಅಧ್ಯಕ್ಷತೆ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts