ಗದಗ:
ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಕೌಶಲ್ಯ ಹಾಗೂ ಮೌಲ್ಯಗಳು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ಸಂಪನ್ಮೂಲ ವ್ಯಕ್ತಿ ಕೆ.ಎಸ್.ಬೇಲೇರಿ ಹೇಳಿದರು.
ಬಸವೇಶ್ವರ ನಗರದ ಸರಕಾರಿ ಶಾಲೆ ನಂ. 4 ರಲ್ಲಿ ಸೋಮವಾರ ಜರುಗಿದ “ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಲಿಕೆಯ ಜೊತೆಗೆ ಚಟುವಟಿಕೆಗಳಿಂದಾಗಿ ವಿದ್ಯಾಥಿರ್ಗಳಿಗೆ ಕಲಿಕಾ ಆಸಕ್ತಿ ವೃದ್ಧಿಸುತ್ತದೆ. ಮಕ್ಕಳು ಪುಸ್ತಕ ಬ್ಯಾಗ್ ಇಲ್ಲದೆ ಶಾಲೆಗೆ ಬಂದು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ, ಉತ್ತಮ ಜೀವನ ಶೈಲಿ ಸ್ವಾಸ್ಥ$್ಯ ಮತ್ತು ಶುಚಿತ್ವ ಬಗ್ಗೆ ಕಲಿಯುವುದು ಅಗತ್ಯವಿದೆ ಎಂದರು.
ಶಾಲಾ ಮುಖ್ಯೋಪಾಧ್ಯಾಯ ಎಸ್. ಕೆ. ಮಂಗಳಗುಡ್ಡ ಮಾತನಾಡಿ ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಹಾಗೂ ಸಂತಸದಾಯಕ ಜೀವನಕ್ಕೆ ನೈತಿಕ ಪ್ರಜ್ಞೆ, ಉತ್ತಮ ಮೌಲ್ಯಗಳು ಅವಶ್ಯ ಎಂದರು.
ಸಿ. ಡಿ. ಕನವಳ್ಳಿ, ಎನ್. ವೈ. ಬಣಕಾರ, ಜೆ. ಪಿ. ಪಾಲನಕರ, ಆರ್. ಎ್. ಶಿಂಗಾಡಿ ಇತರರು ಇದ್ದರು.