ಕೋಲ್ಕತ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ರಾಜಕೀಯ ಮಾಂತ್ರಿಕ ಎಂದು ಹಲವರು ಕರೆಯುತ್ತಾರೆ. ಬಿಜೆಪಿಗೆ ಅಡಿಪಾಯವೇ ಇಲ್ಲದ ರಾಜ್ಯಗಳಲ್ಲೂ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಶಕ್ತಿ ಅವರಲ್ಲಿದೆ ಎನ್ನುವ ಮಾತು ಕೇಳಿಬರುತ್ತಿರುತ್ತದೆ. ಮುಂದಿನ ವರ್ಷದಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇತ್ತೀಚೆಗೆ ಅಲ್ಲಿಗೂ ಅಮಿತ್ ಷಾ ಪ್ರವಾಸ ನಡೆಸಿ ಬಂದಿದ್ದಾರೆ. ಅಮಿತ್ ಷಾ ರಾಜ್ಯಕ್ಕೆ ಕಾಲಿಟ್ಟ ಕೆಲವೇ ದಿನದಲ್ಲಿ ಅಲ್ಲಿನ ಬಿಜೆಪಿ ನಾಯಕರ ಬಾಯಲ್ಲಿ ಕೆಲವು ಸ್ಫೋಟಕ ವಿಚಾರಗಳು ಹೊರಬಿದ್ದಿವೆ.
ಇದನ್ನೂ ಓದಿ: ಹಿಂದುಳಿದವರ ಆಶಾಕಿರಣ ಕೆಂಗಲ್ ಹನುಮಂತಯ್ಯ, ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಅಭಿಮತ
ಮಮತಾ ಬ್ಯಾನರ್ಜಿ ಅವರ ಬಲಗೈ ಬಂಟನಂತಿರುವ ಸಚಿವ ಸೌಗತ ರಾಯ್ ಟಿಎಂಸಿಯನ್ನು ತೊರೆದು ಬಿಜೆಪಿ ಸೇರಲು ಸಿದ್ಧರಿದ್ದಾರಂತೆ. ಅವರಷ್ಟೇ ಅಲ್ಲ, ಅವರೊಂದಿಗೆ ನಾಲ್ವರು ಸಂಸದರೂ ಬಿಜೆಪಿ ಸೇರಲು ಸಿದ್ಧರಾಗಿದ್ದಾರಂತೆ. ಹೀಗೆಂದು ಹೇಳಿರುವುದು ರಾಜ್ಯದ ಬಿಜೆಪಿ ಸಂಸದ ಅರ್ಜುನ್ ಸಿಂಗ್.
ಸೌಗತ ಅವರು ಕ್ಯಾಮೆರಾ ಎದುರು ಮಾತ್ರ ಟಿಎಂಸಿ ನಾಯಕರಾಗಿರುತ್ತಾರೆ. ಒಮ್ಮೆ ಕ್ಯಾಮೆರಾ ತೆಗೆದು ನೋಡಿದರೆ ಅವರು ಬಿಜೆಪಿಯವರಾಗುತ್ತಾರೆ. ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿಯಾಗಲು ಮುಖ್ಯ ಕಾರಣ ಸೌಗತ ಅವರು. ಇದೀಗ ಅವರೇ ಟಿಎಂಸಿ ತೊರೆಯಲು ಸಿದ್ಧರಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಪ್ರವಾಸಿ ಕ್ಷೇತ್ರಗಳ ಪುನಶ್ಚೇತನಕ್ಕೆ ಆದ್ಯತೆ ; ಉಮಾಮಹದೇವನ್ ಹೇಳಿಕೆ
ಮುಂದಿನ ಚುನಾವಣೆಯಲ್ಲಿ ಸೌಗತ ಅವರು ಬಿಜೆಪಿಯ ಪರವಾಗಿರುತ್ತಾರೆ. ರಾಜ್ಯದಲ್ಲಿ ಮಮತಾ ಬ್ಯಾನರ್ಜಿ ಅವರ ಆಡಳಿತ ಅಂತ್ಯವಾಗಿ ಬಿಜೆಪಿ ಸರ್ಕಾರ ಅಡಳಿತಕ್ಕೆ ಬರಲಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)
ಯೋಗಿ ಸರ್ಕಾರದಲ್ಲಿ ಲವ್ ಜಿಹಾದ್ ಬಗ್ಗೆ ಮಸೂದೆ ಸಿದ್ಧವಾಗುತ್ತಿಲ್ಲ; ಹಾಗಾದರೆ ಇಷ್ಟು ದಿನ ಹೇಳಿದ್ದು ಸುಳ್ಳಾ?
ಡ್ರಗ್ಸ್ ಪ್ರಕರಣದಲ್ಲಿ ಪ್ರಸಿದ್ಧ ಹಾಸ್ಯ ನಟಿ ದಂಪತಿ ಭಾಗಿ? ಎನ್ಸಿಬಿ ಅಧಿಕಾರಿಗಳಿಂದ ದಂಪತಿಯ ವಿಚಾರಣೆ