More

    ಜೀ ಕನ್ನಡದಲ್ಲಿ ಸಂಕ್ರಾಂತಿ ಸಂಗಮ; ಸೋಮವಾರ ದಿಂದ ಶುಕ್ರವಾರ ರಾತ್ರಿ 7ರಿಂದ 8ವರೆಗೆ…

    ಬೆಂಗಳೂರು: ಈ ಸಂಕ್ರಾಂತಿ ಪ್ರಯುಕ್ತ ಜೀ ಕನ್ನಡದಲ್ಲಿ ಸಂಜೆ 7ಕ್ಕೆ ಮತ್ತು 7.30ಕ್ಕೆ ಪ್ರಸಾರವಾಗುವ ‘ಕಮಲಿ’ ಮತ್ತು ‘ಪಾರು’ ಧಾರಾವಾಹಿಗಳ ಮಹಾಸಂಗಮ ನಡೆಯಲಿದೆ. ಸಂಕ್ರಾಂತಿ ಸಂಗಮ ಕಾರ್ಯಕ್ರಮದಲ್ಲಿ ಅರಸನಕೋಟೆ ಅಖಿಲಾಂಡೇಶ್ವರಿ ಹಾಗೂ ಅನ್ನಪೂರ್ಣ ಮಹಾಜನ್ ಇಬ್ಬರೂ ಪರಸ್ಪರ ಭೇಟಿಯಾಗಿ ಹಬ್ಬವನ್ನು ಒಟ್ಟಾಗಿ ಆಚರಿಸಲಿದ್ದಾರೆ.

    ಎರಡೂ ಕುಟುಂಬಗಳು ಭೂಮಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಪರಸ್ಪರ ಎದುರಾಗುತ್ತವೆ. ಪೈಪೋಟಿಯೂ ಏರ್ಪಡುತ್ತದೆ. ಬಳಿಕ ಒಳ್ಳೆಯ ಉದ್ದೇಶದ ಹಿನ್ನೆಲೆಯಲ್ಲಿ ರಾಜಿಯಾಗುತ್ತದೆ. ಈ ನಡುವೆ ಆದಿ ಮತ್ತು ಪಾರು ಪ್ರೀತಿ ಸಂಬಂಧಕ್ಕೂ ಇಲ್ಲೊಂದು ಟ್ವಿಸ್ಟ್ ಸಿಗಲಿದೆ. ರಿಷಿ ಮತ್ತು ಕಮಲಿ ಮಧ್ಯೆ ಬಂದಿರುವ ಅಂಬಿ ಹೇಗೆ ಇಬ್ಬರ ನಡುವಿನ ಸಂಬಂಧದಲ್ಲಿ ತಿರುವು ತರುತ್ತಾಳೆ. ಹೀಗೆ ಕೌತುಕವಾಗಿಯೇ ಧಾರಾವಾಹಿ ಸಾಗಲಿದೆ. ಹಬ್ಬದ ಸಂಭ್ರಮದ ನಿಮಿತ್ತ ಎರಡೂ ಕುಟುಂಬಗಳ ಸದಸ್ಯರು ಕಣದ ಪೂಜೆ, ಕೋಲಾಟ, ನೃತ್ಯ, ಮನೆಯ ಅಲಂಕಾರ ಎಲ್ಲದರಲ್ಲೂ ತೊಡಗಿಕೊಳ್ಳುತ್ತಾರೆ. ಸಂಭ್ರಮದಿಂದ ಸಂಕ್ರಾಂತಿ ಆಚರಿಸುತ್ತಾರೆ. ಅವೆಲ್ಲವೂ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡಲಿದೆ.

    ಪ್ರಶ್ನೆಗೆ ಉತ್ತರಿಸಿ ಬೆಳ್ಳಿ ದೀಪ ಗೆಲ್ಲಿ

    ವೀಕ್ಷಕರ ಸಂಭ್ರಮ ಹೆಚ್ಚಿಸಲು ಸಂಕ್ರಾಂತಿ ಬೆಳ್ಳಿಹಬ್ಬ ನಡೆಯಲಿದ್ದು, ಸರಿ ಉತ್ತರ ಕೊಡುವವರಿಗೆ ಬೆಳ್ಳಿ ದೀಪದ ಕಂಬ ದೊರೆಯಲಿದೆ. ಈ ಬೆಳ್ಳಿಹಬ್ಬ ಜನವರಿ 11, ಸೋಮವಾರ ಪ್ರಾರಂಭವಾಗಿ ಜ.15, (ಸಂಜೆ 7ರಿಂದ 8ರವರೆಗೆ) ಶುಕ್ರವಾರ ಸ್ಪರ್ಧೆ ಪೂರ್ಣಗೊಳ್ಳುತ್ತದೆ. ಇದರಲ್ಲಿ ಪ್ರತಿ ದಿನ ಸಂಚಿಕೆಯ ಕೊನೆಯಲ್ಲಿ ಒಂದು ಪ್ರಶ್ನೆ ಕೇಳಲಾಗುತ್ತದೆ. ಅದಕ್ಕೆ ಮೂರು ಉತ್ತರಗಳನ್ನು ನೀಡಲಾಗುತ್ತದೆ. ಈ ಪ್ರಶ್ನೆಗೆ ವೀಕ್ಷಕರು ಸರಿಯಾದ ಉತ್ತರವನ್ನು 57575 ಸಂಖ್ಯೆಗೆ ಎಸ್​ಎಂಎಸ್ ಮೂಲಕ ಕಳುಹಿಸಬೇಕು. ಪ್ರತಿನಿತ್ಯ ಇಬ್ಬರು ವಿಜೇತರನ್ನು ಆಯ್ಕೆ ಮಾಡಿ ಒಟ್ಟು ಹತ್ತು ಜನ ವಿಜೇತರಿಗೆ ಬೆಳ್ಳಿಯ ದೀಪದ ಕಂಬವನ್ನು ನೀಡಲಾಗುತ್ತದೆ.

    ನೆನಪಿರಲಿ, ಹುಡುಗರೂ ಸೇಫ್​ ಅಲ್ಲ… ಕೆಲಸದ ಆಮಿಷ ಒಡ್ಡಿ ಯುವಕನ ಮೇಲೆ ಗ್ಯಾಂಗ್​ರೇಪ್​!

    ಮಧ್ಯರಾತ್ರಿಯಲ್ಲಿ ನೀರು ಕುಡಿಯಲೆದ್ದಿದ್ದ ಅಮ್ಮನಿಗಾಯ್ತು ದಿಗಿಲು​; ರಾತ್ರಿ ಮಲಗಿದ್ದ ಮಗ-ಸೊಸೆ ಅಲ್ಲಿರಲಿಲ್ಲ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts