More

    ಅನಿಮಲ್ ಚಿತ್ರದ​ ಯಶಸ್ಸು; ತಿರುಪತಿ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದ ಸಂದೀಪ್ ರೆಡ್ಡಿ ವಂಗಾ

    ತಿರುಪತಿ: ಕಳೆದ ವರ್ಷದ ಅಂತ್ಯದಲ್ಲಿ ​ ನಟ ರಣಬೀರ್​ ಕಪೂರ್​, ಸಂದೀಪ್​ ರೆಡ್ಡಿ ವಂಗಾ ಕಂಬಿನೇಷನ್​ನ ಅನಿಮಲ್​ ಚಿತ್ರ ಬಾಕ್ಸ್​ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ನಿರ್ಮಾಪಕರ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದ್ದ ಚಿತ್ರವು ಬ್ಲಾಕ್​ಬಸ್ಟರ್​ ಎನ್ನಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

    ಡಿಸೆಂಬರ್​ 01ರಂದು ಬಿಡುಗಡೆಯಾದ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್​ ದೊರೆತ್ತಿದ್ದು, ಹಲವೆಡೆ ಹೌಸ್​ಫುಲ್​ ಪ್ರದರ್ಶನ ಕಂಡಿತ್ತು. ಇತ್ತ ಅನಿಮಲ್​ ಚಿತ್ರವನ್ನು ಹಲವಾರು ಮಂದಿ ಹಾಡಿ ಹೊಗಳಿದರೆ ಕೆಲವರು ಇದನ್ನು ಡಿಸಾಸ್ಟರ್​ ಎಂದು ತೆಗಳಿದ್ದಾರೆ.ಇನ್ನು ಅನಿಮಲ್​ನಂತಹ ಚಿತ್ರಗಳ ಸಕ್ಸಸ್​ ಬಹಳ ಡೇಂಜರಸ್​ ಎಂದು ಬಾಲಿವುಡ್​ನ ಹಿರಿಯ ವಿಮರ್ಶಕರು ಅಭಿಪ್ರಾಯಪಟ್ಟಿದ್ದರು.

    ಇದನ್ನೂ ಓದಿ: ಸಂದೇಶ್​ಖಾಲಿ ಪ್ರಕರಣ; ಪ್ರಧಾನಿ ಮೋದಿ ಭೇಟಿ ಬಳಿಕ ಸಂತ್ರಸ್ತರು ಹೇಳಿದ್ದೇನು?

    ಈ ಚಿತ್ರದ ಯಶಸ್ಸಿನ ಬಳಿಕ ಸಾಲು ಸಾಲು ಆಫರ್​ ಗಿಟ್ಟಿಸಿಕೊಂಡಿದ್ದ ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ ಬುಧವಾರ ತಿರುಪತಿ ತಿಮ್ಮಪ್ಪನಿಗೆ ದರ್ಶನ ಪಡೆದು ಹರಕೆ ತೀರಿಸಿದ್ದಾರೆ. ತಿರುಮಲದಲ್ಲಿರುವ ಸೆಲೆಬ್ರಿಟಿ ಸ್ಪಾಟ್​ನಲ್ಲಿ ಕ್ಯಾಮರಾಗಳಿಗೆ ಪೋಸ್​ ನೀಡಿದ ಸಂದೀಪ್​ ಬಳಿಕ ಕೆಲಕಾಲ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ.

    ಈ ವೇಳೆ ಅಭಿಮಾನಿಯೊಬ್ಬರು ಮುಂದಿನ ಸಿನಿಮಾ ಯಾವುದು ಎಂದು ಕೇಳಿದಾಗ ಯಂಗ್​ ರೆಬೆಲ್​ ಸ್ಟಾರ್​ ಪ್ರಭಾಸ್​ ಅವರೊಂದಿಗೆ ಸ್ಪರಿಟ್​ ಚಿತ್ರ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಅರ್ಜುನ್​ ರೆಡ್ಡಿ ಹಿಂದಿ ರೀಮೇಕ್ ಕಬೀರ್ ಸಿಂಗ್ ಮೂಲಕ ಸಂದೀಪ್ ರೆಡ್ಡಿ ವಂಗಾ ಬಾಲಿವುಡ್​ ಪ್ರವೇಶಿಸಿದ್ದರು. ಕಳೆದ ವರ್ಷ ಅನಿಮಲ್ ಸಿನಿಮಾವನ್ನು ನಿರ್ದೇಶನ ಮಾಡುವ ಮೂಲಕ ಬಿಗ್ ಹಿಟ್ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts