ಬೆಂಗಳೂರು: ಕನ್ನಡದ ಹಿರಿಯ ಸಾಹಿತಿ ಡಾ. ಕೆ.ಎಸ್. ನಿಸಾರ್ ಅಹಮ್ಮದ್ (84) ನಿಧನದ ಬೆನ್ನಲ್ಲೇ ಸ್ಯಾಂಡಲ್ವುಡ್ನ ಹಲವು ಕಲಾವಿದರು ಅಗಲಿದ ಕವಿಗೆ ನಮನ ಸಲ್ಲಿಸಿದ್ದಾರೆ. ನಟರಾದ ಪುನೀತ್ ರಾಜ್ ಕುಮಾರ್, ಉಪೇಂದ್ರ, ಪ್ರೇಮ್, ಸತೀಶ್ ನೀನಾಸಂ, ವಸಿಷ್ಠ ಸಿಂಹ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ. ನಿರ್ದೇಶಕರಾದ ಪವನ್ ಒಡೆಯರ್, ಸಿಂಪಲ್ ಸುನಿ ನಿತ್ಯೋತ್ಸವ ಕವಿಯನ್ನು ನೆನೆದಿದ್ದಾರೆ.
ನಟ ಉಪೇಂದ್ರ ಟ್ವಿಟ್ ಮೂಲಕ ‘ಕನ್ನಡದ ಹಿರಿಯ ಸಾಹಿತಿ, ನಿತ್ಯೋತ್ಸವದ ಕವಿ, ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಕನ್ನಡ ಪರ ಚಿಂತಕ, ನಾಡೋಜ ಶ್ರೀ ಕೆ ಎಸ್ ನಿಸಾರ್ ಅಹಮ್ಮದ್ ರವರ ಅಗಲಿಕೆ ಕನ್ನಡ ಸಾಹಿತ್ಯ ಪ್ರಪಂಚಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬವರ್ಗ, ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿ ಲಭಿಸಲಿ. ಓಂ ಶಾಂತಿ…’ ಎಂದು ಸ್ಮರಿಸಿದ್ದಾರೆ.
ಪುನೀತ್ ರಾಜ್ಕುಮಾರ್ ‘ನಿತ್ಯೋತ್ಸವ ಸಾಲುಗಳು ನೀಡಿದ ಕನ್ನಡದ ಮಹಾನ್ ಕವಿ ಪದ್ಮಶ್ರೀ ಕೆ. ಎಸ್. ನಿಸಾರ್ ಅಹಮ್ಮದ್ ಸರ್ ಇನ್ನಿಲ್ಲ! ಸಾಹಿತ್ಯಲೋಕಕ್ಕೆ ಅವರ ಕೊಡುಗೆ ಅಜರಾಮರ!’ ಎಂದಿದ್ದಾರೆ.
ಇದನ್ನೂ ಓದಿ: ನಿತ್ಯೋತ್ಸವ ಕವಿ ನಿಸಾರ್ ಅಹಮದ್ ನಿಧನದಿಂದ ಕನ್ನಡ ಸಾರಸ್ವತ ಲೋಕದ ಕೊಂಡಿಯೊಂದು ಕಳಚಿತು: ಸಿಎಂ ಯಡಿಯೂರಪ್ಪ
ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ನಿವಾಸದಲ್ಲಿ ಭಾನುವಾರ ಮಧ್ಯಾಹ್ನ ಕೊನೆಯುಸಿರೆಳೆದ ನಿಸಾರ್, ವಯಸ್ಸಹಜ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಆರೋಗ್ಯದಲ್ಲಿ ಚೇತರಿಕೆ ಕಂಡುಬಾರದೆ, ನಿಧನರಾದರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ನಿತ್ಯೋತ್ಸವ ಕವಿ ಎಂದೇ ಅವರು ಕನ್ನಡ ಸಾರಸ್ವತ ಲೋಕದಲ್ಲಿ ಪ್ರಖ್ಯಾತರಾಗಿದ್ದರು. ಅವರು ಫೆ.5 1936ರಂದು ದೇವನಹಳ್ಳಿಯಲ್ಲಿ ಜನಿಸಿದ್ದರು.
ಕನ್ನಡದ ಹಿರಿಯ ಸಾಹಿತಿ, ನಿತ್ಯೋತ್ಸವದ ಕವಿ, ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಕನ್ನಡ ಪರ ಚಿಂತಕ, ನಾಡೋಜ ಶ್ರೀ ಕೆ ಎಸ್ ನಿಸಾರ್ ಅಹಮದ್ ರವರ ಅಗಲಿಕೆ ಕನ್ನಡ ಸಾಹಿತ್ಯ ಪ್ರಪಂಚಕ್ಕೆ ತುಂಬಲಾರದ ನಷ್ಟ.
ಅವರ ಕುಟುಂಬವರ್ಗ, ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿ ಲಭಿಸಲಿ. ಓಂ ಶಾಂತಿ…#ನಿಸಾರ್_ಅಹಮದ್ #ksnisarahamad #kannada pic.twitter.com/7Y4OVyesKI
— Upendra (@nimmaupendra) May 3, 2020
"ನಿತ್ಯೋತ್ಸವ ಸಾಲುಗಳು" ನೀಡಿದ ಕನ್ನಡದ ಮಹಾನ್ ಕವಿ ಪದ್ಮಶ್ರೀ ಕೆ. ಎಸ್. ನಿಸಾರ್ ಅಹಮದ್ ಸರ್ ಇನ್ನಿಲ್ಲ! ಸಾಹಿತ್ಯಲೋಕಕ್ಕೆ ಅವರ ಕೊಡುಗೆ ಅಜರಾಮರ!
— Puneeth Rajkumar (@PuneethRajkumar) May 3, 2020
ನಿತ್ಯೋತ್ಸವ ಕವಿ. K. S.ನಿಸಾರ್ ಅಹ್ಮದ್ ಸರ್ ನಮ್ಮೆಲ್ಲರನ್ನೂ ಅಗಲಿದ್ದಾರೆ ಎಂಬುದು ಬಹಳ ನೋವ್ವಿನ ಸಂಗತಿ. ನೀವು ರಚಿಸಿದ. ಕಚೇರಿ, ಪೇಟೆ, ಬಸ್ಟಾಪ್ಪು, ಎಲ್ಲೆಲ್ಲೂ ಈತನೇ. ಹಾಡನ್ನು ಹಲವಾರು ಬಾರೆ ಹಾಡಿ. ಮೊದಲ ಸ್ಥಾನ ಪಡೆದಿದ್ದೆ. ಕನ್ನಡ ಸಾಹಿತ್ಯಕ್ಕೆ ನಿಮ್ಮ ಕೊಡುಗೆ ಅಪಾರ.🙏🙏 #RipKSNissarahmedsir pic.twitter.com/ZDGGkZHD1O
— Pavan Wadeyar (@PavanWadeyar) May 3, 2020
ಕನ್ನಡೋತ್ಸವವನ್ನು ನಿತ್ಯೋತ್ಸವವನ್ನಾಗಿಸಿದ ಮಹಾಕವಿ ಕೆ.ಎಸ್.ನಿಸಾರ್ ಅಹಮ್ಮದ್ ನಮ್ಮನ್ನಗಲಿದ್ದಾರೆ.. ಅವರ ಆತ್ಮಕ್ಕೆ ಶಾಂತಿ ಕೋರೋಣ..😥
ಓಂ ಶಾಂತಿ🙏🏼 pic.twitter.com/EYffjUUSbE— Vasishta N Simha (@ImSimhaa) May 3, 2020
ಹಿರಿಯ ಕವಿ ಪ್ರೊಫೆಸರ್ ಕೆ. ಎಸ್. ನಿಸಾರ್ ಅಹಮದ್ ಅವರಿಗೆ ಅಂತಿಮ ನಮನಗಳು. 💐💐💐💐 pic.twitter.com/4yLC9z0a6T
— Sathish Ninasam (@SathishNinasam) May 3, 2020
ಪದ್ಮಶ್ರೀ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾಗಿದ್ದ "ನಿತ್ಯೋತ್ಸವ" ಕವಿ ಕೆ. ಎಸ್. ನಿಸಾರ್ ಅಹಮದ್ ಅವರು ನಮ್ಮೆಲ್ಲರನ್ನೂ ಅಗಲಿದ್ದಾರೆ. ಅವರ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ಹಾಗೂ ಕನ್ನಡ ನಾಡಿಗೆ ತುಂಬಲಾರದ ನಷ್ಟ..
ಮತ್ತೆ ಹುಟ್ಟಿ ಬನ್ನಿ ಸರ್.. #RIP pic.twitter.com/qywO21IzJX— Prem Nenapirali (@StylishstarPrem) May 3, 2020