ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಮಾಫಿಯಾ ನಂಟಿನ ಪ್ರಕರಣದಡಿ ನಿನ್ನೆ(ಶುಕ್ರವಾರ) ಬೆಳಗ್ಗೆ ಸಿಸಿಬಿ ಪೊಲೀಸರ ಬಲೆಗೆ ಬಿದ್ದ ‘ಮಾದಕ’ ನಟಿ ರಾಗಿಣಿ ದ್ವಿವೇದಿಗೆ ರಾತ್ರಿಯಿಡೀ ಸೊಳ್ಳೆಗಳ ಕಾಟವಿತ್ತಂತೆ. ಬಂಧನಕ್ಕೊಳಪಟ್ಟ ಮೊದಲ ದಿನದ ರಾತ್ರಿಯನ್ನು ಹೊಸೂರು ರಸ್ತೆಯ ಮಹಿಳಾ ಸಾಂತ್ವನ ಕೇಂದ್ರದಲ್ಲೇ ಕಳೆದ ‘ತುಪ್ಪ’ದ ಬೆಡಗಿಗೆ ಯಾವುದೇ ವಿಐಪಿ ಟ್ರೀಟ್ಮೆಂಟ್ ಸಿಕ್ಕಿಲ್ಲ.
ಕೇಂದ್ರದ ಸುತ್ತಲೂ ಪೊಲೀಸ್ ಸರ್ಪಗಾವಲಿದ್ದು, ಮೂರು ಜನ ಇರಬಹುದಾದ ಕೋಣೆಯಲ್ಲಿ ಸಾಮಾನ್ಯ ಆರೋಪಿಗಳ ರೀತಿಯಲ್ಲಿ ರಾಗಿಣಿ ರಾತ್ರಿ ಕಳೆದರು. ನಟಿಯ ಭದ್ರತೆಗಾಗಿ ಇಬ್ಬರು ಮಹಿಳಾ ಪೊಲೀಸ್ ಸಿಬ್ಬಂದಿ ಇದ್ದರು. ತಡರಾತ್ರಿ 12.15ರ ಸುಮಾರಿಗೆ ಪೊಲೀಸರು ಈ ಕೇಂದ್ರಕ್ಕೆ ರಾಗಿಣಿಯನ್ನು ಕರೆತರುತ್ತಿದ್ದಂತೆ ಸಾಂತ್ವನ ಕೇಂದ್ರದ ಸಿಬ್ಬಂದಿ ನಟಿಗೆ ಅನ್ನ, ಸಾಂಬಾರ್, ಚಪಾತಿ, ಫಲ್ಯ, ಹಪ್ಪಳ ಕೊಟ್ಟರು. ಊಟವನ್ನೂ ಸರಿಯಾಗಿ ಮಾಡದ ನಟಿ, ಸ್ವಲ್ಪ ಅನ್ನ-ಸಾಂಬಾರ್ ಮಾತ್ರ ತಿಂದರು. ಇದನ್ನೂ ಓದಿರಿ‘ಮಾದಕ’ ನಟಿ ರಾಗಿಣಿ ಗೆಳೆಯ ರವಿಶಂಕರ್ಗೆ ಮತ್ತೊಂದು ಆಘಾತ
ತಡರಾತ್ರಿ 2ಕ್ಕೆ ಮಲಗಿ 6ಗಂಟೆಗೆ ಎದ್ದರು. ನಾಲ್ಕು ಗಂಟೆ ಮಾತ್ರ ನಿದ್ದೆ ಮಾಡಿದ ರಾಗಿಣಿ, ಕೋಣೆಯಿಂದ ಹೊರಬಂದು ಸೊಳ್ಳೆ ಕಾಟದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಶುಕ್ರವಾರ ಬೆಳಗ್ಗೆ ಸಿಸಿಬಿ ಪೊಲೀಸರ ಜತೆ ಬಂದಾಗ ಧರಿಸಿದ್ದ ಸೀರೆಯಲ್ಲೇ ರಾಗಿಣಿ ಇಡೀ ರಾತ್ರಿ ಕಳೆದರು. ಅವರು ಯಾವುದೇ ತರಹದ ಲಗೇಜ್ ತಂದಿರಲಿಲ್ಲ.
ಇನ್ನು ರಾಗಿಣಿಯ ಬಂಧನ ವಿಚಾರ ಹೊರಬೀಳುತ್ತಿದ್ದಂತೆ ಮಗಳನ್ನು ಭೇಟಿ ಮಾಡಲು ಮಹಿಳಾ ಸಾಂತ್ವನ ಕೇಂದ್ರ ಬಳಿಗೆ ಮಧ್ಯರಾತ್ರಿಯೇ ತಾಯಿ ರೋಹಿಣಿ ದ್ವಿವೇದಿ, ತಂದೆ ರಾಕೇಶ್ ದ್ವಿವೇದಿ ಬಂದಿದ್ದರು. ರಾಗಿಣಿಗೆ ಕೊಡಲೆಂದು ತಂದಿದ್ದ ಊಟ, ನೀರಿನ ಬಾಟಲಿ ಹಾಗೂ ಬಟ್ಟೆಯ ಜತೆಗೆ ಕೇಂದ್ರದ ಗೇಟ್ ಬಳಿಯೇ ಕೆಲಕಾಲ ಕಾಯುತ್ತ ನಿಂತಿದ್ದರು. ಕೊನೆಗೆ ಊಟ, ಬಟ್ಟೆ ವಾಪಸ್ ತೆಗೆದುಕೊಂಡು ಮನೆಗೆ ಹೋದರು. ಬೆಳಗ್ಗೆ ಎದ್ದ ನಂತರ ಮಹಿಳಾ ಸಾಂತ್ವನ ಕೇಂದ್ರದ ಆವರಣದಲ್ಲೇ ರಾಗಿಣಿ ವಾಕಿಂಗ್ ಮಾಡಿದರು. (ದಿಗ್ವಿಜಯ ನ್ಯೂಸ್)
ರೈತನ ಜಮೀನು ಪಡೆದು ಬರೋಬ್ಬರಿ ನಾಲ್ಕೂವರೆ ಎಕರೆಯಲ್ಲಿ ಗಾಂಜಾ ಬೆಳೆದ ದುಷ್ಕರ್ಮಿ