ಲಾಕ್ಡೌನ್ ಶುರುವಾದ ಮೇಲೆ ಸ್ಯಾಂಡಲ್ವುಡ್ ನಟಿ ಹರಿಪ್ರಿಯಾ ಬ್ಲಾಗ್ ಬರವಣಿಗೆಯಲ್ಲಿ ತಲ್ಲೀನರಾಗಿದ್ದಾರೆ. ನಿತ್ಯ ಹೊಸ ಹೊಸ ಟಾಪಿಕ್ ತೆಗೆದುಕೊಂಡು, ಜೀವನದ ಹಳೇ ಘಟನೆಗಳನ್ನು ಮೆಲುಕು ಹಾಕುತ್ತಿದ್ದಾರವರು. ಈಗಾಗಲೇ ಹರಿಪ್ರಿಯಾ ಅವರ ಬಗ್ಗೆ ಗೊತ್ತಿರದ ವಿಚಾರಗಳನ್ನು ಸ್ವತಃ ಅವರೇ ಬೇಬ್ ನೋಸ್ ಬ್ಲಾಗ್ ಮೂಲಕ ಅಕ್ಷರ ರೂಪದಲ್ಲಿ ಹೇಳಿದ್ದಾರೆ. ಬಾಲ್ಯದ ದಿನಗಳು, ಶೂಟಿಂಗ್ ಅನುಭವ ಹೀಗೆ ಕಣ್ಣಿಗೆ ಕಂಡಿದ್ದು, ಕಿವಿಗೆ ಕೇಳಿಸಿದ್ದನ್ನೆಲ್ಲ ಸ್ಟೋರ್ ಮಾಡುತ್ತ ಹೋಗುತ್ತಿದ್ದಾರೆ. ಇದೀಗ ಮತ್ತೊಂದು ಕೌತುಕದ ವಿಚಾರವನ್ನು ಹೊತ್ತು ಆಗಮಿಸಿದ್ದಾರೆ. ಏನದು? ಅವರದೇ ಅಕ್ಷರರೂಪದಲ್ಲಿ ಇಲ್ಲಿದೆ ಓದಿ.
ಇದನ್ನೂ ಓದಿ: ವರ್ಕ್ ಫ್ರಂ ಹೋಮ್ ಕೇಳಿದ್ದೀರಿ, ಇದೀಗ ಶೂಟ್ಸ್ ಫ್ರಂ ಹೋಮ್ ಶುರು…
‘ಈ ಟೈಮಲ್ಲಿ ಸಾಯೋ ಮಾತ್ ಬೇಕಾ?”, ಯಾರಾದರೂ ಸಾವಿನ ಬಗ್ಗೆ ಮಾತಾಡ್ದಾಗ ಸಡನ್ ಆಗಿ ಈ ಥರದ ಪ್ರಶ್ನೆ ಎದುರಾಗುತ್ತೆ. ಈಗ ನಾನು ಮಾತಾಡೋಕೆ ಐ ಮೀನ್ ಬರೆಯೋಕೆ ಹೊರಟಿರೋದು ಕೂಡ ಸಾವಿನ ಮಾತೇ. ಹಹಹ.. ಹಾಗಂತ “ಈ ಟೈಮಲ್ಲಿ ಸಾಯೋ ಮಾತ್ ಬೇಕಾ?” ಅಂತ ನೀವ್ ಕೇಳ್ಬೇಡಿ. ಯಾಕಂದ್ರೆ ನಾನ್ ಮಾತಾಡ್ತಿರೋದು ರಿಯಲ್ ಸಾವಲ್ಲ, ಆ್ಯಕ್ಟಿಂಗ್ ಬಗ್ಗೆ.
ಸಾವೆಂದರೆ ಕೊನೆ, ಆದರೆ ನನ್ನ ಪಾಲಿಗೆ ಅದೇ ಶುರು. ಅಂದ್ರೆ ನಾನು ನನ್ನ ಮೊದಲ ಕೆಲವು ಸಿನಿಮಾಗಳಲ್ಲೇ ಸತ್ತಿದ್ದೆ. ನಾನೊಂಥರ ಸತ್ತು ಸತ್ತು ಬದುಕಿರೋಳು, ಹಹಹ. ಮಜಾ ಗೊತ್ತಾ? ನಮ್ಗೆ ಕಲಾವಿದರಿಗೆ ಡಿಫರೆಂಟ್ ಡಿಫರೆಂಟಾಗಿ ಸಾಯೋ ಚಾನ್ಸ್ ಸಿಗುತ್ತೆ. ನಡೀತ ನಡೀತ , ನಿಂತಾಗ, ಕುಂತಾಗ ಅಥವಾ ಮಲಗಿದಲ್ಲೇ ಸಾವು. ಚೆನ್ನಾಗ್ ಸತ್ರೆ ಚಪ್ಪಾಳೆ ಬೇರೆ ಹೊಡಿತಾರೆ.. ಹೀಗೆ ಸೀನ್ಗೆ ತಕ್ಕ ಹಾಗೆ ನಾನಾ ಥರದಲ್ಲಿ, ಡಿಫರೆಂಟ್ ಕಾಸ್ಟ್ಯೂಮ್-ಮೇಕಪ್ನಲ್ಲಿ ಕಲರ್ ಕಲರ್ಫುಲ್ ಆಗಿ ಸಾಯ್ತೀವಿ. ಸತ್ತು ನಿಮ್ ಮನಸಲ್ಲಿ ಉಳಿತೀವಿ. ಹಾಗೆ ಸತ್ ಮೇಲೂ ಮತ್ತೆ ಬದುಕೋಕ್ ಅವಕಾಶ ಇರೋದು ನಮಗೆ ಮಾತ್ರ. ಅದೆಂಥ ಸಾವಿನ ಸೀನೇ ಆದ್ರೂ ‘ಕಟ್’ ಅಂತಿದ್ ಹಾಗೆ ಥಟ್ ಅಂತ ಎದ್ದು ಬಿಡ್ತೀವಿ..
ಇದನ್ನೂ ಓದಿ: ಮೌಂಟನ್ ಮ್ಯಾನ್ ದಶರಥ ಮಾಂಜಿಗೂ ಸೋನು ಸೂದ್ ಅಭಯ!
ನನ್ನ ಒಂದು ಸಿನಿಮಾದಲ್ಲಿ ಲವರ್ಸ್ ಅಂದ್ರೆ ಹೀರೋ- ಹೀರೋಯಿನ್ ಇಬ್ರೂ ಸತ್ತಿರ್ತಾರೆ. ಮೆರವಣಿಗೆ ತಗೊಂಡು ಹೋಗ್ತಿರ್ತಾರೆ. ಆಗ ಮಧ್ಯಮಧ್ಯ ಗುಡುಗು-ಸಿಡಿಲು-ಮಿಂಚಿನ ಇಫೆಕ್ಟ್ಗೆ ಕೈ ಕೈ ಟಚ್ ಆಗಿ ಮಳೆ ಬರುತ್ತೆ.. ಸದ್ಯ ಕಣ್ ಮುಚ್ಚಿ ಸತ್ತಿದ್ದೆ. ಆದ್ರೆ ಮಳೆ ನೀರಿನ ಹನಿ ಬೀಳ್ತಿದ್ರೂ ಕಣ್ ಒಂಚೂರೂ ಶೇಕ್ ಆಗದಂತೆ ಇರಬೇಕಿತ್ತು… ಮೂಗಲ್ಲಿ ಹತ್ತಿ ಬೇರೆ! ಎಲ್ಲಿ ಒದ್ದೆ ಆದ ಹತ್ತಿ ಜಾರಿ ಮೂಗೊಳಗೆ ಹೋಗಿಬಿಡುತ್ತೋ ಅಂತ ಭಯ. ಥೂ.. ಸಾಯೋದ್ ಇಷ್ಟ್ ಕಷ್ಟನಾ ಅಂತ ಅನಿಸಿತ್ತು ಆಗ, ಹಹಹ.
ಕಣ್ ಮುಚ್ಕೊಂಡ್ ಸಾಯೋ ಕಥೆನೇ ಹೀಗಾದ್ರೆ, ಇನ್ನು ಕಣ್ ತೆರ್ಕೊಂಡೇ ಸಾಯೋದಂತೂ ವ್ಯಥೆನೇ. “ಕೊರಗ್ಲಿಲ್ಲ, ನರಳ್ಲಿಲ್ಲ.. ಬಿಟ್ ಕಣ್ ಬಿಟ್ಟ ಹಾಗೇ ಇತ್ತು. ಎಂಥ ಒಳ್ಳೇ ಸಾವು!” ಅಂತ ಅದೆಷ್ಟೋ ಜನ ಹೇಳಿದ್ನ ಕೇಳಿದ್ದೆ. ಆದ್ರೆ ಕಣ್ ಬಿಟ್ಕೊಂಡೇ ಸಾಯೋ ಕಷ್ಟ ಏನ್ ಗೊತ್ತಾ!?. ಸುತ್ಲೂ ಗುಂಪಲ್ಲಿ ಯಾರಾದ್ರೂ ತಮಾಷೆ ಮಾಡೋದ್ ಕಾಣಿಸಿದ್ರೂ ಅಥವಾ ಶಾಟ್ ಮಧ್ಯದಲ್ಲಿ ಧೂಳು ಬಂದ್ರೂ.. ಏನೇ ಆದ್ರೂ ಕಟ್ ಅನ್ನೋವರ್ಗೂ ಕಣ್ ಮಿಟುಕಿಸ್ದೇ ಇರ್ಬೇಕು. ಇಲ್ಲಂದ್ರೆ ‘ಒನ್ ಮೋರ್’ ಆಗುತ್ತೆ. ಹೀಗೆ ತೆಲುಗಿನಲ್ಲಿ ನಾನು ಆ್ಯಕ್ಟ್ ಮಾಡಿದ್ದ “ಜಯಸಿಂಹ” ಸಿನಿಮಾದಲ್ಲಿ ಕಣ್ ಬಿಟ್ಕೊಂಡೇ ಸಾಯೋ ಸೀನ್ ಇತ್ತು. ಒಂದು ದೊಡ್ಡ ಶಾಟ್, ಆ ಸೀನಲ್ಲಿ ಆ್ಯಕ್ಟ್ ಮಾಡ್ತಿದ್ದಾಗ ನನಗಾಗ್ತಿದ್ದ ಕಷ್ಟನಾ ಡೈರೆಕ್ಟರ್ ಕೆ.ಎಸ್.ರವಿಕುಮಾರ್ ಸರ್ ಗಮನಿಸಿದ್ರು. ಕಲಾವಿದರು ಕಷ್ಟಪಡೋದ್ನ ಅಬ್ಸರ್ವ್ ಮಾಡಿ ಸಜೆಷನ್ ಕೊಟ್ಟು ನಮ್ ಕೆಲಸ ಸುಲಭ ಮಾಡ್ತಾರಲ್ವ ಅವ್ರು ನಿಜಕ್ಕೂ ಗ್ರೇಟ್ ಡೈರೆಕ್ಟರ್ಸ್. “ನೋಡು.. ಆ್ಯಕ್ಷನ್ ಅನ್ನೋ ಮುಂಚೆ ಒಮ್ಮೆ ಡೀಪಾಗಿ ಬ್ರೀಥ್ ಇನ್ ಮಾಡ್ಕೊ, ನಂತ್ರ ಕಟ್ ಅನ್ನೋವರ್ಗೂ ಹಾಗೇ ಅರ್ಧತೆರೆದ ಬಾಯಲ್ಲೇ ನಿಧಾನ ಬ್ರೀಥ್ ಔಟ್ ಮಾಡ್ತಾ ಇರು..” ಅಂದ್ರು. ಹಾಗೇ ಮಾಡ್ದೆ, ಸೀನ್ ಸೂಪರ್ ಆಗಿ ಬಂತು. (ಆದ್ರೆ ಇದನ್ನ ಪ್ರಾಪರ್ ಡೈರೆಕ್ಷನ್ ಇಲ್ದೆ ಯಾರಾದ್ರೂ ಒಂಟಿಯಾಗಿ ಮನೆಯಲ್ಲಿ ಪ್ರಯತ್ನ ಮಾಡೋದು ಡೇಂಜರಸ್) ಎಲ್ರಿಗೂ ಬದುಕೋಕೆ ಹೇಳ್ಕೊಟ್ಟ ಗುರು ಇರ್ತಾರೆ, ಆದ್ರೆ ಅವ್ರು ನಂಗೆ ಸಾಯೋಕ್ ಹೇಳ್ಕೊಟ್ಟ ಗುರು ಕೂಡ, ಹಹಹ.. ಆಮೇಲೆ ‘ರಿಕ್ಕಿ’ ಸಿನಿಮಾದಲ್ಲೂ ಹಾಗೇ ಕಣ್ ಬಿಟ್ಕೊಂಡೇ ಈಸಿಯಾಗಿ ಸತ್ತಿದ್ದೆ. ಅದ್ಕೆ ಸಾವಿನ್ ಬಗ್ಗೆ ಈಗ ಈಸಿಯಾಗಿ ಇಷ್ಟೆಲ್ಲ ಮಾತಾಡ್ದೆ.
ಇದನ್ನೂ ಓದಿ: VIDEO| ನಾನು ಒಳ್ಳೆಯ ಹುಡುಗಿಯಲ್ಲ, ನನಗೆ ದಯಾಮರಣ ಪಾಲಿಸಿ: ನಟಿ ಜಯಶ್ರೀ ರಾಮಯ್ಯ ಅಳಲು
ಯೆಸ್.. ಇಷ್ಟೊತ್ ನಾನು ಮಾತಾಡಿದ್ದು ರೀಲ್ ಸಾವು, ಅಂದ್ರೆ ಸಾಯೋ ಆ್ಯಕ್ಟಿಂಗ್ ಬಗ್ಗೆನೇ ಆಗಿದ್ರೂ ಎಷ್ಟೋ ಜನಕ್ಕೆ ಈ ಸಾವಿನ ಮಾತು ಇಷ್ಟ ಆಗದೇ ಇರ್ಬೋದು. ನಂಗೂ ಅಷ್ಟೇ, ಕೆಲವೊಂದ್ಸಲ ಹಾಗೇ ಅನ್ಸುತ್ತೆ. ಇದನ್ನು ಓದಿದ್ ಅಮ್ಮ ಕೂಡ ಕೇಳಿದ್ ಇದ್ನೇ.. “ಈ ಟೈಮಲ್ಲಿ ಸಾಯೋ ಮಾತ್ ಬೇಕಾ?
ಬಿಗ್ಬಾಸ್ ಮನೆ ಪ್ರವೇಶಿಸಲು ಭಾರಿ ಸಂಭಾವನೆ ಪಡೆದ ಹಾಟ್ ಬ್ಯೂಟಿ ಪೂನಂ ಬಜ್ವಾ!