More

    ಬೀದಿಬದಿ ವ್ಯಾಪಾರಿಗಳ ಹೃದಯ ಶ್ರೀಮಂತಿಕೆ ತಿಳಿಸಿದ ಅಮೂಲ್ಯಾ ಪತಿ ಜಗದೀಶ್!

    ಬೆಂಗಳೂರು: ಸ್ಯಾಂಡಲ್​ವುಡ್ ಮುದ್ದು ಬೆಡಗಿ ನಟಿ ಅಮೂಲ್ಯಾ ಅವರು ಮಾರ್ಚ್ 2 ರಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿ ಕೇಳಿ ಅವರ ಕುಟುಂಬದವರು, ಸ್ನೇಹಿತರು, ಆಪ್ತರು, ಅಭಿಮಾನಿಗಳು ಖುಷಿಪಟ್ಟರು. ಅಂದಹಾಗೆ, ಈ ಸಂತಸದ ಸುದ್ದಿಯನ್ನು ನಟಿ ಅಮೂಲ್ಯಾ ಪತಿ ಜಗದೀಶ್ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಇನ್ನು, ಆಸ್ಪತ್ರೆಯಿಂದ ಒಂದು ದಿನ ಹೊರಗೆ ಬಂದ ಜಗದೀಶ್ ಅವರಿಗೆ ಅಚ್ಚರಿ ಒಂದು ಕಾದಿತ್ತಂತೆ. ಹೌದು, ರಸ್ತೆ ಬದಿಯಲ್ಲಿ ಬಲೂನ್ ಮಾರುವ ವ್ಯಕ್ತಿ ರವಿ ಜಗದೀಶ್ ಅವರನ್ನು ಪ್ರೀತಿಯಿಂದ ಮಾತನಾಡಿಸಿದ್ದಾರೆ. ಅಷ್ಟೇ ಅಲ್ಲ, ಅಮೂಲ್ಯಾ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಈ ಬಗ್ಗೆ ಜಗದೀಶ್ ಅವರ ಇನ್​ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ. ‘ಸುಸಜ್ಜಿತ ಶಾಪ್‌ಗೂ, ಫುಟ್‌ಪಾತ್‌ನಲ್ಲಿ ಮಾರುವ ಪುಟ್ಟ ಅಂಗಡಿಗೂ ಎಷ್ಟೊಂದು ವ್ಯತ್ಯಾಸವಿದೆ ಎಂದು ಮನಸ್ಸಿಗೆ ಅನ್ನಿಸಿತು. ಕೆಲವೊಮ್ಮೆ, ದುಬಾರಿ ಬೆಲೆ ತೆತ್ತು ಕೊಂಡುಕೊಳ್ಳುವ ಶಾಪ್‌ನಲ್ಲಿ ಹೃದಯ ಶ್ರೀಮಂತಿಕೆಯೇ ಬಹಳ ಕಡಿಮೆ ಎಂದೆನಿಸಬಹುದು. ಆದರೆ, ಕಡಿಮೆ ಬೆಲೆ ಕೊಟ್ಟು ಸಣ್ಣ ಅಂಗಡಿ ಅಥವಾ ಫುಟ್‌ಪಾತ್‌ನಲ್ಲಿ ಏನನ್ನಾದರೂ ತೆಗೆದುಕೊಂಡರೆ ಅವರಲ್ಲಿ ಹೆಚ್ಚಿನ ಪ್ರೀತಿ ವಿಶ್ವಾಸ ನಮಗೆ ತಿಳಿಯುತ್ತೆ”, ಎಂದಿದ್ದಾರೆ ಜಗದೀಶ್.
    ಶಿವರಾತ್ರಿಯ ದಿನದಂದು ಜಯನಗರದ ಆಸ್ಪತ್ರೆಯ ಬಲಭಾಗದ ಫುಟ್‌ಪಾತ್‌ನಲ್ಲಿ ಬಲೂನ್‌ ಮತ್ತು ಆಟಿಕೆಗಳನ್ನು ಮಾರುತ್ತಿದ್ದ ಕಾಲುಗಳಿಲ್ಲದ ವ್ಯಕ್ತಿ ರವಿ ಎಂಬುವರು ಅಮೂಲ್ಯ ಮೇಡಂಗೆ ಅವಳಿ ಮಕ್ಕಳಾಗಿದ್ದು ಕೇಳಿ ತುಂಬಾ ಸಂತೋಷವಾಯ್ತು ಸರ್. ಎಲ್ಲರೂ ಚೆನ್ನಾಗಿದಾರಲ್ವಾ.? ನೀವು ಯಾವಾಗ ಹೊರಗೆ ಬರುತ್ತೀರಿ ಎಂದು ಕಾಯುತ್ತಿದ್ದೆ, ಎಂದು ಆತ್ಮೀಯವಾಗಿ ಮಾತನಾಡಿಸಿದ್ದನ್ನು ಕೇಳಿ ನನಗೆ ನಿಜಕ್ಕೂ ಆಶ್ಚರ್ಯ ಮತ್ತು ಸಂತೋಷ ಎರಡೂ ಆಯಿತು”, ಎಂದು ಹೇಳುತ್ತಾ ಒಂದು ಫೋಟೋ ಹಂಚಿಕೊಂಡಿದ್ದಾರೆ ಜಗದೀಶ್. ಇನ್ನು, ‘ಶ್ರೀಮಂತರಲ್ಲದಿದ್ದರೂ ಅವರ ಹೃದಯ ಶ್ರೀಮಂತಿಕೆ ಎಷ್ಟು ದೊಡ್ಡದಲ್ವಾ? ಕಾಲುಗಳಿಲ್ಲದಿದ್ದರೂ ಸ್ವಾಭಿಮಾನದಿಂದ ನಿತ್ಯ ತನ್ನ ಕೆಲಸ ಮಾಡಿಕೊಂಡು ಶ್ರಮವಹಿಸಿ ತನ್ನ ಜೀವನ ನಡೆಸುತ್ತಿರುವ ಆ ವ್ಯಕ್ತಿಯಿಂದ ಡಿಸ್ಚಾರ್ಜ್‌ ಆಗುವ ದಿನ ಮಕ್ಕಳಿಗಾಗಿ ಆಟಿಕೆಗಳ ರೂಪದಲ್ಲಿ ಎರಡು ಬಲೂನ್​ಅನ್ನು ತೆಗೆದುಕೊಂಡೆ. ಎಲ್ಲವೂ ಕಮರ್ಷಿಯಲ್ ಮತ್ತು ದುಬಾರಿ ಆಗಿರುವ ಈಗಿನ ಕಾಲದಲ್ಲಿ ಈ ರೀತಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ಹೃದಯವಂತರ ಬಳಿ ನಾವು ವಸ್ತುಗಳನ್ನು ಕೊಂಡುಕೊಳ್ಳುವುದರಲ್ಲಿ ತಪ್ಪೇನಿದೆ ಅಲ್ಲವೇ? ಈ ರೀತಿ ಮಾಡುವುದರಿಂದ ಅವರಿಗೂ ಸಹಾಯವಾಗುತ್ತದೆ. ಹಾಗಾಗಿ, ಎಲ್ಲರೂ ಬೀದಿ ಬಳಿ ಇರುವ ಇಂತಹ ಜನರಿಗೆ ವ್ಯಾಪಾರ ಮಾಡೋಣ”, ಎಂದು ಜಗದೀಶ್ ಅವರು ತಮ್ಮ ಪೋಸ್ಟ್​ ಮೂಲಕ ವಿನಂತಿಸಿದ್ದಾರೆ.

    ಬೀದಿಬದಿ ವ್ಯಾಪಾರಿಗಳ ಹೃದಯ ಶ್ರೀಮಂತಿಕೆ ತಿಳಿಸಿದ ಅಮೂಲ್ಯಾ ಪತಿ ಜಗದೀಶ್! ಬೀದಿಬದಿ ವ್ಯಾಪಾರಿಗಳ ಹೃದಯ ಶ್ರೀಮಂತಿಕೆ ತಿಳಿಸಿದ ಅಮೂಲ್ಯಾ ಪತಿ ಜಗದೀಶ್! ಬೀದಿಬದಿ ವ್ಯಾಪಾರಿಗಳ ಹೃದಯ ಶ್ರೀಮಂತಿಕೆ ತಿಳಿಸಿದ ಅಮೂಲ್ಯಾ ಪತಿ ಜಗದೀಶ್!

    ಇಬ್ಬರ ನಡುವೆ ಚಿರಂಜೀವಿ ಪರದಾಟ! ಪವನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾದ ಮೆಗಾಸ್ಟಾರ್

    2017ರ ಲೈಂಗಿಕ ದೌರ್ಜನ್ಯ ಕೇಸ್​: ಮೊದಲ ಬಾರಿ ಮಾಧ್ಯಮದೆದುರು ಕರಾಳ ಘಟನೆಯ ಬಗ್ಗೆ ನಟಿ ಭಾವನಾ ಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts