More

    ನಾನಿನ್ನೂ ಸತ್ತಿಲ್ಲ; ತಮ್ಮ ಅನಾರೋಗ್ಯದ ಬಗ್ಗೆ ಗಾಳಿಸುದ್ದಿ ಹಬ್ಬಿಸಿದವರ ಬಗ್ಗೆ ಸಮಂತಾ ಬೇಸರ

    ಹೈದರಾಬಾದ್​: ಮಯೋಸಿಟಿಸ್​ ಎಂಬ ಕಾಯಿಲೆಯಿಂದ ಬಳಲುತ್ತಿರುವುದಾಗಿ ಸಮಂತಾ ಇತ್ತೀಚೆಗೆ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ತಾನು ಬಹಳ ಬೇಗ ಹುಷಾರಾಗುವ ಕುರಿತು ವೈದ್ಯರು ಭರವಸೆ ನೀಡಿದ್ದಾರೆ ಎಂದು ಹೇಳಿದ್ದರು. ಆದರೂ ತಮ್ಮ ಅನಾರೋಗ್ಯದ ಬಗ್ಗೆ ಗಾಳಿಸುದ್ದಿ ಹಬ್ಬಿಸುತ್ತಿರುವವರ ಕುರಿತು ಸಮಂತಾ ಬೇಸರ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಸಂಕ್ರಾಂತಿ ಸ್ಪರ್ಧೆಯಿಂದ ಹಿಂದೆ ಸರಿದ ‘ಆದಿಪುರುಷ್​’ … ಜೂನ್​ 16ರಂದು ಬಿಡುಗಡೆ

    ಸಮಂತಾ ಅಭಿನಯದ ‘ಯಶೋದ’ ಚಿತ್ರವು ಇದೇ ಶುಕ್ರವಾರ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ಸಮಂತಾ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಬಹಳ ಎಮೋಷನಲ್​ ಆಗಿ ಮಾತನಾಡಿರುವ ಅವರು, ತಮ್ಮ ಅನಾರೋಗ್ಯ ಮತ್ತು ಆ ನಂತರದ ಹಲವು ವಿಷಯಗಳ ಕುರಿತು ಮಾತನಾಡೊದ್ದಾರೆ.

    ‘ಕೆಲವು ದಿನಗಳು ಚೆನ್ನಾಗಿರುತ್ತವೆ. ಕೆಲವು ದಿನಗಳು ಚೆನ್ನಾಗಿರುವುದಿಲ್ಲ. ಒಂದೊಂದು ದಿನವಂತೂ ಇನ್ನೊಂದು ಹೆಜ್ಜೆ ಸಹ ಮುಂದಿಡುವುದಕ್ಕೆ ಕಷ್ಟ ಎಂದನಿಸುವುದಿದೆ. ಆದರೆ, ಹಿಂದಿರುಗಿ ನೋಡಿದಾಗ, ನಾನು ಜೀವನದಲ್ಲಿ ಸಾಕಷ್ಟು ಎದುರಿಸಿದ್ದೇನೆ ಮತ್ತು ಇದನ್ನು ಸಹ ಎದುರಿಸುವ ಭರವಸೆ ನನಗಿದೆ’ ಎಂದು ಹೇಳಿಕೊಂಡಿದ್ದಾರೆ.

    ಈ ಸಂದರ್ಭದಲ್ಲಿ ತಮ್ಮ ಆರೋಗ್ಯದ ಬಗ್ಗೆ ಒಂದಿಷ್ಟು ವಿಷಯಗಳನ್ನು ಸ್ಪಷ್ಟಪಡಿಸಿದ ಅವರು, ‘ನನ್ನ ಆರೋಗ್ಯದ ಬಗ್ಗೆ ಕೆಲವು ಲೇಖನಗಳನ್ನು ಓದಿದೆ. ನನಗಿರುವ ಖಾಯಿಲೆಯು ನನ್ನ ಜೀವನವನ್ನೇ ತೆಗೆದುಬಿಡುತ್ತದೇನೋ ಎಂದು ಕೆಲವರು ಭಯ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ನಾನಿರುವ ಪರಿಸ್ಥಿತಿಯಲ್ಲಿ ಯಾವುದೇ ಸಮಸ್ಯೆ ಇಲ್ಲ, ನಾನಿನ್ನೂ ಸತ್ತಿಲ್ಲ. ಅಷ್ಟೊಂದು ಆತಂಕಪಡುವ ಅವಶ್ಯಕತೆಯೂ ಇಲ್ಲ, ನನ್ನ ಆರೋಗ್ಯದ ಬಗ್ಗೆ ಗಾಳಿಸುದ್ದಿಗಳನ್ನು ಹರಡುವುದೂ ಅವಶ್ಯಕವಿಲ್ಲ’ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ‘ತ್ರಿಬ್ಬಲ್​ ರೈಡಿಂಗ್​’, ‘ವೇದ’ ಬಿಟ್ಟರೆ ಸದ್ಯಕ್ಕೆ ಸ್ಟಾರ್​ ಚಿತ್ರಗಳೇ ಇಲ್ಲ …

    ಕಳೆದ ಎರಡು ತಿಂಗಳಿನಿಂದ ಸಮಂತಾ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಅದಕ್ಕೆ ಕಾರಣ, ಅವರಿಗೆ ಆರೋಗ್ಯದ ಸಮಸ್ಯೆ ಇದೆ ಎಂದು ಹೇಳಲಾಗಿತ್ತು. ಸಮಂತಾ ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಸಮಂತಾ ತಮಗೆ ಮಯೋಸಿಟಿಸ್​ ಎಂಬ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿದ್ದರು. ಅಷ್ಟೇ ಅಲ್ಲ, ಈ ಸಮಸ್ಯೆಯಿಂದ ಬಹಳ ಬೇಗ ಹೊರಬರುವ ವಿಶ್ವಾಸವನ್ನು ಸಹ ವ್ಯಕ್ತಪಡಿಸಿದ್ದರು.

    ಕೆಜಿಎಫ್-3 ಯಾವಾಗ?; ಮುಂದಿನ ಚಿತ್ರದ ಬಗ್ಗೆ ಗುಟ್ಟುಬಿಟ್ಟು ಕೊಡದ ಯಶ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts