ನಟಿ ಸಮಂತಾ ಮತ್ತು ನಾಗಚೈತನ್ಯ ಇಬ್ಬರು ಪ್ರೀತಿಸಿ 2017ರಲ್ಲಿ ಮದುವೆ ಆಗಿದ್ದರು. ಆದರೆ, ಯಶಸ್ವಿ ದಾಂಪತ್ಯ ನಡೆಸುವಲ್ಲಿ ಈ ಜೋಡಿ ವಿಫಲ ಆಗಿದೆ. 11 ವರ್ಷದ ಪ್ರೀತಿಗೆ ಮದುವೆ ಆದ ನಾಲ್ಕೇ ವರ್ಷದಲ್ಲಿ, ಅಕ್ಟೋಬರ್ 2 2021 ರಂದು ಅಂತ್ಯ ಹಾಡಿದ್ದಾರೆ. ಸದ್ಯ, ಸಮಂತಾ ಮತ್ತು ನಾಗಚೈತನ್ಯ ಅವರು ವಿಚ್ಛೇದನ ಪಡೆದು ದೂರಾಗಿರುವು ಸುದ್ದಿಯೇ ಎಲ್ಲೆಡೆ ಚರ್ಚೆಗೆ ಗ್ರಾಸವಾಗುತ್ತಿದೆ. ಕಳೆದ ವರ್ಷದಿಂದ ಈ ವರ್ಷವು 2022 ರಲ್ಲಿಯೂ ಇವರಿಬ್ಬರ ವಿಚ್ಛೇದನದ ಸುದ್ದಿಯದ್ದೆ ಸದ್ದು. ಹಲವು ವಿಚಾರಗಳ ಕುರಿತು ನಟಿ ಸಮಂತಾ ವಿಚ್ಛೇದನದ ಬಳಿಕ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಲೆ ಇದ್ದಾರೆ. ಇದೀಗ ಮತ್ತೆ ಸಮಂತಾ ಹಳೆ ವಿಚಾರವೊಂದಕ್ಕೆ, ಹೊಸ ರೀತಿಯಲ್ಲಿ ಟ್ರೋಲ್ ಆಗುತ್ತಿದ್ದಾರೆ. 2013ರಲ್ಲಿ ನಟಿ ಸಮಂತಾ ಆಡಿದ ಮಾತು, ಇಂದು ನಿಜವಾಗಿ ಬಿಟ್ಟಿದೆಯಂತೆ. ಹೌದು, ವಿಚ್ಛೇದನದ ಬಗ್ಗೆ ಮದುವೆಗೂ ಮುನ್ನ ಸಮಂತಾ ನೀಡಿದ್ದ ಹೇಳಿಕೆಯೊಂದು ಈಗ ನಿಜವಾಯಿತೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಳೆ ಸುದ್ದಿಯೊಂದು ಈಗ ವೈರಲ್ ಆಗುತ್ತಿದೆ.
ಅಂದಹಾಗೆ, ವಿಚ್ಛೇದನ ಬಗ್ಗೆ ಮದುವೆಗೆ ಮುಂಚೆಯೇ ಮಾತಾಡಿದ್ದೇಕೆ ಸಮಂತಾ ಅಂತೀರಾ? : 2013ರಲ್ಲಿ ಸಮಂತಾ ಈ ಹೇಳಿಕೆ ನೀಡಿದ್ದಾರೆ. ಆದರೆ, ಈಗ ಆ ಹೇಳಿಕೆ ನಿಜ ಆಗಿ ಬಿಟ್ಟಿದೆ. ಹೀಗಿದ್ದರೂ, ನಟಿ ಸಮಂತಾ ಹಾಗೆ ಹೇಳಿದ್ದು ತಮಾಷೆಗೆ ಮಾತ್ರ. ತೆಲುಗು ನಿರ್ದೇಶಕ ಹರೀಶ್ ಶಂಕರ್ ಮತ್ತು ವಿದ್ಯುಲೇಖ ರಾಮನ್ ಅವರು ಸಮಂತಾ ಮದುವೆಯಲ್ಲಿ ಡಾನ್ಸ್ ಮಾಡಲು ಕಾಯುತ್ತಿದ್ದೇವೆ ಎಂದು 2013ರಲ್ಲಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ಗೆ ಉತ್ತರಿಸಿದ ಸಮಂತಾ “ನಾನು ಮದುವೆ ಆಗಿ, ಬಳಿಕ ವಿಚ್ಛೇಧನ ಪಡೆದು ಕೂಡ ನಿಮ್ಮ ಡಾನ್ಸ್ ನೋಡಲು ಬರುತ್ತೇನೆ“. ಎಂದು ಜೋಕ್ ಮಾಡಿದ್ದರು. “ಆಗ ನಾವು ನಿನ್ನ ವಿಚ್ಛೇದನಕ್ಕೂ ಸೇರಿ ಕುಣಿಯ ಬೇಕು“. ಎಂದು ಹರೀಶ್ ಸಂತೋಷ್ ಕೂಡ ಜೋಕ್ನ ಮೂಲಕ ಉತ್ತರ ನೀಡಿದ್ದರು.
ಇದೀಗ, ಈ ಹಳೇ ಟ್ವೀಟ್ ಮತ್ತೆ ಜೀವ ಪಡೆದುಕೊಂಡಿದೆ ಎಂದೇ ಹೇಳಬೇಕು. ಈ ಟ್ವೀಟ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಹಳೇ ಸಂಭಾಷಣೆ ಬಳಿಕ ನಟಿ ಸಮಂತಾ ಇದೆಲ್ಲಾ ತಮಾಷೆಗಾಗಿ ಅಷ್ಟೇ, ನಾನು ಈಗಲೇ ಮದುವೆ ಆಗುದಿಲ್ಲ ಎಂದು ಹೇಳಿದ್ದರು. ಆದರೆ, ಈಗ ಸಮಂತಾ ನಿಜಕ್ಕೂ ವಿಚ್ಛೇದನ ಪಡೆದಿದ್ದಾರೆ. ಇನ್ನೂ, ಕೆಲಸದ ಮುಂಭಾಗದಲ್ಲಿ ವಿಚ್ಛೇದನದ ಬಳಿಕ ಹಾಲಿವುಡ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿಯೂ ಅಭಿನಯಿಸುತ್ತಿದ್ದಾರೆ ನಟಿ ಸಮಂತಾ. ಈಗಾಗಲೇ, ನಟಿಯ ಒಂದು ಹಾಲಿವುಡ್ ಚಿತ್ರದ ಬಗ್ಗೆ ಮಾಹಿತಿ ಹೊರ ಬಂದಿದೆ. ಜತೆಗೆ, ಬಾಲಿವುಡ್ನ ಯಶ್ ರಾಜ್ ನಿರ್ಮಾಣ ಸಂಸ್ಥೆ ಇಂದ 3 ಸಿನಿಮಾಗಳ ಆಫರ್ಗಳು ನಟಿ ಸಮಂತಾಗೆ ಬಂದಿವೆ.
ಹೇಗಿತ್ತು ಅಪ್ಪು ಅಭಿಮಾನಿಯ 3,350 ಕಿಮೀ ಸೈಕಲ್ ಯಾತ್ರೆ? 5 ದಿನ ಸೈಕಲ್ ರಿಪೇರಿ! ವಿಜಯವಾಣಿ ಸ್ಪೆಷಲ್…
ಮತ್ತೆ ಒಂದಾಗ್ತಾರಾ ಮಾಜಿ ತಾರಾದಂಪತಿ? ಸಮಂತಾರ ಈ ನಡೆಯಿಂದ ಅಭಿಮಾನಿಗಳಲ್ಲಿ ಚಿಗುರಿದ ಆಸೆ!
ನಟ ಧನುಷ್ ತಂದೆಯ ಹೇಳಿಕೆಯಿಂದ ಸ್ಟಾರ್ ದಂಪತಿಯ ಡಿವೋರ್ಸ್ ಪ್ರಕರಣಕ್ಕೆ ಸ್ಫೋಟಕ ತಿರುವು!