ಮಹಾರಾಷ್ಟ್ರದಲ್ಲಿ ಕರೊನಾ ಎರಡನೇ ಹಲೆ ಹೆಚ್ಚಾದಂತೆ ಬಾಲಿವುಡ್ನ ಹಲವು ಸ್ಟಾರ್ ನಟ-ನಟಿಯರು ತಮ್ಮದೇ ರೀತಿಯಲ್ಲಿ ಅಗತ್ಯವಿರುವವರಿಗೆ ಸಹಾಯಹಸ್ತ ಚಾಚುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ, ಐದು ಸಾವಿರ ಕರೊನಾ ವಾರಿಯರ್ಸ್ಗೆ ಸಲ್ಮಾನ್ ಖಾನ್ ಊಟದ ವ್ಯವಸ್ಥೆ ಮಾಡಿದ್ದರು.
ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, 25 ಸಾವಿರ ಜನರಿಗೆ ತಲಾ ಒಂದೂವರೆ ಸಾವಿರ ರೂ.ಗಳನ್ನು ಅವರು ಕೊಡುವುದಕ್ಕೆ ಮುಂದಾಗಿದ್ದಾರೆ. ಈ ವಿಷಯವನ್ನು ಖಾತ್ರಿಪಡಿಸುವ ಫೆಡರೇಶನ್ ಆಫ್ ವೆಸ್ಟರ್ನ್ ಸಿನಿ ಎಂಪ್ಲಾಯಿಸ್ (ಎಫ್ಡಬ್ಲ್ಯೂಐಸಿಇ)ನ ಅಧ್ಯಕ್ಷ ತಿವಾರಿ, ‘ಲಾಕ್ಡೌನ್ನಿಂದ ಚಿತ್ರೀಕರಣ ಚಟುವಟಿಕೆಗಳು ಬಂದ್ ಆಗಿರುವುದರಿಂದ ಸಿನಿಕಾರ್ವಿುಕರು ಕಷ್ಟದಲ್ಲಿದ್ದಾರೆ. ಈ ಸಂಬಂಧ ಸಲ್ಮಾನ್ ಖಾನ್ ಅವರಿಗೆ ಪತ್ರ ಬರೆದಿ ದ್ದೇವೆ. ಅವರು 25 ಸಾವಿರ ಕಾರ್ವಿುಕರಿಗೆ ತಲಾ ಒಂದೂವರೆ ಸಾವಿರ ರೂ.ಗಳನ್ನು ಕೊಡುವುದಕ್ಕೆ ಒಪ್ಪಿಕೊಂಡಿದ್ದಾರೆ. ಈಗಾಗಲೇ ನಾವು ಕಾರ್ವಿುಕರ ಪಟ್ಟಿಯನ್ನು ಅವರಿಗೆ ನೀಡಿದ್ದು, ಸದ್ಯದಲ್ಲೇ ಅವರೆಲ್ಲರ ಖಾತೆಗೆ ಸಲ್ಮಾನ್ ಹಣ ಹಾಕಲಿದ್ದಾರೆ’ ಎಂದು ಹೇಳಿದ್ದಾರೆ.
ಆದಿತ್ಯ ಚೋಪ್ರಾರಿಂದಲೂ ಸಹಾಯ: ಇನ್ನು, ನಿರ್ವಪಕ ಆದಿತ್ಯ ಚೋಪ್ರಾ ತಮ್ಮ ಯಶ್ರಾಜ್ ಫೌಂಡೇಶನ್ ವತಿಯಿಂದ ಎಲ್ಲ ಕಾರ್ವಿುಕರಿಗೂ ಲಸಿಕೆ ಹಾಕಿಸುತ್ತಾರಂತೆ ಎಂದು ಸುದ್ದಿಯಾಗಿತ್ತು. ಲಸಿಕೆ ಜತೆಗೆ, ಮೂರು ಸಾವಿರ ದಿನಗೂಲಿ ಕಾರ್ವಿುಕರಿಗೆ ರೇಷನ್ ಕಿಟ್ ಮತ್ತು ಧನಸಹಾಯ ಮಾಡಲಿದ್ದಾರೆ ಎಂದು ತಿವಾರಿ ತಿಳಿಸಿದ್ದಾರೆ. ಕಳೆದ ವರ್ಷ ಮೂರು ಸಾವಿರ ಮಂದಿಗೆ ಆದಿತ್ಯ ಚೋಪ್ರಾ ರೇಷನ್ ಕಿಟ್ ಒದಗಿಸಿದ್ದರು. ಈ ಬಾರಿ ಕಿಟ್ಗಳ ಜತೆಗೆ ಅವರು ಧನಸಹಾಯ ಮಾಡುವುದಕ್ಕೆ ಒಪ್ಪಿದ್ದಾರಂತೆ. ಹಿರಿಯ ನಾಗರಿಕರು ಮತ್ತು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಅವರು ನೇರವಾಗಿ ಐದು ಸಾವಿರ ರೂ.ಗಳನ್ನು ಡೆಪಾಸಿಟ್ ಮಾಡಲಿದ್ದಾರೆ ಎಂದು ಹೇಳಲಾಗಿದೆ.