More

    Video| ಬಿಜೆಪಿ ಮುಖಂಡನ ಬರ್ತ್ ​ಡೇ ಪಾರ್ಟಿಯಲ್ಲಿ ಜನರತ್ತ ಕಂತೆಕಂತೆ ಹಣ ಚೆಲ್ಲಿದ್ರು! ಈ ದೃಶ್ಯ ನೋಡಿದ್ರೆ ಸಿಟ್ಟಿಗೇಳ್ತೀರಿ

    ಕಲಬುರಗಿ: ಇದನ್ನು ಹುಚ್ಚು ಅಭಿಮಾನ ಅಂತೀರಾ? ಅಥವಾ ಅತಿರೇಖದ ಪರಮಾವಧಿ ಅಂತೀರಾ ನಿಮಗೆ ಬಿಟ್ಟದ್ದು. ದೇಶದಲ್ಲಿ ಕೋಟ್ಯಂತರ ಜನ ತುತ್ತು ಅನ್ನಕ್ಕಾಗಿ ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ, ಸಾವಿರಾರು ಮಂದಿ ಹಸಿವಿನಿಂದಲೇ ಸಾಯುತ್ತಿದ್ದಾರೆ. ಆದರೆ ಇಲ್ಲೊಬ್ಬ ಮಹಾಶಯ ತನ್ನ ನಾಯಕ ಬರ್ತ್​ ಡೇ ಪಾರ್ಟಿಯಲ್ಲಿ ನೋಟಿನ ಮಳೆಯನ್ನೇ ಸುರಿಸಿದ್ದಾನೆ! ಈ ದೃಶ್ಯ ವೈರಲ್​ ಆಗಿದ್ದು, ಭಾರಿ ಟೀಕೆಗೆ ಗುರಿಯಾಗಿದೆ.

    ಅಂದಹಾಗೆ ಇಂತಹ ಘಟನೆ ಕಲಬುರಗಿ ನಗರದ ಪಿಲ್ಟರ್ ಬೆಡ್ ಏರಿಯಾದಲ್ಲಿ ಫೆ.10ರಂದು ಕಲಬುರಗಿ ಉತ್ತರ ಕ್ಷೇತ್ರದ ಬಿಜೆಪಿ ಯುವ ಮುಖಂಡ ಸೈನಿಕ್ ರಾಠೋಡ್ ಅವರ ಹುಟ್ಟುಹಬ್ಬ ಇತ್ತು. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಸೈನಿಕ್ ರಾಠೋಡ್ ಬರ್ತ್​ಡೇ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಇದನ್ನೂ ಓದಿರಿ  ಡಾ.ರಾಜ್​ ಅಪಹರಣ: ರಾಜ್ಯ ಸರ್ಕಾರ ಮುಚ್ಚಿಟ್ಟಿದ್ದ ಸ್ಫೋಟಕ ರಹಸ್ಯ ಬಯಲು

    ಬರ್ತ್​ ಡೇ ಕಾರ್ಯಕ್ರಮದಲ್ಲಿ ಕೆಲ ಅಭಿಮಾನಿಗಳು ಸೈನಿಕ್ ರಾಠೋಡ್ ಅವರಿಗೆ ಹೂವಿನ ಮಾಲೆ ಹಾಕಿ ಹಾಲಿನ ಅಭಿಷೇಕವನ್ನೂ ಮಾಡಿದ್ದಾರೆ. ಕೇಕ್​ ಕತ್ತರಿಸಿ ಸಂಭ್ರಮಿಸಿದ್ದಾರೆ. ಇದೇ ವೇಳೆ ಸೈನಿಕ್ ರಾಠೋಡ್​ರ ಬೆಂಬಲಿಗನೊಬ್ಬ ವೇದಿಕೆ ಮೇಲೆ ನಿಂತು ಜನರತ್ತ ಕಂತೆಕಂತೆ ನೋಟುಗಳನ್ನು ಎಸೆದಿದ್ದಾರೆ.

    ಈ ಎಲ್ಲ ದೃಶ್ಯವೂ ವೈರಲ್​ ಆಗಿದ್ದು, ಬಿಜೆಪಿ ಮುಖಂಡನಿಗೆ ದುಡ್ಡಿನ ಬೇಲೆನೆ ಗೊತ್ತಿಲ್ವಾ? ಎಂದು ಸಾರ್ವಜನಿಕರು ಟೀಕಿಸಿದ್ದಾರೆ. ಇಂತಹ ವರ್ತನೆ ಮುಖಂಡರಿಗೆ ಶೋಭೆ ತರುವುದಿಲ್ಲ. ಜವಾಬ್ದಾರಿಯುತವಾಗಿ ವರ್ತಿಸಬೇಕಿದ್ದವರೇ ಕೋತಿಗೆ ಹೆಂಡ ಕುಡಿಸಿದಂತೆ ಆಡಿದ್ರೆ ಹೇಗೆ? ಎಂದೆಲ್ಲ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
    ಬರ್ತ್​ ಡೇ ಪಾರ್ಟಿಯಲ್ಲಿ ಹಣ ಚೆಲ್ಲಿದ ದೃಶ್ಯಕ್ಕಾಗಿ ಕೆಳಗೆ ಇರುವ ವಿಜಯವಾಣಿ ಫೇಸ್​ಬುಕ್​ ಲಿಂಕ್​ ಮೇಲೆ ಕ್ಲಿಕ್​ ಮಾಡಿ.

    ಅಡಕೆ ರೂಪದಲ್ಲಿ ಮನೆಗೆ ಬಂದ ಜವರಾಯ 1 ವರ್ಷದ ಮಗುವಿನ ಪ್ರಾಣ ಹೊತ್ತೊಯ್ದ!

    ತಹಸೀಲ್ದಾರ್​ ಕಚೇರಿ ಬಳಿ ಹಾವಿನ ಜತೆ ಆಟವಾಡುತ್ತಿದ್ದ ವೃದ್ಧ ಕ್ಷಣಾರ್ಧದಲ್ಲೇ ಪ್ರಾಣಬಿಟ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts