ಕಲಬುರಗಿ: ಇದನ್ನು ಹುಚ್ಚು ಅಭಿಮಾನ ಅಂತೀರಾ? ಅಥವಾ ಅತಿರೇಖದ ಪರಮಾವಧಿ ಅಂತೀರಾ ನಿಮಗೆ ಬಿಟ್ಟದ್ದು. ದೇಶದಲ್ಲಿ ಕೋಟ್ಯಂತರ ಜನ ತುತ್ತು ಅನ್ನಕ್ಕಾಗಿ ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ, ಸಾವಿರಾರು ಮಂದಿ ಹಸಿವಿನಿಂದಲೇ ಸಾಯುತ್ತಿದ್ದಾರೆ. ಆದರೆ ಇಲ್ಲೊಬ್ಬ ಮಹಾಶಯ ತನ್ನ ನಾಯಕ ಬರ್ತ್ ಡೇ ಪಾರ್ಟಿಯಲ್ಲಿ ನೋಟಿನ ಮಳೆಯನ್ನೇ ಸುರಿಸಿದ್ದಾನೆ! ಈ ದೃಶ್ಯ ವೈರಲ್ ಆಗಿದ್ದು, ಭಾರಿ ಟೀಕೆಗೆ ಗುರಿಯಾಗಿದೆ.
ಅಂದಹಾಗೆ ಇಂತಹ ಘಟನೆ ಕಲಬುರಗಿ ನಗರದ ಪಿಲ್ಟರ್ ಬೆಡ್ ಏರಿಯಾದಲ್ಲಿ ಫೆ.10ರಂದು ಕಲಬುರಗಿ ಉತ್ತರ ಕ್ಷೇತ್ರದ ಬಿಜೆಪಿ ಯುವ ಮುಖಂಡ ಸೈನಿಕ್ ರಾಠೋಡ್ ಅವರ ಹುಟ್ಟುಹಬ್ಬ ಇತ್ತು. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಸೈನಿಕ್ ರಾಠೋಡ್ ಬರ್ತ್ಡೇ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಇದನ್ನೂ ಓದಿರಿ ಡಾ.ರಾಜ್ ಅಪಹರಣ: ರಾಜ್ಯ ಸರ್ಕಾರ ಮುಚ್ಚಿಟ್ಟಿದ್ದ ಸ್ಫೋಟಕ ರಹಸ್ಯ ಬಯಲು
ಬರ್ತ್ ಡೇ ಕಾರ್ಯಕ್ರಮದಲ್ಲಿ ಕೆಲ ಅಭಿಮಾನಿಗಳು ಸೈನಿಕ್ ರಾಠೋಡ್ ಅವರಿಗೆ ಹೂವಿನ ಮಾಲೆ ಹಾಕಿ ಹಾಲಿನ ಅಭಿಷೇಕವನ್ನೂ ಮಾಡಿದ್ದಾರೆ. ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಇದೇ ವೇಳೆ ಸೈನಿಕ್ ರಾಠೋಡ್ರ ಬೆಂಬಲಿಗನೊಬ್ಬ ವೇದಿಕೆ ಮೇಲೆ ನಿಂತು ಜನರತ್ತ ಕಂತೆಕಂತೆ ನೋಟುಗಳನ್ನು ಎಸೆದಿದ್ದಾರೆ.
ಈ ಎಲ್ಲ ದೃಶ್ಯವೂ ವೈರಲ್ ಆಗಿದ್ದು, ಬಿಜೆಪಿ ಮುಖಂಡನಿಗೆ ದುಡ್ಡಿನ ಬೇಲೆನೆ ಗೊತ್ತಿಲ್ವಾ? ಎಂದು ಸಾರ್ವಜನಿಕರು ಟೀಕಿಸಿದ್ದಾರೆ. ಇಂತಹ ವರ್ತನೆ ಮುಖಂಡರಿಗೆ ಶೋಭೆ ತರುವುದಿಲ್ಲ. ಜವಾಬ್ದಾರಿಯುತವಾಗಿ ವರ್ತಿಸಬೇಕಿದ್ದವರೇ ಕೋತಿಗೆ ಹೆಂಡ ಕುಡಿಸಿದಂತೆ ಆಡಿದ್ರೆ ಹೇಗೆ? ಎಂದೆಲ್ಲ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಬರ್ತ್ ಡೇ ಪಾರ್ಟಿಯಲ್ಲಿ ಹಣ ಚೆಲ್ಲಿದ ದೃಶ್ಯಕ್ಕಾಗಿ ಕೆಳಗೆ ಇರುವ ವಿಜಯವಾಣಿ ಫೇಸ್ಬುಕ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅಡಕೆ ರೂಪದಲ್ಲಿ ಮನೆಗೆ ಬಂದ ಜವರಾಯ 1 ವರ್ಷದ ಮಗುವಿನ ಪ್ರಾಣ ಹೊತ್ತೊಯ್ದ!
ತಹಸೀಲ್ದಾರ್ ಕಚೇರಿ ಬಳಿ ಹಾವಿನ ಜತೆ ಆಟವಾಡುತ್ತಿದ್ದ ವೃದ್ಧ ಕ್ಷಣಾರ್ಧದಲ್ಲೇ ಪ್ರಾಣಬಿಟ್ಟ!