ಬೆಂಗಳೂರು: ಕರೊನಾ ಎರಡನೇ ಅಲೆಯಿಂದ ಚಿತ್ರೀಕರಣ ಸ್ಥಗಿತವಾಗಿ ಎರಡು ತಿಂಗಳೇ ಕಳೆದಿವೆ. ಚಿತ್ರೀಕರಣ ಮತ್ತೆ ಯಾವಾಗಿನಿಂದ ಪ್ರಾರಂಭವಾಗುತ್ತದೆ ಅಥವಾ ಆಗಬಹುದು ಎಂದು ಯಾರಿಗೂ ಗೊತ್ತಾಗುತ್ತಿಲ್ಲ. ಇಂತಹ ಸಮಯದಲ್ಲಿ ಸಿನಿಮಾ ಕಾರ್ಮಿಕರ ಬವಣೆ ಹೇಳತೀರಲಾಗಿದೆ.
ಇದನ್ನೂ ಓದಿ: ಸುಶಾಂತ್ ಸಿಂಗ್ ಇದ್ದ ಮನೆ ಈಗ ಏನಾಗಿದೆ ಗೊತ್ತಾ?
ಈ ಸಮಯದಲ್ಲಿ ಹಲವರು ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ಸಹಾಯಹಸ್ತ ಚಾಚುತ್ತಿದ್ದಾರೆ. ಯಶ್, ಪುನೀತ್, ಉಪೇಂದ್ರ, ಸುದೀಪ್, ವಿಜಯ್ಕುಮಾರ್ ಕಿರಗಂದೂರು, ರಾಗಿಣಿ, ಸಂಜನಾ ಸೇರಿದಂತೆ ಹಲವರು ನಟ-ನಟಿಯರು ಸಂಕಷ್ಟದಲ್ಲಿರುವ ಕನ್ನಡ ಚಿತ್ರರಂಗದ ಹಲವು ಕಾರ್ಮಿಕರು, ತಂತ್ರಜ್ಱರಿಗೆ ತಮ್ಮದೇ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಈಗ ಅವರ ಸಾಲಿಗೆ ‘ಡೈಲಾಗ್ ಕಿಂಗ್’ ಎಂದೇ ಜನಪ್ರಿಯರಾಗಿರುವ ಸಾಯಿಕುಮಾರ್ ಮತ್ತು ಅವರ ಸಹೋದರರು ಸಹ ಸೇರಿಕೊಂಡಿದ್ದಾರೆ.
ಸಾಯಿಕುಮಾರ್ ತಮ್ಮ ಸಹೋದರರಾದ ರವಿಶಂಕರ್ ಹಾಗೂ ಅಯ್ಯಪ್ಪ ಪಿ ಶರ್ಮ ಸೇರಿ ಐದು ಲಕ್ಷದ ನಾಲ್ಕು ರೂಪಾಯಿಗಳನ್ನು ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ ನೀಡಿದ್ದಾರೆ. ಈ ಮೊತ್ತವನ್ನು ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಹಂಚಲಾಗುತ್ತದೆ.
ಇದನ್ನೂ ಓದಿ: ಜನ ನಾವು ಹೇಗಿದ್ರೂ ಮಾತನಾಡ್ತಾರೆ; ಬಾಡಿ ಶೇಮಿಂಗ್ ಬಗ್ಗೆ ಪ್ರಿಯಾಮಣಿ ಹೇಳಿದ್ದಿಷ್ಟು!
ಸಹಾಯಹಸ್ತ ಚಾಚುತ್ತಿರುವ ಕುರಿತು ಮಾತನಾಡಿರುವ ಅವರು, ‘ನಾವು ಬೇರೆ ರಾಜ್ಯದಲ್ಲಿ ಜನಿಸಿದ್ದರೂ, ನಮ್ಮ ಜನಪ್ರಿಯತೆಯ ಹೆಚ್ಚು ಪಾಲು ಕರ್ನಾಟಕದ್ದು. ಹಾಗಾಗಿ, ನಾವು ನಮ್ಮ ಕೈಲಾದ ಸಹಾಯ ಮಾಡಿದ್ದೇವೆ’ ಎಂದು ಸಾಯಿಕುಮಾರ್, ರವಿಶಂಕರ್ ಹಾಗೂ ಅಯ್ಯಪ್ಪ ಶರ್ಮ ಹೇಳಿಕೊಂಡಿದ್ದಾರೆ.