More

    ಕರ್ನಾಟಕ ಚಲನಚಿತ್ರ ಕಾರ್ಮಿಕರಿಗೆ ನೆರವಾದ ‘ಡೈಲಾಗ್​ ಕಿಂಗ್​’ ಸಹೋದರರು

    ಬೆಂಗಳೂರು: ಕರೊನಾ ಎರಡನೇ ಅಲೆಯಿಂದ ಚಿತ್ರೀಕರಣ ಸ್ಥಗಿತವಾಗಿ ಎರಡು ತಿಂಗಳೇ ಕಳೆದಿವೆ. ಚಿತ್ರೀಕರಣ ಮತ್ತೆ ಯಾವಾಗಿನಿಂದ ಪ್ರಾರಂಭವಾಗುತ್ತದೆ ಅಥವಾ ಆಗಬಹುದು ಎಂದು ಯಾರಿಗೂ ಗೊತ್ತಾಗುತ್ತಿಲ್ಲ. ಇಂತಹ ಸಮಯದಲ್ಲಿ ಸಿನಿಮಾ ಕಾರ್ಮಿಕರ ಬವಣೆ ಹೇಳತೀರಲಾಗಿದೆ.

    ಇದನ್ನೂ ಓದಿ: ಸುಶಾಂತ್​ ಸಿಂಗ್​ ಇದ್ದ ಮನೆ ಈಗ ಏನಾಗಿದೆ ಗೊತ್ತಾ?

    ಈ ಸಮಯದಲ್ಲಿ ಹಲವರು ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ಸಹಾಯಹಸ್ತ ಚಾಚುತ್ತಿದ್ದಾರೆ. ಯಶ್​, ಪುನೀತ್​, ಉಪೇಂದ್ರ, ಸುದೀಪ್​, ವಿಜಯ್​ಕುಮಾರ್​ ಕಿರಗಂದೂರು, ರಾಗಿಣಿ, ಸಂಜನಾ ಸೇರಿದಂತೆ ಹಲವರು ನಟ-ನಟಿಯರು ಸಂಕಷ್ಟದಲ್ಲಿರುವ ಕನ್ನಡ ಚಿತ್ರರಂಗದ ಹಲವು ಕಾರ್ಮಿಕರು, ತಂತ್ರಜ್ಱರಿಗೆ ತಮ್ಮದೇ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಈಗ ಅವರ ಸಾಲಿಗೆ ‘ಡೈಲಾಗ್​ ಕಿಂಗ್​’ ಎಂದೇ ಜನಪ್ರಿಯರಾಗಿರುವ ಸಾಯಿಕುಮಾರ್ ಮತ್ತು ಅವರ ಸಹೋದರರು ಸಹ ಸೇರಿಕೊಂಡಿದ್ದಾರೆ.

    ಸಾಯಿಕುಮಾರ್ ತಮ್ಮ ಸಹೋದರರಾದ ರವಿಶಂಕರ್ ಹಾಗೂ ಅಯ್ಯಪ್ಪ ಪಿ ಶರ್ಮ ಸೇರಿ ಐದು ಲಕ್ಷದ ನಾಲ್ಕು ರೂಪಾಯಿಗಳನ್ನು ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ ನೀಡಿದ್ದಾರೆ. ಈ ಮೊತ್ತವನ್ನು ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಹಂಚಲಾಗುತ್ತದೆ.

    ಇದನ್ನೂ ಓದಿ: ಜನ ನಾವು ಹೇಗಿದ್ರೂ ಮಾತನಾಡ್ತಾರೆ; ಬಾಡಿ ಶೇಮಿಂಗ್ ಬಗ್ಗೆ ಪ್ರಿಯಾಮಣಿ ಹೇಳಿದ್ದಿಷ್ಟು!

    ಸಹಾಯಹಸ್ತ ಚಾಚುತ್ತಿರುವ ಕುರಿತು ಮಾತನಾಡಿರುವ ಅವರು, ‘ನಾವು ಬೇರೆ ರಾಜ್ಯದಲ್ಲಿ ಜನಿಸಿದ್ದರೂ, ನಮ್ಮ ಜನಪ್ರಿಯತೆಯ ಹೆಚ್ಚು ಪಾಲು ಕರ್ನಾಟಕದ್ದು. ಹಾಗಾಗಿ, ನಾವು ನಮ್ಮ ಕೈಲಾದ ಸಹಾಯ ಮಾಡಿದ್ದೇವೆ’ ಎಂದು ಸಾಯಿಕುಮಾರ್​, ರವಿಶಂಕರ್​ ಹಾಗೂ ಅಯ್ಯಪ್ಪ ಶರ್ಮ ಹೇಳಿಕೊಂಡಿದ್ದಾರೆ.

    ಕೊನೆಯ ಕ್ಷಣದಲ್ಲಿ ನೀನಾ ಗುಪ್ತಾ ಮದುವೆ ಕ್ಯಾನ್ಸಲ್​ ಆಗಿತ್ತಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts