More

    VIDEO: ಯುವತಿಯ ಹತ್ಯೆ; ಬಿಜೆಪಿ ನಾಯಕನ ಪುತ್ರನ ರೆಸಾರ್ಟ್​ ಮೇಲೆ ಬುಲ್ಡೋಜರ್​- ನ್ಯಾಯ ಎಲ್ಲರಿಗೂ ಒಂದೇ ಎಂದ ಸಿಎಂ

    ಉತ್ತರಾಖಂಡ: ಹರಿದ್ವಾರದ ರೆಸಾರ್ಟ್​ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಅಂಕಿತಾ ಭಂಡಾರಿಯ (19) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾತ್ರೋರಾತ್ರಿ ಮಹತ್ವದ ಬೆಳವಣಿಗೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ (ಶುಕ್ರವಾರ) ಉತ್ತರಾಖಂಡದಲ್ಲಿನ ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ವಿನೋದ್ ಆರ್ಯ ಎಂಬುವವರ ಪುತ್ರ ಪುಲಕಿತ್​ ಆರ್ಯನನ್ನು ಪೊಲೀಸರು ಬಂಧಿಸಿದ್ದರು.


    ‘ವಾರದ ಹಿಂದೆ ನಾಪತ್ತೆಯಾಗಿ, ರೆಸಾರ್ಟ್​ನಲ್ಲಿಯೇ ಕೊಲೆಯಾಗಿದ್ದರೂ ಆಕೆಯ ಸಾವಿನ ಬಗ್ಗೆ ತನಿಖೆ ನಡೆಸಲು ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ, ಬಿಜೆಪಿ, ಪೊಲೀಸರ ಮೇಲೆ ಒತ್ತಡ ಹೇರುತ್ತಿದೆ’ ಎಂದು ಕಾಂಗ್ರೆಸ್​ ನಾಯಕರು ಆರೋಪಿಸಲು ಶುರು ಮಾಡಿದ್ದರು. ಆದರೆ ನ್ಯಾಯ ಎಲ್ಲರಿಗೂ ಒಂದೇ ಎಂದು ಹೇಳಿದ ಉತ್ತರಾಖಂಡದ ಮುಖ್ಯಮಂತ್ರಿ ಬಿಜೆಪಿ ಪಿ.ಎಸ್​.ಧಾಮಿ ಅವರು ಕೊಲೆ ನಡೆದ ರೆಸಾರ್ಟ್​ ಅನ್ನು ಬುಲ್ಡೋಜರ್​ ಬಳಸಿ ಕೆಡವಲು ಆದೇಶಿಸಿದ್ದಾರೆ. ಈ ಆದೇಶದ ಅನ್ವಯ ಇದಾಗಲೇ ಕಟ್ಟಡ ನೆಲಸಮ ಪ್ರಕ್ರಿಯೆ ನಡೆದಿದೆ. ರೆಸಾರ್ಟ್​ ಕೆಡವಲು ಕಾರಣ, ಕೊಲೆ ನಡೆದ ಹಾಗೂ ಕೊಲೆಯಾದ ಯುವತಿ ಅಂಕಿತಾ ಭಂಡಾರಿ ಕೆಲಸ ಮಾಡುತ್ತಿದ್ದ ವಂತರಾ ರೆಸಾರ್ಟ್​ ಆರೋಪಿ ಪುಲಕಿತ್​ಗೆ ಸೇರಿದ್ದು.

    ಸಿಎಂ ಅವರ ಸೂಚನೆ ಮೇರೆಗೆ ಆರೋಪಿಗಳ ಆಸ್ತಿಯನ್ನು ನೆಲಸಮಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ವಿಶೇಷ ಪ್ರಧಾನ ಕಾರ್ಯದರ್ಶಿ ಅಭಿನವ್ ಕುಮಾರ್ ತಿಳಿಸಿದ್ದಾರೆ.


    ಯುವತಿ ಕಾಣೆಯಾಗಿದ್ದಾಳೆ ಎಂದು ಆಕೆ ಕುಟುಂಬದವರಂತೆ ಪೊಲೀಸ್‌ ಠಾಣೆಯಲ್ಲಿ ಪುಲಕಿತ್​ ಆರ್ಯ ದೂರು ದಾಖಲಿಸಿದ್ದ. ಆದರೆ ಇಬ್ಬರು ಸಿಬ್ಬಂದಿಯೊಂದಿಗೆ ಸೇರಿಕೊಂಡು ಕೊಲೆ ಮಾಡಿದ್ದಾರೆಂದು ಪೊಲೀಸ್‌ ತನಿಖೆ ವೇಳೆ ಗೊತ್ತಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರು ಸಿಬ್ಬಂದಿಯನ್ನೂ ಬಂಧಿಸಲಾಗಿದೆ. ಯುವತಿ ಕುಟುಂಬದವರು ಪುಲಕಿತ್​ ಆರ್ಯನ ಬಗ್ಗೆ ಶಂಕೆಯನ್ನು ವ್ಯಕ್ತಪಡಿಸಿ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರು. (ಏಜೆನ್ಸೀಸ್​)

    ಒಂದೂವರೆ ವರ್ಷ ಮಗನ ಶವದೊಂದಿಗೆ ಅಪ್ಪ-ಅಮ್ಮ: ಗಂಗಾಜಲ, ಆಕ್ಸಿಜನ್​ ನೀಡುತ್ತಿದ್ದ ಕುಟುಂಬಸ್ಥರು!

    ಅತ್ಯಾಚಾರ, ಅಶ್ಲೀಲ ವಿಡಿಯೋ ಕೇಸ್​ನಲ್ಲಿ ಧರ್ಮಗುರುವಿಗೆ 10 ವರ್ಷ ಶಿಕ್ಷೆ: ವಿಚಿತ್ರ ನಗುಬೀರಿ ಹೊರಬಂದ ಕಿರಾತಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts