ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ನಟಿಯರಾದ ಸಂಜನಾ ಮತ್ತು ರಾಗಿಣಿಗೆ ಸದ್ಯ ಅಂತೂ ಬೇಲ್ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಅವರು ಜೈಲಿನಿಂದ ಹೊರಕ್ಕೆ ಬರುವುದು ಸದ್ಯದ ಸ್ಥಿತಿಯಲ್ಲಂತೂ ಕಷ್ಟವೇ ಸರಿ.
ಇಷ್ಟು ವರ್ಷಗಳವರೆಗೆ ಐಷಾರಾಮಿ ಜೀವನ ನಡೆಸುತ್ತಿದ್ದ ಈ ನಟಿಯರು ಜೈಲಿನಲ್ಲಿ ಬಂಧಿಯಾಗಿರುವ ಮೊದಲ ದಿನದಿಂದಲೇ ಒಂದೊಂದು ರೀತಿಯ ಕಿರಿಕ್ ಮಾಡುತ್ತಲೇ ಇದ್ದಾರೆ.
ಇದೀಗ ರಾಗಿಣಿಗೆ ತನ್ನ ತೂಕದ ಬಗ್ಗೆ ಚಿಂತೆಯಾಗಿದೆಯಂತೆ. ಡಯಟ್ ಫುಡ್ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ತನ್ನ ತೂಕವೆಲ್ಲಿ ಜಾಸ್ತಿಯಾಗಿಬಿಡುತ್ತೋ ಎನ್ನುವ ಕಾರಣದಿಂದ ಜೈಲಿನಲ್ಲಿ ರಂಪಾಟ ಮಾಡುತ್ತಿದ್ದಾರೆ ಎನ್ನಲಾಗಿದೆ. ಜೈಲೂಟ ಅಡ್ಜೆಸ್ಟ್ ಆಗುತ್ತಿಲ್ಲ ಎಂದು ಈ ಇಬ್ಬರು ನಟಿಯರೂ ಹಿಂದಿನಿಂದಲೂ ಹೇಳುತ್ತಲೇ ಬಂದಿದ್ದಾರೆ.
ಇದನ್ನೂ ಓದಿ: ಕಾಶ್ಮೀರವನ್ನು ಭಯೋತ್ಪಾದನಾ ಕಾರ್ಖಾನೆ ಮಾಡುತ್ತಿರುವುದೇ ಮದರಸಾಗಳು ಎಂದ ಸಚಿವೆ!
ಇದೀಗ ರಾಗಿಣಿ ತಮಗೆ, ಸೌತ್ ಇಂಡಿಯನ್ ಊಟ ಬೇಡ, ಅದರಿಂದ ವೇಟ್ ಹೆಚ್ಚಾಗುತ್ತದೆ, ಆದ್ದರಿಂದ ನಾರ್ತ್ ಇಂಡಿಯನ್ ಊಟ ಕೊಡಿ ಎಂದು ಕೇಳುತ್ತಿದ್ದಾರಂತೆ. ಪ್ರತಿದಿನ ಅನ್ನ ತಿನ್ನುವುದರಿಂದ ತೂಕ ಹೆಚ್ಚಾಗುತ್ತಿದೆ. ಆದ್ದರಿಂದ ಚಪಾತಿ ಬೇಕಿದೆ, ಈ ಕಾರಣದಿಂದ ನಾರ್ತ್ ಇಂಡಿಯನ್ ಊಟ ಕೊಡಿ ಎಂದು ಹೇಳುತ್ತಿದ್ದಾರಂತೆ.
ಇದು ರಾಗಿಣಿಯ ವಿಷಯವಾದರೆ, ಸಂಜನಾಗೆ ಇದೀಗ ಅಮ್ಮನ ನೆನಪು ಜೋರಾಗಿ ಕಾಡಲು ಶುರುವಾಗಿದೆಯಂತೆ. ನನಗೆ ಅಮ್ಮನನ್ನು ನೋಡಬೇಕು ಎನ್ನಿಸುತ್ತಿದೆ, ಅವರ ಜತೆ ಮಾತನಾಡಬೇಕಿದೆ. ಆದ್ದರಿಂದ ಫೋನ್ ಮಾಡಲು ಅವಕಾಶ ಕೊಡಿ ಎಂದು ಕೇಳಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಜೈಲಿನಲ್ಲಿ ಫೋನ್ ಮಾಡಲು ಅವಕಾಶವಿದೆ. ಆದರೆ ಕೈದಿಗಳು ಸರತಿಯಲ್ಲಿ ನಿಂತು ತಮ್ಮ ಪಾಳಿ ಬರುವವರೆಗೆ ಕಾದು ನಂತರ ಕಾಲ್ ಮಾಡಬೇಕು. ಇದು ಸಂಜನಾರಿಗೆ ತಲೆನೋವಾಗಿದೆ. ನನಗೆ ಇದೆಂಥ ಸ್ಥಿತಿ ಬಂತು, ಅಮ್ಮನಿಗೆ ಕಾಲ್ ಮಾಡಲಿಕ್ಕೂ ಕ್ಯೂನಲ್ಲಿ ನಿಲ್ಲಬೇಕಾಗಿದೆ, ಇದೆಲ್ಲಾ ನನಗೆ ಆಗಲ್ಲ, ನಾನು ಬೇಕಾದಾಗಲೆಲ್ಲಾ ಕರೆ ಮಾಡಲಿಕ್ಕೆ ಅವಕಾಶ ಕೊಡಿ, ಅಮ್ಮನನ್ನು ನೋಡಬೇಕು ಎನ್ನಿಸುತ್ತಿದೆ ಎಂದು ಹೇಳುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಡಿಜೆಹಳ್ಳಿ ಗಲಭೆಕೋರರೊಂದಿಗೆ ಸಂಪರ್ಕ- ಕಾಲ್ ರೆಕಾರ್ಡ್ಸ್ನಿಂದ ‘ಸಿಕ್ಕಿಬಿದ್ದ’ ಸಂಪತ್ರಾಜ್
ಪೇಷಂಟಾಗಿ ಹೋದ ನಾಲ್ಕು ಮಕ್ಕಳ ತಾಯಿ ವಿವಾಹಿತ ವೈದ್ಯನನ್ನು ಪ್ರೀತಿಸಿ ಹೆಣವಾದ್ಳು!
ಅಮ್ಮಾ ನನ್ನನ್ನು ಕ್ಷಮಿಸಿಬಿಡು… ನಾನು ಬದುಕಿದ್ದರೆ ಅವನಿಂದ ನಿಮಗೆ ಬರೀ ಹಿಂಸೆ…