ಭುವನೇಶ್ವರ: ಸರಕು ಸಾಗಣೆ ರೈಲೊಂದು ಹಳಿ ತಪ್ಪಿದ ಪರಿಣಾಮ ಒಂಬತ್ತು ಬೋಗಿಗಳು ನದಿಗೆ ಬಿದ್ದಿರುವ ಭಯಾನಕ ಘಟನೆ ಒಡಿಶಾ ಸಮೀಪ ನಡೆದಿದೆ.
ಆಯಂಗುಲ್-ಟಾಲ್ಚೆರ್ ರೈಲ್ವೆ ಮಾರ್ಗದಲ್ಲಿ ಈ ಘಟನೆ ಸಂಭವಿಸಿದೆ. ಇಂದು ಬೆಳಗಿನ ಜಾವ ಈ ಅನಾಹುತ ನಡೆದಿದೆ. ಫಿರೋಜ್ ಪುರ್ನಿಂದ ಖುದ್ರಾಗೆ ತೆರಳುತ್ತಿದ್ದ ಸರಕು ಸಾಗಣೆ ರೈಲು ಇದಾಗಿದೆ. ನಂದಿರಾ ಸೇತುವೆ ಬಳಿ ಹಳಿ ತಪ್ಪಿದ್ದರಿಂದ ಈ ಅಪಘಾತ ಸಂಭವಿಸಿದೆ.
ಗೋಧಿಯನ್ನು ಹೊತ್ತೊಯ್ಯುತ್ತಿದ್ದ ರೈಲು ಹಳಿ ತಪ್ಪಿದೆ. ಇನ್ನು ಎಂಜಿನ್ ಟ್ರ್ಯಾಕ್ ಮೇಲೆ ಇರುವುದರಿಂದ ರೈಲು ಚಾಲಕ ಮತ್ತು ಇತರೆ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ. ಒಂಬತ್ತು ಬೋಗಿಗಳು ನದಿಗೆ ಬಿದ್ದಿದ್ದು, ಘಟನೆಯಲ್ಲಿ ರೈಲಿನ ಚಾಲಕ, ಇತರ ಸಿಬ್ಬಂದಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ರೈಲು ಹಳಿತಪ್ಪಿದ ಘಟನೆ ನಡೆದ ನಂತರ ಈ ಮಾರ್ಗದಲ್ಲಿ ಸಂಚರಿಸುವ 12 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಭಾರೀ ಮಳೆ ಸುರಿಯುತ್ತಿದ್ದು, ಈ ಕಾರಣದಿಂದ ಅಪಘಾತ ಸಂಭವಿಸಿದೆ, ಕಳೆದ ಎರಡು ದಿನಗಳಿಂದ ಟಾಲ್ಚೆರ್ ಪ್ರದೇಶದಲ್ಲಿ ದಾಖಲೆಯ 394 ಮಿಲಿ ಮೀಟರ್ ಮಳೆಯಾಗಿತ್ತು.
ಅವರು ಕೊಟ್ಟ ನೀರು ಕುಡಿದೆ… ಎಚ್ಚರವಾದಾಗ ವಿಡಿಯೋ ತೋರಿಸಿದರು- ರೇಪ್ ಕೇಸ್ನಲ್ಲಿ ಸಂಸದ: ಎಫ್ಐಆರ್
ಹತ್ತು ದಿನಗಳಲ್ಲಿ ಈ 13 ಚಿತ್ರ ನೋಡಿದರೆ ನಿಮಗೆ ಸಿಗುತ್ತೆ 96 ಸಾವಿರ ರೂ! ಧೈರ್ಯ ಇದೆಯಾ?