More

    ‘ಮುದ್ದುಲಕ್ಷ್ಮಿ’ಗೆ ಶಾಕ್‌ ಕೊಟ್ಟ ಪೊಲೀಸರು- ಮನೆಯೊಳಗೆ ದಿಢೀರ್‌ ಪ್ರವೇಶಿಸಿ ಪರಿಶೀಲನೆ

    ಬೆಂಗಳೂರು: ಖಾಸಗಿ ಚಾನೆಲ್‌ ಒಂದರಲ್ಲಿ ಪ್ರಸಾರವಾಗುವ ಮುದ್ದುಲಕ್ಷ್ಮಿ ಧಾರಾವಾಹಿ ತಂಡಕ್ಕೆ ಪೊಲೀಸರು ಶಾಕ್‌ ಕೊಟ್ಟ ಘಟನೆ ನಡೆದಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಎಲ್ಲಾ ಮಾದರಿಯ ಶೂಟಿಂಗ್‌ಗಳನ್ನು ಬ್ಯಾನ್‌ ಮಾಡಿದ್ದರೂ ಶೂಟಿಂಗ್‌ ಕಾರ್ಯದಲ್ಲಿ ಈ ತಂಡ ನಿರತವಾಗಿತ್ತು ಎಂಬ ಆರೋಪ ಕೇಳಿಬಂದಿದೆ.

    ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಶೂಟಿಂಗ್‌ ನಡೆಯುತ್ತಿದೆ ಎನ್ನಲಾದ ಜ್ಞಾನಭಾರತಿ ಠಾಣಾ ವ್ಯಾಪ್ತಿ ಮನೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ತಂಡದ ವಿರುದ್ಧ ಗರಂ ಆಗಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಜ್ಞಾನಭಾರತಿ ಪೊಲೀಸರಿಂದ ಪರಿಶೀಲನೆ ನಡೆಯಿತು.

    ಆದರೆ ತಾವು ಯಾವುದೇ ರೀತಿಯ ಶೂಟಿಂಗ್‌ ಮಾಡುತ್ತಿಲ್ಲ. ಬದಲಿಗೆ ಮನೆಯಲ್ಲಿ ಸ್ವಚ್ಛತಾ ಕಾರ್ಯ ಮಾಡುತ್ತಿದ್ದೆವು. ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ತಂಡ ಸಮಜಾಯಿಷಿ ನೀಡಿದೆ. ಸದ್ಯ ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts