ನವದೆಹಲಿ: ನ್ಯಾಷನಲ್ ಹೆರಾಲ್ಡ್ನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲವು (ಇಡಿ) ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಹಾಗೂ ಸಂಸದ ರಾಹುಲ್ ಗಾಂಧಿಯವರಿಗೆ ನೋಟಿಸ್ ನೀಡಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಭಾರಿ ಮುಜುಗರ ಆಗುವಂಥ ಘಟನೆ ಇಂದು ನಡೆದಿದೆ.
ಸೋನಿಯಾ ಗಾಂಧಿ ಕರೊನಾ ಸೋಂಕು ತಗುಲಿದೆ ಎಂದು ಹೇಳುವ ಮೂಲಕ ಆಸ್ಪತ್ರೆಗೆ ದಾಖಲಾಗಿದ್ದರೆ, ರಾಹುಲ್ ಗಾಂಧಿಯವರನ್ನು ಇಡಿ ನಿನ್ನೆ ಸುಮಾರು 10 ಗಂಟೆ ವಿಚಾರಣೆ ನಡೆಸಿತ್ತು. ಇವತ್ತೂ ವಿಚಾರಣೆ ಮುಂದುವರೆದಿದೆ. ಈ ನಡುವೆಯೇ ಕಾಂಗ್ರೆಸ್ ದೇಶಾದ್ಯಂತ ಭಾರಿ ಪ್ರತಿಭಟನೆ ನಡೆಸುತ್ತಿದೆ.
ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ದಿನೇಶ್ ಗುಂಡೂರಾವ್, ಡಿಕೆ ಸುರೇಶ್ ಭಾಗಿಯಾಗಿದ್ದು, ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಐಸಿಸಿ ಕಚೇರಿಯಿಂದ ಇಡಿ ಕಚೇರಿವರೆಗೆ ಪ್ರತಿಭಟನೆ ಮಾಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಲವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಭಾರಿ ತಳ್ಳಾಟ ನಡೆದಿದೆ. ಡಿ.ಕೆ.ಸುರೇಶ್ ಅವರು ತಳ್ಳಾಟ ನಡೆಸಿದ ವೇಳೆ, ಅವರನ್ನು ಪೊಲೀಸರು ಹಿಡಿದುಕೊಂಡು ವ್ಯಾನಿನಲ್ಲಿ ಕುಳ್ಳರಿಸಿದರು. ಪೊಲೀಸರು ತಡೆಯಲು ಬಂದಾಗ ಅವರ ಜತೆ ವಾಗ್ವಾದ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಈ ರೀತಿ ಮಾಡಬೇಕಾಗಿ ಬಂತು. ನಿಮ್ಮ ಹಿರಿಯ ಅಧಿಕಾರಿಯನ್ನು ಸ್ಥಳಕ್ಕೆ ಬರಲು ಹೇಳಿ, ನಮ್ಮನ್ನು ಅರೆಸ್ಟ್ ಮಾಡುವುದಕ್ಕೆ ನೀವ್ಯಾರು ಎಂದು ಡಿ.ಕೆ.ಸುರೇಶ್ ಪ್ರಶ್ನಿಸಿದಾಗ, ತಾವು ಯಾರು ಎನ್ನುವುದನ್ನು ಪೊಲೀಸರು ಕೃತ್ಯದ ಮೂಲಕ ತೋರಿಸಿದರು.
ವ್ಯಾನ್ನೊಳಕ್ಕೆ ಅವರನ್ನು ತಳ್ಳುತ್ತಿದ್ದಂತೆಯೇ ಸುರೇಶ್ ಬಿಜೆಪಿ ವಿರುದ್ಧ ಆಕ್ರೋಶಗೊಂಡರು. ಕೂಡಲೇ ಬಿಜೆಪಿಗೆ ಜಿಂದಾಬಾದ್ ಎಂದರು. ತಕ್ಷಣ ತಾವು ಹೇಳಿದ್ದು ತಪ್ಪಾಯಿತು ಎಂದು ಗೊತ್ತಾಗಿ, ಬಿಜೆಪಿಗೆ ಮುರ್ದಾಬಾದ್ ಎಂದರು! ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
VIDEO: ಜಿಂದಾಬಾದ್ ಜಿಂದಾಬಾದ್ ಹಾಡು ಕೇಳುತ್ತಾ ಇ.ಡಿಗೆ ಹೋದ ರಾಹುಲ್- ದೇಶಾದ್ಯಂತ ಕೈ ಕಿಚ್ಚು!
ಗ್ಯಾಂಗ್ರೇಪ್ ಆರೋಪಿಗಳಿಗೆ ಫೈವ್ಸ್ಟಾರ್ ಬಿರಿಯಾನಿ? ಕಾಂಡೋಮ್ ಬಳಸಿದ್ದವರಿಗೆ ವಿಐಪಿ ಟ್ರೀಟ್ಮೆಂಟ್!