More

    ಬೇರೆ ಬೇರೆ ಮದುವೆಯಾಗಲು ಹೆತ್ತ ಮಕ್ಕಳನ್ನೇ ಮಾರಿದ ಅಪ್ಪ-ಅಮ್ಮ- ಮುಂದೇನಾಯ್ತು ನೋಡಿ…

    ಒಡಿಶಾ: ಇದೊಂದು ರೀತಿಯಲ್ಲಿ ವಿಚಿತ್ರ ಕೇಸ್​. ಇಲ್ಲಿ ಅಪ್ಪ-ಅಮ್ಮ ಇಬ್ಬರೂ ಒಟ್ಟಿಗೇ ಇದ್ದಾರೆ. ಆದರೆ ಇಬ್ಬರೂ ಪ್ರತ್ಯೇಕವಾಗಿ ತಮ್ಮಿಷ್ಟದಂತೆ ಬೇರೆ ಬೇರೆ ಮದುವೆಯಾಗಲು ಬಯಸಿದ್ದಾರೆ. ಇದೇ ಕಾರಣಕ್ಕೆ ತಮ್ಮ ಮಕ್ಕಳನ್ನೇ ಮಾರಿದ್ದಾರೆ!

    ಇಂಥ ಒಂದು ವಿಷಾದ ಎನ್ನಿಸುವ ಘಟನೆ ನಡೆದಿರುವುದು ಒಡಿಶಾದ ಬುಡಕಟ್ಟು ಜಿಲ್ಲೆ ಮಲ್ಕಂಗಿರಿಯಲ್ಲಿ. ಒಂದನೇ ಮಗುವನ್ನು ಮಾರಾಟ ಮಾಡಿದ್ದರೂ ಅದು ಬೆಳಕಿಗೆ ಬಂದಿರಲಿಲ್ಲ. ಆದರೆ ಇದೀಗ ದಂಪತಿಯ ಎರಡನೆಯ ಮಗ 9 ವರ್ಷದ ಬಸುದೇವ್​ನನ್ನು ಮಾರಾಟ ಮಾಡಿದ ಮೇಲೆ ಘಟನೆ ಬಹಿರಂಗಗೊಂಡಿದೆ.

    ಬಸುದೇವ್​ನ ತಂದೆ-ತಾಯಿ ಇಬ್ಬರೂ ಬೇರೆ ಬೇರೆ ಮದುವೆಯಾಗಲು ಬಯಸಿದ್ದರು. ಆದ್ದರಿಂದ ಅವರಿಗೆ ಮಕ್ಕಳು ಅಡ್ಡಿಯಾಗುತ್ತಿದ್ದರು. ಆದ್ದರಿಂದ ಇಂಥದ್ದೊಂದು ಕುಕೃತ್ಯಕ್ಕೆ ಇಳಿದಿದ್ದಾರೆ. ಮಾತ್ರವಲ್ಲದೇ ಮಕ್ಕಳನ್ನು ಮಾರಾಟ ಮಾಡಿದ ಮೇಲೆ ಬೇರೆ ಬೇರೆ ಮದುವೆಯಾಗಿ ಸಂಸಾರವನ್ನೂ ಶುರುಮಾಡಿದ್ದಾರೆ.

    ಇತ್ತ ಬಸುದೇವ್ ತನ್ನನ್ನು ಮಾರಾಟ ಮಾಡಿದ ಮನೆಯಲ್ಲಿ ಪಡಬಾರದ ಕಷ್ಟ ಪಟ್ಟಿದ್ದಾನೆ. ಶಾಲೆಗೆ ಹೋಗುತ್ತಿದ್ದ ಆತನನ್ನು ಶಾಲೆಯಿಂದ ಬಿಡಿಸಿ ದನಕಾಯುವುದು ಸೇರಿದಂತೆ ಇನ್ನಿಲ್ಲದ ಕೆಲಸಕ್ಕೆ ಆತನನ್ನು ಒಡ್ಡಲಾಗಿದೆ. ಅಷ್ಟೇ ಅಲ್ಲದೇ ಅವನಿಗೆ ಊಟಕ್ಕೂ ಸರಿಯಾಗಿ ನೀಡುತ್ತಿರಲಿಲ್ಲ.

    ಇದನ್ನೂ ಓದಿ: ಚಿತ್ರೀಕರಣವೂ ಮುಗಿಯಿತು, ಡಾಲಿ ಕಡೆಯಿಂದ ಉಡುಗೊರೆಯೂ ಸಿಕ್ಕಿತು…

    9 ವರ್ಷದ ಬಾಲಕನಿಗೆ ಚಿತ್ರಹಿಂಸೆಯಾಗಿದೆ. ಎಷ್ಟು ಕೆಲಸ ಮಾಡಿದರೂ ತುತ್ತು ಊಟಕ್ಕೂ ಕಷ್ಟವಾಗಿಬಿಟ್ಟಿದೆ. ಇದರಿಂದ ನೊಂದು ಬೆಂದು ಹೋದ ಬಾಲಕ ಅದೊಂದು ದಿನ ಮನೆಯಿಂದ ಓಡಿ ಹೋಗಿ ಸಮೀಪವಿರುವ ಅಂಗನವಾಡಿಯಲ್ಲಿ ಅಡಗಿ ಕುಳಿತ.

    ಅಲ್ಲಿಂದ ಅವನ ಅದೃಷ್ಟ ಬದಲಾಯಿತು. ಅಂಗನವಾಡಿ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಜಯಂತಿ ಖಾರಾ ಅವರು ಬಾಲಕನನ್ನು ನೋಡಿದ್ದಾರೆ. ನಂತರ ಅವನ ಬಳಿ ಏನೆಂದು ವಿಚಾರಿಸಿದ್ದಾರೆ. ಬಾಲಕ ತನ್ನ ಕಥೆ ಹೇಳಿದ್ದಾನೆ. ಜಯಂತಿ ಅವರಿಗೆ ಈತನ ವಿಷಯ ಕೇಳಿ ಕರುಳು ಚುರುಕ್​ ಎಂದಿದೆ. ತಾವೇ ಆಶ್ರಯ ಕೊಟ್ಟಿದ್ದಾರೆ.

    ಇತ್ತ ಬಾಲಕ ನಾಪತ್ತೆಯಾಗಿದ್ದನ್ನು ಕಂಡ ಆತನ ಖರೀದಿದಾರರು, ಸ್ಥಳೀಯ ಆಡಳಿತಕ್ಕೆ ದೂರು ದಾಖಲು ಮಾಡಿದ್ದಾರೆ. ತಮ್ಮ ಮಗನನ್ನು ಅಕ್ರಮವಾಗಿ ಒತ್ತೆಯಾಳಾಗಿ ಇಟ್ಟುಕೊಂಡಿರುವುದಾಗಿ ಹೇಳಿದ್ದಾರೆ. ನಂತರ ಸ್ಥಳೀಯ ಆಡಳಿತ ಸಂಪೂರ್ಣ ವಿಷಯವನ್ನು ಜಯಂತಿ ಹಾಗೂ ಬಾಲಕನಿಂದ ಕೇಳಿ ಪಡೆದಿದೆ.

    ಅದಾಗಲೇ ಬಾಲಕ ತನ್ನ ಸಹೋದರನನ್ನು ಕೂಡ ಅಪ್ಪ-ಅಮ್ಮ ಮಾರಾಟ ಮಾಡಿರುವ ವಿಷಯ ಹೇಳಿದ್ದಾನೆ. ಆದರೆ ಆತ ಎಲ್ಲಿದ್ದಾನೋ ಗೊತ್ತಿಲ್ಲ ಎಂದಿದ್ದಾನೆ. ವಿಷಯ ಕೇಳಿತಿಳಿದ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಆತನ ಪಾಲಕರ ಬಳಿ ಹೋಗಿದ್ದಾರೆ. ಅವರು ತಾವು ಮಗನನ್ನು ಮಾರಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

    ಒಂದು ವೇಳೆ ಪಾಲಕರು  ಅಥವಾ ಅವರ ಹತ್ತಿರದ ಸಂಬಂಧಿ ಬಾಲಕನನ್ನು ಕರೆದುಕೊಂಡು ಹೋಗಿ ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳುವುದಾದರೆ ನಮ್ಮ ಅಭ್ಯಂತರವಿಲ್ಲ. ಒಂದು ವೇಳೆ ಅವರು ಒಪ್ಪದೇ ಹೋದರೆ ಅವನನ್ನು ಸಮಿತಿಯಲ್ಲಿಯೇ ನೋಡಿಕೊಂಡು, ಅವನ ಭವಿಷ್ಯವನ್ನು ರೂಪಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

    ಮಾಜಿ ಸಚಿವನಿಂದ ರೇಪ್​ ಆಗಿದೆ ಎಂದಾಕೆ ಕೋರ್ಟ್​ನಲ್ಲಿ ಇದೆಲ್ಲ ಸುಳ್ಳು ಅನ್ನೋದಾ? ವಕೀಲರೇ ದಂಗು!

    ಹಾಥರಸ್​ನಲ್ಲಿ ಇನ್ನೊಂದು ಭಯಾನಕ ಘಟನೆ- ನಾಲ್ಕು ವರ್ಷದ ಕಂದನ ಮೇಲೆ ಅತ್ಯಾಚಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts