ಹುಬ್ಬಳ್ಳಿ: ಚಲಿಸುತ್ತಿದ್ದ ರೈಲಿನಿಂದ ಬಿದ್ದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಸೂಪರಿಂಟೆಂಡೆಂಟ್ ಇಂಜಿನಿಯರ್ ಮೃತಪಟ್ಟಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ಬಿಬಿಎಂಪಿಯ ಕೆಆರ್ಐಡಿಎಲ್ ವಿಭಾಗದಲ್ಲಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಆಗಿದ್ದ ರಂಗರಾಜು ಎಸ್.ಎ (59) ಮೃತಪಟ್ಟವರು. ರಾತ್ರಿ 11:30 ರ ಸುಮಾರಿಗೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ಇವರು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣಿಸಬೇಕಿತ್ತು. ಆದ್ದರಿಂದ ಹುಬ್ಬಳ್ಳಿ – ಬೆಂಗಳೂರು ರೈಲಿಗೆ ಹತ್ತಬೇಕಿತ್ತು, ಆದರೆ ತಪ್ಪು ತಿಳಿವಳಿಕೆಯಿಂದಾಗಿ ಇವರು ಬೆಳಗಾವಿ- ಬೆಂಗಳೂರು ರೈಲಿಗೆ ಹತ್ತಿದ್ದರು. ರೈಲು ಏರುತ್ತಿದ್ದಂತೆಯೇ ತಾವು ಬೇರೆ ರೈಲು ಹತ್ತಿರುವುದು ತಿಳಿದಿದೆ. ಆಗ ಧಾವಂತದಿಂದ ರೈಲನ್ನು ಇಳಿಯಲು ಪ್ರಯತ್ನಿಸಿದ್ದಾರೆ.
ಅದಾಗಲೇ ರೈಲು ಚಲಿಸಲು ಶುರು ಮಾಡಿತ್ತು. ಲಗುಬಗೆಯಿಂದ ರೈಲು ಚಲಿಸುತ್ತಿರುವಾಗಲೇ ಇಳಿಯಲು ಹೋಗಿದ್ದಾರೆ. ಆಯತಪ್ಪಿ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನಂದಿನಿ ನಕಲಿ ತುಪ್ಪದ ಹಿಂದಿದ್ಯಾ ‘ಮೈಮುಲ್’ ಕೈವಾಡ? ಅಸಲಿ ಲೇಬಲ್ ಬಂದದ್ಹೇಗೆ? ಪೊಲೀಸರು ಮೌನ ವಹಿಸಿದ್ದೇಕೆ?
ಹೊಡಿಯಲ್ಲ, ಬಡಿಯಲ್ಲ… ಎಂಇಎಸ್ ಪುಂಡರು, ‘ಮಹಾ’ ಸರ್ಕಾರಕ್ಕೆ ಕಾರ್ಮಿಕರಿಂದ ಹೀಗೊಂದು ಬಿಗ್ ಶಾಕ್!