ಬೆಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿ ಭ್ರಷ್ಟರಾಗುತ್ತಿರುವ ಅಧಿಕಾರಿಗಳಿಗೆ ಬಿಸಿಮುಟ್ಟಿಸುವ ಕಾರ್ಯವನ್ನು ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಇಂದು ಕೂಡ ಮುಂದುವರೆಸಿದೆ. ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟೂ 60 ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
8 ಎಸ್ಪಿಗಳು, 100 ಅಧಿಕಾರಿಗಳು ಮತ್ತು 300 ಸಿಬ್ಬಂದಿಯ ತಂಡದಿಂದ 15 ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಪ್ರಕರಣಗಳಿಗೆ ಸಂಬಂಧಿಸಿದಂತೆ 60 ಸ್ಥಳಗಳಲ್ಲಿ ಎಸಿಬಿ ಶೋಧ ನಡೆಸಿದೆ.
ಅಧಿಕಾರಿಗಳ ವಿವರ ಇಂತಿದೆ:
1.ಕೆ .ಎಸ್ .ಲಿಂಗೇಗೌಡ
ಕಾರ್ಯನಿರ್ವಾಹಕ ಇಂಜಿನಿಯರ್.
ಸ್ಮಾರ್ಟ್ ಸಿಟಿ .ಮಂಗಳೂರು.
2.ಶ್ರೀನಿವಾಸ್ .ಕೆ.
ಕಾರ್ಯನಿರ್ವಾಹಕ ಇಂಜಿನಿಯರ್.
ಎಚ್ಎಲ್ಬಿಸಿ. ಮಂಡ್ಯ.
3.ಲಕ್ಷ್ಮೀನರಶಿಮಯ್ಯ .
ಕಂದಾಯ ನಿರೀಕ್ಷಕರು.
ದೊಡ್ಡಬಳ್ಳಾಪುರ.
4. ವಾಸುದೇವ್.
ಮಾಜಿ ಪ್ರಾಜೆಕ್ಟ್ ಮ್ಯಾನೇಜರ್.
ನಿರ್ಮಿತಿ ಕೇಂದ್ರ.
ಬೆಂಗಳೂರು.
5. ಬಿ.ಕೃಷ್ಣಾರೆಡ್ಡಿ .
ಜನರಲ್ ಮ್ಯಾನೇಜರ್.
ನಂದಿನಿ ಡೈರಿ,
ಬೆಂಗಳೂರು.
6.ಟಿ.ಎಸ್.ರುದ್ರೇಶಪ್ಪ.
ಜಂಟಿ ನಿರ್ದೇಶಕ,
ಕೃಷಿ ಇಲಾಖೆ.
ಗದಗ.
7.ಎ.ಕೆ.ಮಾಸ್ತಿ
ಸಹಕಾರಿ ಅಭಿವೃದ್ಧಿ ಅಧಿಕಾರಿ.
ಸವದತ್ತಿ (ನಿಯೋಜನೆ) ಬಿಸಿಲಹೊಂಗಲ.
8.ಸದಾಶಿವ ಮರಲಿಂಗಣ್ಣನವರ್.
ಹಿರಿಯ ಮೋಟಾರು ನಿರೀಕ್ಷಕರು.
ಗೋಕಾಕ.
9.ನಾಥಾಜಿ ಹೀರಾಜಿ ಪಾಟೀಲ್. ಗ್ರೂಪ್ ಸಿ.
ಬೆಳಗಾವಿ.ಹೆಸ್ಕಾಂ.
10.ಕೆ.ಎಸ್.ಶಿವಾನಂದ್
ನಿವೃತ್ತ ಸಬ್ ರಿಜಿಸ್ಟ್ರಾರ್, ಬಳ್ಳಾರಿ.
11.ರಾಜಶೇಖರ್ .ಫಿಸಿಯೋಥೆರಪಿಸ್ಟ್.
ಸರ್ಕಾರಿ ಆಸ್ಪತ್ರೆ. ಯಲಹಂಕ.
ಬೆಂಗಳೂರು
12.ಮಾಯಣ್ಣ.ಎಂ.ಎಫ್ಡಿಸಿ.
ಬಿಬಿಎಂಪಿ.ಪ್ರಮುಖ ರೋಫ್ಗಳು ಮತ್ತು ಮೂಲಸೌಕರ್ಯ.ಬೆಂಗಳೂರು.
13.ಎಲ್.ಸಿ.ನಾಗರಾಜ್.ಆಡಳಿತಾಧಿಕಾರಿ.ಸಕಾಲ.
ಬೆಂಗಳೂರು.
14.ಜಿ.ವಿ.ಗಿರಿ.ಗುಂಪು.ಡಿ.
ಬಿಬಿಎಂಪಿ.
ಯಶವಂತಪುರ,
ಬೆಂಗಳೂರು.
15.ಎಸ್.ಎಂ..ಬಿರಾದಾರ್.
ಜೂನಿಯರ್ ಇಂಜಿನಿಯರ್.ಪಿಡಬ್ಲ್ಯೂಡಿ ಇಲಾಖೆ.
ಜೇವರ್ಗಿ.
VIDEO: ಏಳು ಗಂಟೆ ಶವಾಗಾರದ ಫ್ರೀಜರ್ನಲ್ಲಿದ್ದ ಮೃತದೇಹ ಎದ್ದು ಉಸಿರಾಡಿತು! ವಿಡಿಯೋ ವೈರಲ್
ಮಾಸ್ಕ್ ಒಳಗೆ ಬ್ಯಾಟರಿ, ಚಾರ್ಜಿಂಗ್, ಸಿಮ್ ಕಾರ್ಡ್! ಕಾನ್ಸ್ಟೆಬಲ್ ನೇಮಕಾತಿ ಪರೀಕ್ಷೆಯ ಅಕ್ರಮದ ಪರಿ ಇದು…