More

    ಮೃತ ಮಗನ ಜನ್ಮದಿನಕ್ಕೆ ನೋಟ್ ಬುಕ್ ವಿತರಣೆ

    ಕನಕಗಿರಿ: ಪಟ್ಟಣದ ನಿವಾಸಿ ಹೊನ್ನಪ್ಪ ನಾಯಕ ಅವರು ಮೃತ ಮಗನ ಜನ್ಮದಿನ ಅಂಗವಾಗಿ ಇಲ್ಲಿನ ರುದ್ರಸ್ವಾಮಿ ಗ್ರಾಮೀಣ ವಿದ್ಯಾವರ್ಧಕ ಸಂಘದ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್ ಶನಿವಾರ ವಿತರಿಸಿ ಕಳಕಳಿ ಮೆರೆದಿದ್ದಾರೆ.

    800 ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್, ಪೆನ್ ವಿತರಣೆ

    ಹೊನ್ನಪ್ಪನರ ಪುತ್ರ ಕನಕಮೂರ್ತಿ ಕಳೆದ ವರ್ಷದ ಯುಗಾದಿ ಕರಿಯಂದು ಸ್ನಾನಕ್ಕೆಂದು ತೆರಳಿದ್ದಾಗ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದ. ಮಗನ ಸ್ಮರಣಾರ್ಥವಾಗಿ ಪ್ರೌಢ ಶಾಲೆಯ 800 ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್, ಪೆನ್ ವಿತರಿಸಿದರು.
    ವಿದ್ಯಾವರ್ಧಕ ಸಂಸ್ಥೆಯ ಆಡಳಿತಾಧಿಕಾರಿ ರಾಮಣ್ಣ ಕುಕನೂರು ಮಾತನಾಡಿ, ಮಗನ ಅಕಾಲಿಕ ಸಾವಿನ ನೋವಿನಲ್ಲಿ ಮಹತ್ತರ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಇದನ್ನೂ ಓದಿ:‘ನಾ ನಿನ್ನ ಮದ್ವೆ ಆಗಲ್ಲ’ ಎಂದಿದ್ದೇ ದ್ವಿತೀಯ ಪಿಯು ವಿದ್ಯಾರ್ಥಿನಿ ಮಾಡಿದ ತಪ್ಪಾ?

    ಮುಖ್ಯ ಶಿಕ್ಷಕಿ ಶಶಿಕಲಾ, ಮಹ್ಮದ್ ರಫಿ, ಶಿಕ್ಷಕರಾದ ಮಲ್ಲಿಕಾರ್ಜುನ ಬಾವಿಕಟ್ಟಿ, ಗಂಗಾಧರ ಗದ್ದಿ, ಶಿವರೆಡ್ಡಿ ಮಣ್ಣೂರು, ರಮೇಶ ಎಲಿಗಾರ, ಮೌನೇಶ ಬಡಿಗೇರ, ಮುಖಂಡರಾದ ರಂಗಪ್ಪ ಕೊರಗಟಗಿ, ಹೊನ್ನಮ್ಮ ನಾಯಕ, ಚೈತ್ರಾ ನಾಯಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts