ಬಾಗಲಕೋಟೆ: ದೇಶದ ಜನರಿಗೆ ಆರ್ಎಸ್ಎಸ್ ಅಂದರೆ ಏನು ಅಂತ ಗೊತ್ತಿದೆ ಎನ್ನುವ ಮೂಲಕ ಆರ್ಎಸ್ಎಸ್ ನವರನ್ನು ಪ್ರಶ್ನೆ ಕೇಳಿದರೆ ಬರಿ ಬಿಜೆಪಿ ನಾಯಕರೇ ಉತ್ತರ ಕೊಡ್ತಾರೆ ಎಂಬ ಸಿದ್ದು ಹೇಳಿಕೆಗೆ ಸಚಿವ ಗೋವಿಂದ ಕಾರಜೋಳ ತಿರುಗೇಟು ನೀಡಿದರು.
ಸಿದ್ದರಾಮಯ್ಯ ನವರು ಒಂದು ಸತ್ಯ ಅರ್ಥ ಮಾಡಿಕೊಳ್ಳಬೇಕು. ಆರ್ಎಸ್ಎಸ್ ನವರು ರಾಜಕಾರಣಿಗಳಲ್ಲ. ಆರ್ಎಸ್ಎಸ್ ನವರು ದೇಶ ಭಕ್ತರು. ದೇಶದಲ್ಲಿ ಶರಣರು, ಸಂತರು, ಸೂಫಿ ಸಂತರು ಹೇಗೆ ಆಗಿ ಹೋಗಿದ್ದಾರೋ, ಆ ರೀತಿ ದೇಶದ ಬಗ್ಗೆ ಗೌರವ ಇಟ್ಟುಕೊಂಡು ದೇಶದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡತಕ್ಕಂತಹ ದೇಶ ಭಕ್ತರು ಇರುವಂತಹ ಸಂಸ್ಥೆ ಆರ್ಎಸ್ಎಸ್.
ಇದನ್ನು ರಾಜಕೀಕರಣಗೊಳಿಸಲು ಸಿದ್ದರಾಮಯ್ಯ ಪ್ರಯತ್ನ ಮಾಡುತ್ತಿದ್ದಾರೆ. ಅದನ್ನು ನಾನು ಖಂಡಿಸುತ್ತೇನೆ. ಸಿದ್ದರಾಮಯ್ಯ ಕೇವಲ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಆರ್ಎಸ್ಎಸ್ ಎಳೆದು ತರುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಯತ್ನಕ್ಕೆ ಫಲ ಸಿಗುವ ಸಾಧ್ಯತೆ ಇಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದ 130 ಕೋಟಿ ಜನರಿಗೆ ಆರ್ ಎಸ್ ಎಸ್ ಅಂದರೆ ಏನು ಅಂತ ಗೊತ್ತಿದೆ ಎಂದರು.
ಎಲ್ಲೆಲ್ಲೂ ಪಠ್ಯಪುಸ್ತಕ ಪರಿಷ್ಕರಣೆ ಪರ-ವಿರೋಧ, ಈ ಶಾಲೆಯಲ್ಲಿ ಊರ ಹೆಸರಿನದ್ದೇ ವಿವಾದ..