More

    25 ಸಾವಿರ ರೂ. ಲಂಚಕ್ಕೆ ಬೇಡಿಕೆ: ಬೆಸ್ಕಾಂ AEE ಭಾರತಿ, AE ಕುನಾಲ್​ ಲೋಕಾಯುಕ್ತ ಬಲೆಗೆ

    ಬೆಂಗಳೂರು: ಪವರ್ ಸಪ್ಲೈ ಅಪ್​​ಗ್ರೇಡ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಬೆಸ್ಕಾಂ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ಇಂದು (ಮಾ.18) ಬಲೆಗೆ ಕೆಡವಿದ್ದಾರೆ.

    ಬಂಧಿತ ಅಧಿಕಾರಿಗಳನ್ನು ಬೆಸ್ಕಾಂ ಎಇಇ ಭಾರತಿ ಹಾಗೂ ಎಇ ಕುನಾಲ್ ಕುಮಾರ್ ಎಂದು ಗುರುತಿಸಲಾಗಿದೆ. ಇಬ್ಬರೂ ಕೂಡ ಸುಮನಹಳ್ಳಿ ಬೆಸ್ಕಾಂ ಉಪವಿಭಾಗದ ಅಧಿಕಾರಿಗಳು.

    ಇದನ್ನೂ ಓದಿ: ಬೆಂಗಳೂರಿನ ಈ ವ್ಯಕ್ತಿ ಹಗಲು ಆಟೋ ಚಾಲಕ; ರಾತ್ರಿ ಹಣಕಾಸು ಸಲಹೆಗಾರ!

    ಪವರ್ ಸಪ್ಲೈ ಅಪ್​​ಗ್ರೇಡ್​​ಗಾಗಿ ದೂರುದಾರ ಅನಂತ ರಾಜು ಅವರು ಅರ್ಜಿ ಸಲ್ಲಿಸಿದ್ದರು. ಆದರೆ, ಕೆಲಸ ಮಾಡಿಕೊಡಲು 25 ಸಾವಿರ ರೂ. ಲಂಚ ಕೊಡುವಂತೆ ಇಬ್ಬರು ಅಧಿಕಾರಿಗಳು ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಲೋಕಾಯುಕ್ತಕ್ಕೆ ಅನಂತರಾಜು ದೂರು ನೀಡಿದ್ದರು.

    ದೂರಿನ ಅನ್ವಯ ಇಬ್ಬರೂ ಅಧಿಕಾರಿಗಳಿಗೆ ಬಲೆ ಬೀಸಿದ ಲೋಕಾಯುಕ್ತ ಪೊಲೀಸರು ಲಂಚ ಸ್ವೀಕರಿಸುವ ವೇಳೆ ರೆಡ್​ಹ್ಯಾಂಡ್​ ಆಗಿ ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಕ್ಲಾಸ್​​ರೂಮ್​ನಲ್ಲಿ ವಿಭಿನ್ನವಾಗಿ ಲವ್​ ಪ್ರಪೋಸ್​ ಮಾಡಲು ಹೋದ ಹುಡುಗನಿಗೆ ಹೀಗಾಗಬಾರದಿತ್ತು…

    ಆ್ಯಂಟಿ-ಇಂಡಿಯಾ ಗ್ಯಾಂಗ್​ನ ಕೆಲ ನ್ಯಾಯಾಧೀಶರು ನ್ಯಾಯಾಂಗವನ್ನು ಸರ್ಕಾರದ ವಿರುದ್ಧ ಹೋಗುವಂತೆ ಮಾಡುತ್ತಿದ್ದಾರೆ: ಕೇಂದ್ರ ಸಚಿವ ಕಿರಣ್ ರಿಜಿಜು

    ಹಾಸನ | ಕರ್ಕಶ ಧ್ವನಿ ಮಾಡುತ್ತಾ ಬೈಕ್ ಚಾಲನೆ ಮಾಡಿದ್ದಕ್ಕೆ ಆರಂಭವಾದ ಜಗಳ ಓರ್ವನ ಹತ್ಯೆಯಲ್ಲಿ ಅಂತ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts