More

    ಯುವತಿಗೆ 15 ಲಕ್ಷ ರೂ. ವಂಚಿಸಿದ ಜೋತಿಷಿ

    ಬೆಂಗಳೂರು: ಕುಟುಂಬಕ್ಕೆ ಕಂಟಕ ಇದೆ. ಅದರ ಪರಿಹಾರಕ್ಕೆ ಪೂಜೆ ಮಾಡಿಸಬೇಕು ಎಂದು ಯುವತಿಯನ್ನು ನಂಬಿಸಿದ್ದ ಅಪರಿಚಿತ ವ್ಯಕ್ತಿ, 15 ಲಕ್ಷ ರೂ. ಪಡೆದು ವಂಚಿಸಿದ್ದಾನೆ

    ಸುಬ್ಬನಪಾಳ್ಯ ನಿವಾಸಿ 28 ವರ್ಷದ ಯುವತಿ ವಂಚನೆಗೊಳಗಾದಾಕೆ. ಅಪರಿಚಿತ ವ್ಯಕ್ತಿ ವಿರುದ್ದ ಪೂರ್ವ ವಿಭಾಗದ ಸೈಬರ್ ಕ್ರೖೆಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತ ಯುವತಿ ಏಪ್ರಿಲ್​ನಲ್ಲಿ ಭವಿಷ್ಯ ಕೇಳುವ ಸಲುವಾಗಿ ಗೂಗಲ್​ನಲ್ಲಿ ಜೋತಿಷಿ ಫೋನ್ ನಂಬರ್ ಹುಡುಕಿದ್ದಳು. ಅದರಲ್ಲಿ ಸಿಕ್ಕ ನಂಬರ್​ಗೆ ಕರೆ ಮಾಡಿ ವಿಚಾರಿಸಿದ್ದಳು. ಜೋತಿಷ್ಯ ಹೇಳುವ ಸೋಗಿನಲ್ಲಿ ಯುವತಿ ಜತೆ ಮಾತನಾಡಿದ್ದ ವ್ಯಕ್ತಿ, ಜನ್ಮ ದಿನಾಂಕ ಮತ್ತಿತರ ಮಾಹಿತಿ ಪಡೆದುಕೊಂಡಿದ್ದ.

    ‘ನಿಮಗೆ ಸಮಸ್ಯೆ ಇದೆ. ನಿಮ್ಮ ತಂದೆ-ತಾಯಿಗೆ ಹಾಗೂ ಮದುವೆಯಾಗಲಿರುವ ಹುಡುಗನಿಗೆ ಗಂಡಾಂತರವಿದೆ. ಇಡೀ ಕುಟುಂಬಕ್ಕೆ ಕಂಟಕವಿದೆ ಎಂದು ಬೆದರಿಸಿದ್ದ. ಅಲ್ಲದೆ, ಪರಿಹಾರ ಪೂಜೆ ಮಾಡಿಸಬೇಕು’ ಎಂದಿದ್ದ. ಆತನ ಮಾತನ್ನು ನಂಬಿದ ಯುವತಿ ಹಂತಹಂತವಾಗಿ ಆತನ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಜಮೆ ಮಾಡಿದ್ದಾಳೆ. ಹಣ ಪಡೆದ ನಂತರ ಆತ ಸಂಪರ್ಕಕ್ಕೆ ಸಿಕ್ಕಿಲ್ಲ. ವಂಚನೆ ಆಗಿರುವ ವಿಚಾರ ತಿಳಿದ ಯುವತಿಯ ಪಾಲಕರು ಪೊಲೀಸರ ಮೊರೆ ಹೋಗಿದ್ದಾರೆ.

    ಸೋಂಕಿದ್ದರೂ ಶಿಶುವಿಗೆ ಹಾಲುಣಿಸಲು ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts