More

    ಗದಗ-ಬೆಟಗೇರಿ ರೋಟರಿ ಕ್ಲಬ್ ಸ್ಮಾರ್ಟ್ ಕನ್ನಡಕ ವಿತರಣೆ, ಕಣ್ಣಿನ ತಪಾಸಣೆ-ರಕ್ಷಣೆ ಅಗತ್ಯ : ಡಾ.ಆರ್.ಎಸ್.ಬಳ್ಳಾರಿ

    ಗದಗ: ದೃಷ್ಠಿಯು ನಮ್ಮ ದೇಹದ ಅತ್ಯಂತ ನಿರ್ಣಾಯಕ ಇಂದ್ರೀಯಗಳಲ್ಲಿ ಒಂದಾಗಿದೆ. ಪ್ರತಿಯೊಬ್ಬರೂ ನಿಯಮಿತವಾಗಿ ನುರಿತ ವೈದ್ಯರಿಂದ ಆಗಾಗ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಕಣ್ಣುಗಳ ರಕ್ಷಣೆಗೆ ಮುಂದಾಗಬೇಕೆAದು ಗದುಗಿನ ಖ್ಯಾತ ವೈದ್ಯರಾದ ಡಾ.ರಾಜಶೇಖರ ಬಳ್ಳಾರಿ ಹೇಳಿದರು.
    ಅವರು ಗುರುವಾರ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಎಸ್.ಆರ್.ಪಿ ಕೇಂದ್ರದಲ್ಲಿ ಅಂಧ ವಿದ್ಯಾರ್ಥಿಗಳಿಗೆ ಭಾರತ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಹಾಗೂ ರೋಟರಿ ಸಂಸ್ಥೆ ಮದ್ರಾಸ್ ಪೂರ್ವ ಸಂಸ್ಥೆಯು ರೋಟರಿ ಕ್ಲಬ್ ಗದಗ-ಬೆಟಗೇರಿ ಹಾಗೂ ರೋಟರಿ ಸಂಸ್ಥೆ ಶಿರ್ಶಿಯ ಮುಖಾಂತರ ನೀಡಲಾದ ಸ್ಮಾರ್ಟ್ ವ್ಹಿಜನ್ ಗ್ಲಾಸಿಸ್ (ಕನ್ನಡಕ) ವಿತರಿಸಿ ಮಾತನಾಡಿದರು.
    ಈ ಸ್ಮಾರ್ಟ್ ವ್ಹಿಜನ್ ಗ್ಲಾಸಿಸ್ (ಕನ್ನಡಕ) ಉಪಕರಣವು ಒಂದಕ್ಕೆ ಸುಮಾರು ೩೦ ಸಾವಿರ ರೂ.ಗಳಾಗಿದ್ದು ಕುರಡತನದ ತೊಂದರೆಯಲ್ಲಿರುವ ಮಕ್ಕಳಿಗೆ ಓದು ಬರಹದಲ್ಲಿ ಇದು ಸಹಾಯವಾಗಲಿದೆ. ಇದನ್ನು ಸೂಕ್ಷö್ಮವಾಗಿ ಉಪಯೋಗಿಸಿ ನಂತರ ಸೂಕ್ತ ಸ್ಥಳದಲ್ಲಿ ಭದ್ರವಾಗಿ ಇಡಬೇಕೆಂದರು.
    ಸ್ಮಾರ್ಟ್ ವ್ಹಿಜನ್ ಗ್ಲಾಸಿಸ್ (ಕನ್ನಡಕ) ಕುರಿತು ಮಾತನಾಡಿದ ರೋಟರಿ ಸಂಸ್ಥೆ ಗದಗ ಬೆಟಗೇರಿ ವಲ್‌ಫೇರ್ ಸೊಸಾಯಿಟಿಯ ಅಧ್ಯಕ್ಷ ಶ್ರೀಧರ ಸುಲ್ತಾನಪೂರ ಅಂಧ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಇದು ಸಹಾಯಕಾರಿ ಆಗುವುದಲ್ಲದೆ ಚಲನೆಯಲ್ಲಿ ಸೂಕ್ತ ಮಾರ್ಗದರ್ಶನ ನೀಡಲಿದೆ ಎಂದರು.
    ಮುಖ್ಯ ಅತಿಥಿಯಾಗಿ ಮಾತನಾಡಿದ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಬುರಡಿ ಮಾತನಾಡಿ ಗದಗ-ಬೆಟಗೇರಿ ರೋಟರಿ ಕ್ಲಬ್ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಹಲವಾರು ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಂಡಿದೆ. ಎಸ್.ಎಸ್.ಎಲ್.ಸಿ ನಂತರ ಮುಂದೇನು ? ಮಾರ್ಗದರ್ಶಕ ಸರಣಿ ಕಾರ್ಯಕ್ರಮಗಳನ್ನು ರೂಪಿಸಿದ್ದು ಸೂಕ್ತ ಮಾರ್ಗದರ್ಶನ ಮಾಡುತ್ತಿದೆ ಎಂದರು.
    ಅಧ್ಯಕ್ಷತೆ ವಹಿಸಿ ಮಾತನಾಡಿದ ಗದಗ-ಬೆಟಗೇರಿ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಮೌಳಿ ಜಾಲಿ ಅವರು ಅಂಧತ್ವ ಎಂಬುದನ್ನು ನಾವು ಸಂಪೂರ್ಣವಾಗಿ ತೆಗೆದು ಹಾಕಲಾಗದಿದ್ದರೂ ಇಂತಹ ಉಪಕರಣಗಳನ್ನು ಮಕ್ಕಳಿಗೆ ಅಳವಡಿಸುವ ಮೂಲಕ ಅವರಲ್ಲಿ ಹೊಸ ಚೈತನ್ಯ ತುಂಬಿ ಮುಖ್ಯವಾಹಿನಿಗೆ ಬರುವಲ್ಲಿ ಸಹಕಾರಿ ಆಗಲಿದೆ ಎಂದರು.
    ಎಚ್.ಎಸ್.ಪಾಟೀಲ, ಬಾಲಕೃಷ್ಣ ಕಾಮತ್ ಅವರು ಮಕ್ಕಳಿಗೆ ಸ್ಮಾರ್ಟ್ ವ್ಹಿಜನ್ ಗ್ಲಾಸಿಸ್ (ಕನ್ನಡಕ) ಅಳವಡಿಸಿ ಪ್ರಾಯೋಗಿಕ ತಿಳುವಳಿಕೆ ನೀಡಿದರು.
    ಸಂಕೇತ ಕುಲಕರ್ಣಿ, ಮಲ್ಲೀಕ ಬೆದವಟ್ಟಿ, ಉದಯ ಬಣಕಾರ, ಶ್ರೀನಿವಾಸ ದೊಡ್ಡಮನಿ, ಸಂಗೀತಾ ಭರಮಗೌಡ್ರ, ಜಗದೀಶ ಜೋಗಿ, ನಾಗಪ್ಪ ಶಿರೋಳ ಸೇರಿದಂತೆ ೧೦ ಜನರಿಗೆ ಸ್ಮಾರ್ಟ್ ವ್ಹಿಜನ್ ಗ್ಲಾಸಿಸ್ (ಕನ್ನಡಕ) ವಿತರಿಸಲಾಯಿತು.
    ಗಾಯಕಿ ಸಂಗೀತಾ ಭರಮಗೌಡ್ರ ಪ್ರಾರ್ಥಿಸಿದರು, ಕ್ಲಬ್ ಕಾರ್ಯದರ್ಶಿ ಪ್ರೊ.ವೀಣಾ ತಿರ್ಲಾಪೂರ ಸ್ವಾಗತಿಸಿದರು, ಶಿವಾಚಾರ್ಯ ಹೊಸಳ್ಳಿಮಠ ನಿರೂಪಿಸಿದರು ಕೊನೆಗೆ ಕವಿತಾ ಬೇಲೇರಿ ವಂದಿಸಿದರು.
    ಕಾರ್ಯಕ್ರಮದಲ್ಲಿ ಶಶಿಧರ ಚಳಗೇರಿ, ರವಿ ಹೆಬ್ಬಳ್ಳಿ, ಸುನೀತಾ ತಿಮ್ಮನಗೌಡ್ರ, ಶ್ರೀಮತಿ ಕಟಗಿ ಹಾಗೂ ಪಾಲಕ ಪೋಷಕರು ವಿದ್ಯಾರ್ಥಿಗಳೊಂದಿಗೆ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts