ಉಡುಪಿ: ಬೋರ್ವೆಲ್ ಕೊರೆಯುವಾಗ ಮಣ್ಣು ಕುಸಿದು, ಹೊಂಡದಲ್ಲಿ ಬಿದ್ದಿದ್ದ ರೋಹಿತ್ ಖಾರ್ವಿಯನ್ನು ರಕ್ಷಣೆ ಮಾಡಲಾಗಿದೆ.
ಬೈಂದೂರಿನ ಮರವಂತೆಯಲ್ಲಿ ಇಂದು ಬೆಳಗ್ಗೆ 9 ಗಂಟೆಗೆ ಘಟನೆ ನಡೆದಿತ್ತು. ಕೊಳವೆಬಾವಿ ತೋಡುತ್ತಿದ್ದಾಗ ಪೈಪ್ ಸುತ್ತ ಮಣ್ಣು ಕುಸಿದಿದ್ದರಿಂದ ಸ್ಥಳದಲ್ಲಿದ್ದ ರೋಹಿತ್ ಹೊಂಡದೊಳಗೆ 15 ಅಡಿ ಆಳಕ್ಕೆ ಬಿದ್ದಿದ್ದರು.
ಆತನನ್ನು ರಕ್ಷಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದರು. ಸ್ಥಳೀಯರೂ ಕೈ ಜೋಡಿಸಿದ್ದರು. ಸತತ ಆರು ಗಂಟೆ ಕಾರ್ಯಾಚರಣೆ ಮುಗಿದ ಬಳಿಕ ಅಂದರೆ ಮಧ್ಯಾಹ್ನ 3 ಗಂಟೆಗೆ ರೋಹಿತ್ನನ್ನು ಹೊಂಡದಿಂದ ಹೊರತೆಗೆಯಲಾಗಿದೆ.
ಇದನ್ನೂ ಓದಿ: ಬೋರ್ವೆಲ್ ಕೊರೆಯುವಾಗ ಮಣ್ಣು ಕುಸಿತ; ಹೊಂಡದೊಳಗೆ ಬಿದ್ದವನ ರಕ್ಷಣಾ ಕಾರ್ಯಾಚರಣೆ
ರೋಹಿತ್ಗೆ ಯಾವುದೇ ಗಾಯಗಳಾಗಿಲ್ಲ. ಆದರೂ ಆರೋಗ್ಯ ತಪಾಸಣೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. (ದಿಗ್ವಿಜಯ ನ್ಯೂಸ್)