ಉಡುಪಿ: ಬೋರ್ವೆಲ್ ಕೊರೆಯುವಾಗ ಮಣ್ಣು ಕುಸಿದು ರೋಹಿತ್ ಖಾರ್ವಿ ಎಂಬಾತ ಹೊಂಡದಲ್ಲಿ ಸಿಲುಕಿದ್ದಾನೆ.
ಬೈಂದೂರಿನ ಮರವಂತೆಯಲ್ಲಿ ಘಟನೆ ನಡೆದಿದೆ. ಅಲ್ಲಿ ಕೊಳವೆ ಬಾವಿ ತೋಡಲಾಗುತ್ತಿತ್ತು. ಈ ವೇಳೆ ಬೋರ್ವೆಲ್ ಪೈಪ್ ಸುತ್ತ ಮಣ್ಣು ಕುಸಿದಿದ್ದರಿಂದ ಸ್ಥಳದಲ್ಲಿದ್ದ ರೋಹಿತ್ ಭೂಮಿಯಾಳದಲ್ಲಿ 15 ಅಡಿ ಕುಸಿದಿದ್ದಾನೆ.
ರೋಹಿತ್ನನ್ನು ರಕ್ಷಿಸಲು ಅಗ್ನಿಶಾಮಕದ ದಳದ ಸಿಬ್ಬಂದಿ ಆಗಮಿಸಿದ್ದಾರೆ. ಅವರೊಂದಿಗೆ ಸ್ಥಳೀಯರೂ ಕೈ ಜೋಡಿಸಿದ್ದಾರೆ. ವೈದ್ಯರು ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ಹೊಂಡದ ಸುತ್ತ ಮಣ್ಣು ಮತ್ತೆ ಕುಸಿಯಬಾರದು ಎಂದು ಅದರೊಳಗೆ ಡ್ರಮ್ ಅಳವಡಿಸಲಾಗಿದೆ.
ಹೊಂಡದಲ್ಲಿ ಇರುವ ರೋಹಿತ್ಗೆ ಯಾವುದೇ ಅಪಾಯ ಸದ್ಯಕ್ಕಿಲ್ಲ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್)