ಬೆಂಗಳೂರು: ನಿಮ್ಮ ಜೀವನ-ದೇಹ ನಿಮ್ಮದಲ್ಲ. ಅದನ್ನು ನಿಮ್ಮ ಅಪ್ಪ-ಅಮ್ಮ ಕೊಟ್ಟಿರುವ ಭಿಕ್ಷೆ. ಇದನ್ನರಿತುಕೊಂಡು ನಡೆಯಿರಿ ಎಂದು ನಟ ಯಶ್ ರಾಜ್ಯದ ಯುವಜನತೆಗೆ ಸಂದೇಶ ನೀಡಿದ್ದಾರೆ.
‘ನನಗೂ ಮಕ್ಕಳಿದ್ದಾರೆ. ಅವರಿಗೆ ಏನು ಸಮಸ್ಯೆ ಆಗುತ್ತೋ ಅಂತಾ ಅಪ್ಪ-ಅಮ್ಮ ಯೋಚನೆ ಮಾಡ್ತಾರೆ. ತುತ್ತು ಕೊಟ್ಟು ಮುಂದೆ ಏನೋ ಮಾಡಬೇಕು ಅಂತಾ ಬೆಳೆಸಿರ್ತಾರೆ. ಅಪ್ಪ-ಅಮ್ಮನಿಗಾಗಿ ಗೌರವ ತರುವ ಕೆಲಸ ಮಾಡಿ ಎಂದು ಸಲಹೆ ನೀಡಿದ್ದಾರೆ’. ಅಷ್ಟಕ್ಕೂ ಈ ಮಾತನ್ನು ಯಶ್ ಹೇಳಿದ್ದು ಯಾವ ಕಾರಣಕ್ಕೆ ಗೊತ್ತಾ ಇದನ್ನೂ ಓದಿರಿ ‘ನಂಗೆ ಸಂಜನಾನೂ ಗೊತ್ತಿಲ್ಲ, ರಾಗಿಣಿನೂ ಗೊತ್ತಿಲ್ಲ… ಗೊತ್ತಿರೋದು ನನ್ನ ಹೆಂಡ್ತಿ ಮಾತ್ರ’
ಡ್ರಗ್ಸ್ ಮಾಫಿಯಾದ ಬೇರು ಎಲ್ಲೆಡೆ ವ್ಯಾಪಿಸಿಕೊಂಡಿದ್ದು, ದುಶ್ಚಟಕ್ಕೆ ಹಲವರು ಬಲಿಯಾಗಿದ್ದಾರೆ, ಬಹುತೇಕರು ಡ್ರಗ್ಸ್ ಜಾಲಕ್ಕೆ ಸಿಲುಕಿ ಬದುಕನ್ನೇ ಸರ್ವನಾಶ ಮಾಡಿಕೊಳ್ಳುತ್ತಿದ್ದಾರೆ. ಕಳೆದ ವಾರದಿಂದ ರಾಜ್ಯದಲ್ಲೂ ಡ್ರಗ್ಸ್ ಮಾಫಿಯಾ ಭಾರೀ ಸದ್ದು ಮಾಡುತ್ತಿದ್ದು, ಈ ಕೇಸ್ನಲ್ಲಿ ಸ್ಯಾಂಡಲ್ವುಡ್ನ ನಟಿಯರಿಬ್ಬರು ಅರೆಸ್ಟ್ ಆಗಿದ್ದಾರೆ.
ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಯಶ್, ಡ್ರಗ್ಸ್ ಅನ್ನೋದು ದೇಶ ಹಾಗೂ ಜಗತ್ತಿಗೆ ಮಾರಕ. ಈ ದಂಧೆಯಲ್ಲಿ 10 ವಲಯದವರೂ ಇರ್ತಾರೆ. ಆದರೆ ಅದರಲ್ಲಿ ಹೈಲೆಟ್ ಆಗೋದು ಕನ್ನಡ ಚಿತ್ರರಂಗ ಮಾತ್ರ. ಬರೀ ಚಿತ್ರರಂಗ ಅಂತಾ ಹೇಳೋದು ಸರಿಯಲ್ಲ. ರಾಜ್ಯದ ಕೆಲ ಯುವಕರು-ಯುವತಿಯರು, ಜನರು ಅಂತಾ ಹೇಳಿ. ಈ ಮಾಫಿಯಾದಿಂದ ಎಲ್ಲ ವಲಯದಲ್ಲೂ ಸಮಸ್ಯೆ ಆಗ್ತಿದೆ ಎಂದರು.
ಡ್ರಗ್ಸ್ ನಿಯಂತ್ರಣ ಕುರಿತು ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಮಾಧ್ಯಮಗಳು ಒಳ್ಳೆಯ ಕೆಲಸ ಮಾಡುತ್ತಿವೆ ಎಂದ ಯಶ್, ದರಿದ್ರ ಡ್ರಗ್ಸ್ ತಗೊಂಡು ಹಾಳಾಗಬಾರದು. ಮರ್ಯಾದೆಯಿಂದ ಇಂತಹ ದುಶ್ಚಟಗಳನ್ನು ಬಿಟ್ಟು, ಅಪ್ಪ-ಅಮ್ಮನಿಗಾಗಿ ಬದುಕಿ ಎಂದು ಸಂದೇಶ ನೀಡಿದರು.
ಡ್ರಗ್ಸ್ ಕೇಸ್ನಲ್ಲಿ ಬರೀ ಹೆಣ್ಮಕ್ಕಳದ್ದೇ ಹೆಸರು; ನಟಿ ಪಾರುಲ್ ಆಕ್ರೋಶ