More

    ರಾಮಮಂದಿರ ಶಿಲಾನ್ಯಾಸ ನಿಮಿತ್ತ ‘ರಾಬರ್ಟ್’​ ತಂಡದಿಂದ ಹೀಗೊಂದು ಪ್ರಯತ್ನ..

    ಚಾಲೆಂಜಿಂಗ್​ ದರ್ಶನ್​ ನಾಯಕನಾಗಿ ನಟಿಸಿರುವ ರಾಬರ್ಟ್​ ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಏಪ್ರಿಲ್​ ವೇಳೆಗೆ ಸಿನಿಮಾ ತೆರೆಕಂಡಿರಬೇಕಿತ್ತು. ಆದರೆ. ಕರೊನಾ ಹಾವಳಿಯಿಂದಾಗಿ ಚಿತ್ರಮಂದಿರ ಸ್ಥಗಿತಗೊಂಡವು. ಹಾಗಾಗಿ ಸದ್ಯಕ್ಕೆ ಬಿಡುಗಡೆ ಯಾವಾಗ ಎಂಬ ಬಗ್ಗೆ ನಿಖರ ಮಾಹಿತಿ ಚಿತ್ರತಂಡದ ಬಳಿಯೂ ಇಲ್ಲ. ಈ ನಡುವೆ ಇದೇ ಚಿತ್ರತಂಡ ಅಭಿಮಾನಿಗಳಿಗೆ ಮಾತ್ರ ನಿರಾಸೆ ಮಾಡುತ್ತಿಲ್ಲ. ಒಂದಿಲ್ಲೊಂದು ಪೋಸ್ಟರ್​, ಟೀಸರ್ ಹಾಡಿನ ಮೂಲಕವೇ ಕ್ರೇಜ್​ ಸೃಷ್ಟಿಸಿದೆ.

    ಇದನ್ನೂ ಓದಿ; ಹುಟ್ಟುಹಬ್ಬಕ್ಕೆ ಗಿಡ ನೆಡಲು ಆಶಿಕಾ ಮನವಿ

    ಇದೀಗ ರಾಮಮಂದಿರ ಶಿಲಾನ್ಯಾಸ ಕುರಿತಾಗಿಯೂ ರಾಬರ್ಟ್ ತಂಡದಿಂದ ವಿಶೇಷ ಪೋಸ್ಟರ್​ಗಳನ್ನು ಬಿಡುಗಡೆ ಮಾಡಿದ್ದಾರೆ ನಿರ್ದೇಶಕ ತರುಣ್​ ಸುಧೀರ್​. ಇಂಗ್ಲಿಷ್​ ವರ್ಣಮಾಲೆಯ 26 ಅಕ್ಷರಗಳಿಗೆ ರಾಬರ್ಟ್​ ಟಚ್​ ಕೊಟ್ಟಿದ್ದಾರೆ. ಅಂದರೆ, ಸೊಷಿಯಲ್​ ಮೀಡಿಯಾ ಡಿಪಿಗಳಾಗಿ ಬಳಸಿಕೊಳ್ಳುವಂತೆ ದರ್ಶನ್​ ಅವರ ಶ್ರೀರಾಮ ರೂಪಿ ಫೋಟೋಗಳನ್ನೂ ಆ್ಯಡ್​ ಮಾಡಿದ್ದಾರೆ. ಅವೆಲ್ಲವುಗಳನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ ತರುಣ್​.

    ರಾಬರ್ಟ್​ ಚಿತ್ರದಲ್ಲಿ ದರ್ಶನ್​ ಹಲವು ಬಗೆಯ ಪೋಷಾಕು ತೊಟ್ಟಿದ್ದಾರೆ. ಅದರಲ್ಲಿ ಶ್ರೀರಾಮನ ಭಕ್ತ ಹನುಮನಾಗಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಈ ಸುದಿನವನ್ನೇ ಬಳಸಿಕೊಂಡಿರುವ ನಿರ್ದೇಶಕರು, ಅಕ್ಷರಗಳಲ್ಲಿಯೇ ಶ್ರೀರಾಮನನ್ನು ಸ್ಮರಿಸಿದ್ದಾರೆ.

    ಇದನ್ನೂ ಓದಿ: ಕನ್ನಡಕ್ಕೆ ಕೋಕಿಲ: ನಯನ ತಾರಾ ಪಾತ್ರದಲ್ಲಿ ರಚಿತಾ

    ಸದ್ಯ ಚಿತ್ರತಂಡದ ಈ ಕ್ರಿಯೆಟಿವಿಟಿಗೆ ಅಭಿಮಾನಿ ವಲಯದಿಂದಲೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಆಯಾ ಅಕ್ಷರಗಳ ಅನುಸಾರ ಎಲ್ಲರೂ ಡಿಪಿಗಳನ್ನು ಇಟ್ಟುಕೊಳ್ಳುತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೇ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಅವರ ಜನ್ಮ ದಿನದ ನಿಮಿತ್ತ ಪೋಸ್ಟರ್ ಬಿಡುಗಡೆ ಮಾಡಿ, ಶುಭಾಶಯ ಕೋರಿತ್ತು.

    ಮುಂಬೈಗೆ ಹೋದ್ರೆ ರೇಪ್​ ಆಗ್ತೀಯಾ ಅಂತ ಹೆದರಿಸಿದ್ದರಂತೆ ರಾಧಿಕಾಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts