ಹೈದರಾಬಾದ್: ರಸ್ತೆ ದುರಸ್ತಿಗಾಗಿ ಸಂಚಾರ ನಿರ್ಬಂಧಿಸಿದಾಗ ಅಥವಾ ವಾಹನ ದಟ್ಟಣೆ ಉಂಟಾದಾಗ, ರಜಾ ಅವಧಿಯಲ್ಲಿ, ವಾಹನ ಸಂಚಾರ ಕಡಿಮೆ ಇರುವ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬಾರದೇಕೆ ಎಂದು ಸ್ಥಳೀಯಾಡಳಿತಕ್ಕೆ ಶಾಪ ಹಾಕಿರುತ್ತೇವೆ. ಅಂತೆಯೇ, ದೇಶಾದ್ಯಂತ ಲಾಕ್ಡೌನ್ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ವಾಹನಗಳೇ ಇಲ್ಲ ಎನ್ನುವಂತಾಗಿದೆ. ಹೀಗಿರುವಾಗ ರಸ್ತೆ ರಿಪೇರಿ ಮಾಡಿಸಬಾರದೇ ಎಂಬ ಯೋಚನೆ ನಮ್ಮಲ್ಲಿ ಕೆಲವರಲ್ಲಾದರೂ ಬಂದಿರಲಿಕ್ಕೆ ಸಾಕು. ಇಂಥದ್ದೇ ಯೋಚನೆ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಅವರಿಗೂ ಬಂದಿದೆ. ಹೀಗಾಗಿ ಹೈದರಾಬಾದ್ನ ಎಲ್ಲ ಪ್ರಮುಖ ರಸ್ತೆಗಳ ಸುಸ್ಥಿತಿಗೆ ಕ್ರಮ ಕೈಗೊಳ್ಳುವಂತೆ ಗುರುವಾರ ಸೂಚಿಸಿದ್ದಾರೆ. ಹೀಗಾಗಿ ರಸ್ತೆಗಳನ್ನು ಅಭಿವೃದ್ಧಿಪಡಿಸಲು ನಗರಾಭಿವೃದ್ಧಿ ಇಲಾಖೆ ಕಾಯರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಸದ್ಯ ಹೈದರಾಬಾದ್ನಲ್ಲಿ ಜನ ಸಂಚಾರ ಅತ್ಯಂತ ವಿರಳವಾಗಿದೆ. ರಾಜಧಾನಿಯಲ್ಲಿರುವ ಬಹುತೇಕರು ಲಾಕ್ಡೌನ್ ಘೋಷಣೆ ಬಳಿಕ ಹಳ್ಳಿಗಳತ್ತ ಮುಖಮಾಡಿದ್ದಾರೆ. ಹೈದರಾಬಾದ್ಗೆ ಹೊಂದಿಕೊಂಡಂತ ಜಿಲ್ಲೆಗಳಲ್ಲಿ ಜನರು ಹೆಚ್ಚಾಗಿರುವುದು ಕಂಡು ಬಂದಿದೆ.
ಈ ನಡುವೆ, ಕರೊನಾ ಹಬ್ಬುವುದನ್ನು ತಡೆಗಟ್ಟಲು ರಸ್ತೆಗಳಲ್ಲಿ ಉಗಿಯುವುದನ್ನು ತೆಲಂಗಾಣ ಸರ್ಕಾರ ನಿಷೇಧಿಸಿದೆ. ಪಾನ್ ಮಸಾಲಾ, ಗುಟ್ಕಾ, ಎಲೆಅಡಿಕೆ, ತಂಬಾಕು ಹಾಗೂ ತಂಬಾಕು ಉತ್ಪನ್ನ ಮೊದಲಾದವುಗಳನ್ನು ಸೇವಿಸಿ ರಸ್ತೆ ಮೇಲೆ, ಸಾರ್ವಜನಿಕ ಸ್ಥಳಗಳು ಹಾಗೂ ಸಂಸ್ಥೆಗಳಲ್ಲಿ ಉಗಿಯುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಪಿಲಾನಿಯ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಸೈನ್ಸ್ ವಿದ್ಯಾರ್ಥಿಗಳು ಕರೊನಾ ಮುಂಚೂಣಿ ಪಡೆಯವರಿಗಾಗಿ ಮರುಬಳಕೆಯ ಫೇಸ್ಶೀಲ್ಡ್ಗಳನ್ನು ತಯಾರಿಸಿದ್ದಾರೆ. ಒಂದು ಫೇಸ್ಶೀಲ್ಡ್ ತಯಾರಿಕಾ ವೆಚ್ಚ 40 ರೂ. ಎಂದು ಅಂದಾಜಿಸಲಾಗಿದೆ.
ಈ ನಡುವೆ, ಹೈದರಾಬಾದ್ನಲ್ಲಿ ಕೋವಿಡ್ನ 12 ಹಾಟ್ಸ್ಪಾಟ್ಗಳನ್ನು ಗುರುತಿಸಲಾಗಿದೆ ಎಮದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರದ ಪರಿಹಾರ ಸಾಮಗ್ರಿಗೆ ಫೋಟೋ ಅಂಟಿಸಿಕೊಂಡಿರುವ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಮಾಜಿ ಸಿಎಂ ಎಚ್ಡಿಕೆ ಆಕ್ರೋಶ