ಕೊಲ್ಲಂ: ಅಪಾಯಕಾರಿ ಸೆಲ್ಫಿ ಮತ್ತು ಮದುವೆ ಫೋಟೋಶೂಟ್ ಮಾಡಿಸುವುದು ಜೀವಕ್ಕೆ ಅಪಾಯಕಾರಿ ಎಂಬುದನ್ನು ನೆನಪಿನಲ್ಲಿಡಬೇಕು. ಹೊಸ ಜೀವನ ಆರಂಭಿಸುವ ಉತ್ಸಾಹದಲ್ಲಿರುವಾಗ ನಮ್ಮ ಸಣ್ಣ ಎಡವಟ್ಟೊಂದು ನಮ್ಮ ಜೀವನವನ್ನೇ ದುಃಖ ಸಾಗರದಲ್ಲಿ ಮುಳುಗಿಸಿಬಿಡುತ್ತದೆ. ಆ ರೀತಿ ನಡೆಯದಂತೆ ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯ.
ನಿಮಗೆ ಗೊತ್ತಿರಬಹುದು ಕಳೆದ ನವೆಂಬರ್ 10ರಂದು ಗುರುವಾಯೂರು ದೇವಸ್ಥಾನದಲ್ಲಿ ಯುವ ಜೋಡಿ, ಮದುವೆ ಫೋಟೋಶೂಟ್ ನಡೆಸುವ ಸಂದರ್ಭದಲ್ಲಿ ಆನೆಯೊಂದು ಕೆರಳಿ ಮಾವುತನ ಮೇಲೆ ದಾಳಿ ಮಾಡಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಸ್ವಲ್ಪ ಯಾಮಾರಿದ್ದರೆ ಯುವ ಜೋಡಿಯ ಮೇಲೂ ಆನೆ ದಾಳಿ ಮಾಡುವ ಸಾಧ್ಯತೆ ಇತ್ತು. ಆದರೆ, ಅದೃಷ್ಟವಶಾತ್ ಬಚಾವ್ ಆದರು.
ಇದೊಂದೆ ಘಟನೆಯಲ್ಲ, ಇತ್ತೀಚೆಗಷ್ಟೇ ಕೊಲ್ಲಂ ಛಥನೂರಿನಲ್ಲಿ ವಧು-ವರ ಸೆಲ್ಫಿ ತೆಗೆಯಲೆಂದು ಕಲ್ಲು ಕ್ವಾರಿ ಬಳಿ ಹೋಗಿದ್ದರು. ಈ ವೇಳೆ ವಧು ಕಾಲು ಜಾರಿ ಕಲ್ಲು ಕ್ವಾರಿ ಕೊಳಕ್ಕೆ ಬಿದ್ದಿದ್ದಳು. ಆಕೆಯನ್ನು ಕಾಪಾಡಲು ವರ ಕೂಡ ಕ್ವಾರಿಗೆ ಜಿಗಿದಿದ್ದ. ಬಳಿಕ ಸ್ಥಳೀಯರು ಇಬ್ಬರನ್ನು ರಕ್ಷಣೆ ಮಾಡಿದ್ದರು. ಮದುವೆ ಇನ್ನು ಒಂದು ದಿನ ಬಾಕಿ ಇರುವಾಗಲೇ ಈ ಘಟನೆ ನಡೆದಿದ್ದು, ವಧು ಗಾಯಗೊಂಡಿರುವ ಹಿನ್ನೆಲೆಯಲ್ಲಿ ಮದುವೆಯನ್ನು ಮುಂದೂಡಲಾಗಿದೆ.
ನಿನ್ನೆಯಷ್ಟೇ (ಡಿ.10) ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ತುಂಟ ಆನೆಯೊಂದು ಫೋಟೋಶೂಟ್ ನಡೆಸುತ್ತಿದ್ದ ದಂಪತಿಯ ಮೇಲೆ ಬಾಳೆದಿಂಡನ್ನು ಎಸೆದಿದೆ. ಈ ಘಟನೆ ಡಿ.5ರಂದು ಪನ್ಮನಾ ಸುಬ್ರಮಣಿಯ ಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ. ದಂಪತಿ ಜೈಶಂಕರ್ ಮತ್ತು ಗ್ರೀಷ್ಮಾ ಫೋಟೋಶೂಟ್ ಮುಗಿಸಿ ಹೊರಡುತ್ತಿದ್ದ ವೇಳೆ ಸರವಣನ್ ಎಂಬ ಆನೆ ದಂಪತಿಯ ಮೇಲೆ ಬಾಳೆ ದಿಂಡನ್ನು ಎಸೆದಿದೆ. ಆ ಬಾಳೆ ದಿಂಡು ಮದುಮಗನ ಹೆಗಲ ಮೂಲಕ ಹಾದುಹೋಯಿತು.
ಅಂದಹಾಗೆ ಆನೆ ಸರವಣನ್ಗೆ ಗ್ರೀಷ್ಮಾ ಚಿಕ್ಕಂದಿನಿಂದಲೂ ತುಂಬಾ ಪರಿಚಿತೆ. ದೇವಸ್ಥಾನಕ್ಕೆ ಬಂದಾಗಲೆಲ್ಲ ಸರವಣನ್ಗೆ ಏನಾದಾರೂ ಆಹಾರವನ್ನು ಸರವಣನ್ ತರುತ್ತಿದ್ದ. ಆದಾಗ್ಯೂ ಈ ಬಾರಿ ಯಾವುದೇ ಆಹಾರವನ್ನು ತರದಿದ್ದಕ್ಕೆ ಕೋಪಗೊಂಡು ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ.
ಅಂದಹಾಗೆ ಅಪಾಯದ ಫೋಟೋಶೂಟ್ಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುವವರೆಲ್ಲ ಅಪಾಯವು ನಮ್ಮ ಹತ್ತಿರದಲ್ಲಿದೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. (ದಿಗ್ವಿಜಯ ನ್ಯೂಸ್)
ವೆಡ್ಡಿಂಗ್ ಫೋಟೋಶೂಟ್ ವೇಳೆ ಕೆರಳಿದ ಆನೆ: ಮಾವುತ ಬಚಾವ್ ಆಗಿದ್ದೇ ರೋಚಕ, ವಿಡಿಯೋ ವೈರಲ್
ಮದ್ವೆ ಹಿಂದಿನ ದಿನ ಸೆಲ್ಫಿ ತೆಗೆಯಲು ಹೋಗಿ ಕಲ್ಲು ಕ್ವಾರಿಗೆ ಬಿದ್ದ ವಧು-ವರ!
ಕರ್ನಾಟಕದ ನಟಿಯೊಂದಿಗೆ ಸಲ್ಮಾನ್ ಖಾನ್ ಡೇಟಿಂಗ್? ವೈರಲ್ ಆಗುತ್ತಿವೆ ಇವರಿಬ್ಬರ ಫೋಟೋಗಳು!