More

    ವೆಡ್ಡಿಂಗ್​ ಫೋಟೋಶೂಟ್​ ವೇಳೆ ಕೆರಳಿದ ಆನೆ: ಮಾವುತ ಬಚಾವ್​ ಆಗಿದ್ದೇ ರೋಚಕ, ವಿಡಿಯೋ ವೈರಲ್​

    ಗುರುವಾಯೂರು: ಆನೆಯ ಮುಂದೆ ನಿಂತು ವೆಡ್ಡಿಂಗ್​ ಫೋಟೋಶೂಟ್​ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕೆರಳಿದ ಆನೆ ಮಾವುತನ ಮೇಲೆ ಅಟ್ಟಹಾಸ ಮೆರೆದ ಘಟನೆ ಗುರುವಾಯೂರು ದೇವಸ್ಥಾನದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಈ ಘಟನೆ ನವೆಂಬರ್​ 10ರಂದು ಬೆಳಗ್ಗೆ ದೇವಸ್ಥಾನ ದಕ್ಷಿಣ ದ್ವಾರದ ಬಳಿ ನಡೆದಿದೆ. ಆನೆಯ ಹೆಸರು ದಾಮೋದರ್​ ದಾಸ್​. ದೇವಸ್ಥಾನದ ಮೆರವಣಿಗೆಯ ಬಳಿಕ ಆನೆಯನ್ನು ಮರಳಿ ಕರೆತರಲಾಗುತ್ತಿತ್ತು. ಈ ವೇಳೆ ಅನೇಕ ಭಕ್ತರು ಸಹ ಅಲ್ಲಿಯೇ ಇದ್ದರು. ಕ್ಯಾಮೆರಾಮೆನ್​ ನವವಿವಾಹಿತರ ಫೋಟೋಶೂಟ್​ ನಡೆಸುತ್ತಿದ್ದರು.

    ಇದ್ದಕ್ಕಿದ್ದಂತೆ ಕೆರಳಿದ ಆನೆ ಮೊದಲು ಮಾವುತನನ್ನು ಕೆಳಗೆ ಕೆಡವಿ, ದಂತದಿಂದ ಆತನನ್ನು ಮೇಲಕ್ಕೆ ಎತ್ತಿ ಬೀಸಾಡಿತು. ಮಾವುತನ ಅದೃಷ್ಟ ಚೆನ್ನಾಗಿದ್ದರಿಂದ ಯಾವುದೇ ತೊಂದರೆ ಇಲ್ಲದೆ ಪಾರಾಗಿದ್ದಾನೆ. ಆನೆಯ ಮೇಲೆ ಕುಳಿತ ಮತ್ತೊಬ್ಬ ಮಾವುತ ಆನೆಯನ್ನು ಸಮಾಧಾನಪಡಿಸಿದನು.

    ಮೊದಲ ಮಾವುತ ಎ.ವಿ.ರಾಧಾಕೃಷ್ಣನ್ ಬಚಾವ್​ ಆಗಿದ್ದು ಪವಾಡವೇ ಸರಿ ಎಂದು ನೋಡುಗರು ಅಭಿಪ್ರಾಯಪಟ್ಟಿದ್ದಾರೆ. ಬಳಿಕ ಆನೆಯನ್ನು ಹತೋಟಿಗೆ ತಂದು ದೇವಸ್ಥಾನದ ಆವರಣದಲ್ಲಿರುವ ಮರಕ್ಕೆ ಕಟ್ಟಿ ಹಾಕಲಾಯಿತು. (ಏಜೆನ್ಸೀಸ್​)

    ವಿಡಿಯೋ ಕೃಪೆ: ಮಾತೃಭೂಮಿ ಯೂಟ್ಯೂಬ್​ ಚಾನೆಲ್

    ಬೀಡಿ ಹಚ್ಚಿಕೊಳ್ಳಲು ಬೆಂಕಿ ಕಡ್ಡಿ ಕೊಡದಿದ್ದಕ್ಕೆ ವೃದ್ಧನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ದುಷ್ಟ

    ಆಡಿಯೋ ಕೇಳಿ ನನ್ನ ಮಗಳು ಶಾಕ್​ನಲ್ಲಿದ್ದು, ರೂಂ‌ಮಿಂದ ಹೊರ ಬಂದಿಲ್ಲ: ವೈಷ್ಣವಿ ತಂದೆಯ ನೋವಿನ ಮಾತು

    ಹುಡುಗಿಯರಿಬ್ಬರ ಆಡಿಯೋ ವೈರಲ್​ ಆದ ಬೆನ್ನಲ್ಲೇ ಸಂಬಂಧಕ್ಕೆ ಅಂತ್ಯವಾಡಿದ ಸನ್ನಿಧಿ! ವೈಷ್ಣವಿ ಮಾಡಿದ ಮನವಿ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts