ಮುಂಬೈ: ಸುಶಾಂತ್ ಸಿಂಗ್ ಸಾವಿನ ತನಿಖೆಗೊಂದು ಸ್ವರೂಪವೇ ಸಿಗುತ್ತಿಲ್ಲ ಎಂದರೂ ತಪ್ಪಾಗಲಾರದು. ಸುಶಾಂತ್ ಗೆಳತಿ ರಿಯಾ ಸದ್ಯ ಜೈಲುಪಾಲಾಗಿದ್ದಾರೆ. ಈ ಮಧ್ಯೆ ಮತ್ತೊಂದು ಹೊಸ ವಿಷಯ ಹೊರಬಿದ್ದಿದೆ.
ಜೂನ್ 14ರಂದು, ಅಂದರೆ ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವ ಒಂದೇ ದಿನ ಮೊದಲು ರಿಯಾ ಚರ್ಕವರ್ತಿ, ಸುಶಾಂತ್ನನ್ನು ಭೇಟಿಯಾಗಿದ್ದರು ಎಂಬ ಹೊಸದೊಂದು ವಿಚಾರ ಬಹಿರಂಗವಾಗಿದೆ.
ಈ ಮೊದಲು ರಿಯಾ ತಾವು ಜೂನ್ 8ರಂದೇ ಸುಶಾಂತ್ ಮನೆಯನ್ನು ತೊರೆದಿದ್ದಾಗಿ ಹೇಳಿದ್ದರು. ಅದಾದ ಬಳಿಕ ಸುಶಾಂತ್ ಸಿಂಗ್ ಮನೆಗೆ ರಿಯಾ ಹೋಗಿಲ್ಲ ಎಂಬುದನ್ನೇ ಸತ್ಯವೆಂದು ನಂಬಿಕೊಳ್ಳಲಾಗಿತ್ತು.
ಆದರೆ ಇದೀಗ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಜೂನ್ 13ರಂದು ರಿಯಾ ಮತ್ತು ಸುಶಾಂತ್ ಭೇಟಿ ಮಾಡಿದ್ದರು ಎಂದು ಹೇಳಲಾಗಿದೆ. ಅದಕ್ಕೆ ಪುಷ್ಟಿ ನೀಡುವಂತೆ ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಕೂಡ ತಮ್ಮ ಇನ್ಸ್ಟಾದಲ್ಲಿ ಪೋಸ್ಟ್ ಹಾಕಿದ್ದಾರೆ. ಇದನ್ನೂ ಓದಿ: ಯುಪಿ ಸರ್ಕಾರದ ವಿರುದ್ಧ ದೇವೇಗೌಡರ ಆಕ್ರೋಶ; ಪಿಯಾಂಕಾ, ರಾಹುಲ್ರನ್ನು ಬಿಡುಗಡೆ ಮಾಡಲು ಆಗ್ರಹ
ರಿಯಾ ಜೂ.13ರಂದು ಸುಶಾಂತ್ನನ್ನು ಭೇಟಿ ಮಾಡಿದ್ದು ಸತ್ಯ. ಈ ಸತ್ಯ ಗೇಮ್ ಚೇಂಜರ್ ಆಗಲಿದೆ. ಸುಶಾಂತ್ರನ್ನು 13ನೇ ತಾರೀಖಿನಿಂದು ರಿಯಾ ಭೇಟಿ ಮಾಡಿದ್ದನ್ನು ನೋಡಿದವರೇ ದೃಢಪಡಿಸಿದ್ದಾರೆ. ಆ ರಾತ್ರಿ ಏನು ಪಿತೂರಿಯಾಗಿದೆ? ಮರುದಿನ ಬೆಳಗ್ಗೆಯೇ ನನ್ನ ಸೋದರ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ? ಈ ಸತ್ಯ ಹೊರಬೀಳಬೇಕು. ಸೂಕ್ತ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಸುಶಾಂತ್ ಸಿಂಗ್ ಮತ್ತು ರಿಯಾ ಚಕ್ರವರ್ತಿ ಜೂ.13ರಂದು ಭೇಟಿಯಾಗಿದ್ದಾರೆ ಎಂಬುದನ್ನು ಅವರು ಒಟ್ಟಿಗೆ ಇದ್ದುದನ್ನು ನೋಡಿದವರೇ ನನಗೆ ಹೇಳಿದ್ದಾರೆ ಎಂದು ಮುಂಬೈನ ಬಿಜೆಪಿ ಕಾರ್ಯದರ್ಶಿ ವಿವೇಕಾನಂದ ಗುಪ್ತಾ ಸುದ್ದಿವಾಹಿನಿಯೊಂದಕ್ಕೆ ಹೇಳಿದ್ದರು. ಅಲ್ಲದೆ, ಅಂದು ತಡರಾತ್ರಿ ಸುಶಾಂತ್ ಅವರೇ ರಿಯಾರನ್ನು ಡ್ರಾಪ್ ಮಾಡಲು ಆಕೆಯ ಮನೆವರೆಗೂ ಹೋಗಿದ್ದರು ಎಂಬ ಸತ್ಯವೂ ಗೊತ್ತಾಗಿದೆ ಎಂದು ಪ್ರತಿಪಾದಿಸಿದ್ದರು. (ಏಜೆನ್ಸೀಸ್)
‘ನನಗೆ ಅಮ್ಮನಾಗಲು ಇಷ್ಟವಿಲ್ಲ..’: ‘ಪ್ಯಾರ್ಗೆ ಆಗ್ಬಿಟ್ಟೈತೆ’ ಹುಡ್ಗಿ ಹೀಗಂದಿದ್ಯಾಕೆ?