ಪಟನಾ: ಬಿಹಾರದಲ್ಲಿ ಮುಖ್ಯಮಂತ್ರಿಯವರ ಮಹತ್ವಾಕಾಂಕ್ಷೆಯ ಜಲ್, ಜೀವನ್, ಹರಿಯಾಲಿ ಎಂಬ ಕಾರ್ಯಕ್ರಮ ಭಾನುವಾರ ಪಟನಾದ ಗಾಂಧಿ ಮೈದಾನದಲ್ಲಿ ಉದ್ಘಾಟನೆಯಾಗಿದೆ.
ಜಲ, ಜೀವನ ಮತ್ತು ಹಸಿರು ಎಂಬ ಈ ಕಾರ್ಯಕ್ರಮ ಹವಾಮಾನ ವೈಪರೀತ್ಯ ಮತ್ತು ಸಾಮಾಜಿಕ ಅನಿಷ್ಠಗಳನ್ನು ದೂರಗೊಳಿಸುವ ಪ್ರಯತ್ನದ ಉದ್ದೇಶ ಹೊಂದಿದೆ. ಇದರ ಉದ್ಘಾಟನೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಮತ್ತು ಇತರೆ ಸಚಿವರು ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮದ ಮೂಲಕ ಸರ್ಕಾರ, ಮದ್ಯಪಾನ, ಬಾಲ್ಯವಿವಾಹ, ವರದಕ್ಷಿಣೆ ಪಿಡುಗು ಇತ್ಯಾದಿ ಸಾಮಾಜಿಕ ಅನಿಷ್ಠಗಳನ್ನೂ ದೂರ ಮಾಡಲು ಪ್ರಯತ್ನಿಸುತ್ತಿದೆ. ಇಂದು ಮಾನವ ಸರಪಣಿಯನ್ನೂ ಗಾಂಧಿ ಮೈದಾನದಲ್ಲಿ ನಡೆಸಲಾಗಿತ್ತು.
ಇದಕ್ಕೆ ಪೂರಕವಾಗಿ ಮುಜಾಫರ್ಪುರ ಜಿಲ್ಲೆ ಬೋಛಾ ತಾಲೂಕಿನ ಗಂಡಕ್ ನದಿಯಲ್ಲಿ ದೋಣಿಗಳ ಸರಪಣಿಯನ್ನು ಅಥೂರ್ ಗ್ರಾಮದ ನಿವಾಸಿಗಳು ನಿರ್ಮಿಸಿ ಜನಜಾಗೃತಿ ಮೂಡಿಸಿದ್ದಾರೆ. (ಏಜೆನ್ಸೀಸ್)