ನವದೆಹಲಿ : ಭಾರತದ ಅತ್ಯುನ್ನತ ಕ್ರೀಡಾ ಪುರಸ್ಕಾರಕ್ಕೆ ಇಂದಿನವರೆಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಎಂಬ ಹೆಸರಿತ್ತು. ಇಂದು ಬೆಳಿಗ್ಗೆ ಅದಕ್ಕೆ ಹಾಕಿ ದಿಗ್ಗಜ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರುನಾಮಕರಣ ಮಾಡಿರುವುದಾಗಿ ಪ್ರಧಾನಿ ಮೋದಿ ಟ್ವಿಟರ್ನಲ್ಲಿ ಘೋಷಿಸಿದರು.
ಕ್ರೀಡಾ ಪ್ರಶಸ್ತಿಗೆ ಕ್ರೀಡಾ ಕ್ಷೇತ್ರದವರದೇ ಹೆಸರು ಇಡುವುದು ಉತ್ತಮ ಕ್ರಮವಾಗಿದೆ ಎಂದು ಹಲವಾರು ಜನರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಅದರೊಂದಿಗೇ, ವಿಪಕ್ಷ ನಾಯಕರೂ ಸೇರಿದಂತೆ ಹಲವರು ಗುಜರಾತ್ನ ಮೊಟೆರಾ ಕ್ರಿಕೆಟ್ ಕ್ರೀಡಾಂಗಣಕ್ಕೆ ಇತ್ತೀಚೆಗೆ ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ ಮಾಡಿದ ಬಗ್ಗೆ ಉಲ್ಲೇಖಿಸಿದ್ದಾರೆ. ಕ್ರೀಡಾಂಗಣಗಳಿಗೂ ರಾಜಕಾರಣಿಗಳ ಹೆಸರಿನ ಹಂಗು ಬೇಡ ಎಂದು ಕೆಲವರು ಟ್ವಿಟರ್ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಯುವ ಕ್ರೀಡಾಪಟುಗಳಿಗೆ ಸರ್ಕಾರಿ ನೆರವು; ಶಾಸಕ ರಾಜಾ ವೆಂಕಟಪ್ಪ ನಾಯಕ ಭರವಸೆ
“ಇದು ಮೋದಿ ಸರ್ಕಾರದಿಂದ ಉತ್ತಮ ನಿರ್ಧಾರವಾಗಿದೆ. ನರೇಂದ್ರ ಮೋದಿ ಸ್ಟೇಡಿಯಂ ಮತ್ತು ಜೈಟ್ಲಿ ಸ್ಟೇಡಿಯಂಗೂ ಮರುನಾಮಕರಣ ಮಾಡುವರೆಂದು ಆಶಿಸುತ್ತೇನೆ. ಎಲ್ಲಾ ರಾಜಕಾರಣಿಗಳ ಹೆಸರನ್ನು ತೆಗೆಯಿರಿ” ಎಂದು ಯೂಟ್ಯೂಬರ್ ಧೃವ ರಾಠಿ ಬರೆದಿದ್ದಾರೆ. ಮೋದಿ ಸ್ಟೇಡಿಯಂ ಹೆಸರನ್ನು ಕಪಿಲ್ ದೇವ್ ಅಥವಾ ಸಚಿನ್ ಸ್ಟೇಡಿಯಂ ಎಂದು ಬದಲಿಸಿ ಎಂದು ಅಮರ್ಕಾಂತ್ ಸಿಂಗ್ ಎಂಬುವರು ಸಲಹೆ ನೀಡಿದ್ದಾರೆ.
ಈ ರೀತಿ ಸಂದೇಶ ಕಳುಹಿಸಿದವರಲ್ಲಿ ಕ್ರಿಕೆಟಿಗ ಇರ್ಫಾನ್ ಪಠಾನ್ ಕೂಡ ಒಬ್ಬರು. “ಕ್ರೀಡಾಪಟುವಿಗೆ ಮಾನ್ಯತೆ ಸಿಗುವುದು, ಅವರ ಮೇಲೆ ಪ್ರಶಸ್ತಿಯನ್ನು ಹೆಸರಿಸುವುದು ಉತ್ತಮ ಬೆಳವಣಿಗೆಯಾಗಿದೆ… ಭವಿಷ್ಯದಲ್ಲಿ ಕ್ರೀಡಾಂಗಣಗಳಿಗೂ ಕ್ರೀಡಾಪಟುಗಳ ಹೆಸರು ಸಿಗಲಿವೆ ಎಂದು ಆಶಿಸುತ್ತೇನೆ” ಎಂದು ಪಠಾಣ್ ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)
ಸರ್ವೋನ್ನತ ಕ್ರೀಡಾ ಪುರಸ್ಕಾರಕ್ಕೆ ಹಾಕಿ ದಿಗ್ಗಜ ಮೇಜರ್ ಧ್ಯಾನ್ಚಂದ್ ಹೆಸರು
ಸಾಧನೆಯ ಪಥದಲ್ಲಿ ನೆರವಾದ ಟ್ರಕ್ ಚಾಲಕರನ್ನು ಸತ್ಕರಿಸಿದ ಮೀರಾಬಾಯಿ ಚಾನು