ಹುಬ್ಬಳ್ಳಿ : ಅಕ್ಷಯ ತೃತೀಯಾ ದಿನದಂದು ಚಿನ್ನಾಭರಣ ಹಾಗೂ ಬೆಳ್ಳಿಯ ಆಭರಣ ಖರೀದಿಸಿದರೆ ಶುಭ ಎಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಶುಕ್ರವಾರದಂದು ದಾಖಲೆಯ ವಹಿವಾಟು ನಡೆದಿದೆ.
ಶುಕ್ರವಾರ ಒಂದೇ ದಿನ ಹುಬ್ಬಳ್ಳಿಯ ವಿವಿಧ ಚಿನ್ನಾಭರಣ ಮಳಿಗೆಗಳಲ್ಲಿ 3.5 ಕೆಜಿ ಬಂಗಾರದ ಆಭರಣ ಹಾಗೂ 150 ಕೆಜಿಗೂ ಹೆಚ್ಚು ಬೆಳ್ಳಿಯ ಆಭರಣಗಳ ಮಾರಾಟವಾಗಿದೆ. ಇದರ ಮೊತ್ತ ಅಂದಾಜು 4 ಕೋಟಿ ರೂ. ಎಂದು ಹೇಳಲಾಗುತ್ತಿದೆ.
ಕೋವಿಡ್ ನಂತರದ ವರ್ಷಗಳಲ್ಲಿ ಇಷ್ಟೊಂದು ದೊಡ್ಡಮಟ್ಟದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಮಾರಾಟವಾಗಿರುವುದು ಇದೇ ಮೊದಲು ಎಂದು ಹೇಳುತ್ತಾರೆ ಉತ್ತರ ಕರ್ನಾಟಕ ಜ್ಯುವೆಲರ್ಸ್ ಸಂಘಗಳ ಮಹಾಸಭಾದ ಅಧ್ಯಕ್ಷ ಗೋವಿಂದ ನಿರಂಜನ ಅವರು.