IPL 2024, RCBvsKKR: ತವರಿನಲ್ಲಿ ಆರ್​ಸಿಬಿಗೆ ಭಾರೀ ಮುಖಭಂಗ! ವಿರಾಟ್​ ಏಕಾಂಗಿ ಹೋರಾಟ ವ್ಯರ್ಥ

blank

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್​ 2024ರ ಆವೃತ್ತಿಗೆ ಅದ್ದೂರಿ ಚಾಲನೆ ಸಿಕ್ಕಿದ್ದೇ ತಡ ಪ್ರತಿಯೊಂದು ಪಂದ್ಯವು ರೋಚಕವಾಗಿ ಸಾಗುತ್ತಿವೆ. ಇನ್ನು ಇಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 10ನೇ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್​ ನಾಯಕತ್ವದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ಮತ್ತು ಶ್ರೇಯಸ್​ ಅಯ್ಯರ್​ ಕ್ಯಾಪ್ಟನ್ಸಿಯ ಕೊಲ್ಕತ್ತಾ ನೈಟ್​ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದು, ಕೆಕೆಆರ್​ ಆರ್ಭಟಕ್ಕೆ ಆರ್​ಸಿಬಿ ತತ್ತರಿಸಿತು.

ಇದನ್ನೂ ಓದಿ: ನೆಗೆಟಿವ್ ಕಮೆಂಟ್​ಗಳ ಮಧ್ಯೆ ಇವರೊಬ್ಬರ ಅನಿಸಿಕೆ ಬಹಳ ಖುಷಿ ಕೊಡ್ತು! ನಟಿ ಅನುಪಮಾಗೆ ಹೀಗೇಳಿದ್ಯಾರು?

ಟಾಸ್​ ಗೆದ್ದ ಕೆಕೆಆರ್​ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. 20 ಓವರ್​ಗಳಲ್ಲಿ 183 ರನ್​ ಗುರಿ ನೀಡಿದ ಆರ್​ಸಿಬಿಗೆ ಟಕ್ಕರ್​ ಕೊಡಲು ದ್ವಿತೀಯಾರ್ಧದಲ್ಲಿ ಕಣಕ್ಕಿಳಿದ ಶ್ರೇಯಸ್ಸ್ ಅಯ್ಯರ್ ಪಡೆ, ಓಪನರ್ ಆಗಿ ಸ್ಪೋಟಕ ಓಪನಿಂಗ್ ಕೊಟ್ಟ ಸುನಿಲ್ ನರೇನ್ ಮತ್ತು ಸಾಲ್ಟ್​, ಸ್ಟೇಡಿಯಂನ ಸುತ್ತಮುತ್ತ ಸಿಕ್ಸರ್​ಗಳ ಸುರಿಮಳೆಯನ್ನೇ ಹರಿಸಿದರು. ಈ ಮೂಲಕ 77 ರನ್​ಗಳನ್ನು ಕೊಡುಗೆಯಾಗಿ ಕೊಟ್ಟ ಈ ಜೋಡಿ, ಒಬ್ಬರ ಬೆನ್ನಲ್ಲೇ ಮತ್ತೊಬ್ಬರು ಪೆವಿಲಿಯನ್​ನತ್ತ ಮುಖಮಾಡಿದರು.

ಕೆಕೆಆರ್​ ನಾಯಕ ಶ್ರೇಯಸ್ಸ್​ ಅಯ್ಯರ್​ 59 ಮತ್ತು ವೆಂಕಟೇಶ್ ಅಯ್ಯರ್ ಅಬ್ಬರದ​ ಜತೆಯಾಟದಿಂದ ಕೊಲ್ಕತ್ತಾ ಭರ್ಜರಿ ಗೆಲುವು ದಾಖಲಿಸಿತು. 83 ರನ್​ ಸಿಡಿಸಿದ ವಿರಾಟ್​ ಕೊಹ್ಲಿಯ ಏಕಾಂಗಿ ಹೋರಾಟ ಕಡೆಗೂ ವಿಫಲಗೊಂಡಿದ್ದು, ಆರ್​ಸಿಬಿ ಅಭಿಮಾನಿಗಳಲ್ಲಿ ಭಾರೀ ಬೇಸರ ಮೂಡಿಸಿದೆ.

ಅಂದು RCB 263… ಇಂದು SRH 277! ಎರಡು ದಾಖಲೆಯ ಸಮಯದಲ್ಲೂ ತಂಡದಲ್ಲಿದ್ದ ಏಕೈಕ ಆಟಗಾರ ಇವರು

Share This Article

ಪ್ರತಿದಿನ ಶುಂಠಿ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ಇಲ್ಲಿದೆ ನಿಮಗಾಗಿ ಹೆಲ್ತಿ ಮಾಹಿತಿ | Health Tips

ಶುಂಠಿಯು ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಮಸಾಲೆಯಾಗಿದೆ. ಇದನ್ನು ಪ್ರಪಂಚದಾದ್ಯಂತ ಅಡುಗೆ ಮತ್ತು ಗಿಡಮೂಲಿಕೆಗಳ ಪರಿಹಾರಗಳಲ್ಲಿ ಬಳಸಲಾಗುತ್ತದೆ.…

ವ್ಯಾಯಾಮವು ದೇಹಕ್ಕೆ ಮಾತ್ರವಲ್ಲ ಮೆದುಳಿಗೂ ಮುಖ್ಯ; ಹೇಗೆ.. ಇಲ್ಲಿದೆ ಮಾಹಿತಿ | Health Tips

ವಯಸ್ಸು ಹೆಚ್ಚಾದಂತೆ ಸ್ಮರಣಶಕ್ತಿ ದುರ್ಬಲಗೊಳ್ಳುತ್ತದೆ. ಆದರೆ ಇಂದಿನ ಕಾಲದಲ್ಲಿ ಚಿಕ್ಕ ವಯಸ್ಸಿನಲ್ಲೇ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಅಥವಾ…

ಭಾರತದ ಈ 7 ನಗರಗಳಲ್ಲಿ ಮಾಂಸದೂಟ ಸಂಪೂರ್ಣ ನಿಷೇಧ! ಸಸ್ಯಾಹಾರಿ ಆಹಾರಕ್ಕೆ ಮಾತ್ರ ಅವಕಾಶ | No Meat City

No Meat Cities: ಭಾರತ ಒಂದು ವೈವಿಧ್ಯಮಯ ಸಂಸ್ಕೃತಿಗಳು ಮತ್ತು ಪಾಕಪದ್ಧತಿಗಳ ದೇಶ. ಇಲ್ಲಿನ ಸಂಸ್ಕೃತಿ,…