ಬೆಂಗಳೂರು: ಹೊಸ ಜೆರ್ಸಿ, ಲಾಂಛನದ ಜತೆಗೆ ಹೆಸರಿನಲ್ಲೂ “ಬೆಂಗಳೂರು’ ಪದ ಸರಿಪಡಿಸಿಕೊಂಡು “ಹೊಸ ಅಧ್ಯಾಯ’ ಎಂಬ ಬರೆಯುವ ಉತ್ಸಾಹದೊಂದಿಗೆ ಅಭಿಯಾನ ಆರಂಭಿಸಿದ್ದ ಆರ್ಸಿಬಿ ಪಾಲಿಗೆ ಈಗ ಐಪಿಎಲ್&17 ಬಹುತೇಕ “ಮುಗಿದ ಅಧ್ಯಾಯ’ ಎಂಬಂತಾಗಿದೆ. ಮೊದಲ 7ರಲ್ಲಿ 1ರಲ್ಲಿ ಮಾತ್ರ ಗೆದ್ದಿರುವ ಆರ್ಸಿಬಿ ಇನ್ನು ಪ್ಲೇಆ್ಗೇರಬೇಕಾದರೆ ಉಳಿದ ಏಳರಲ್ಲೂ ಗೆದ್ದರಷ್ಟೇ ಸಾಲದು, ಟೂರ್ನಿಯ ಇತರ ಲಿತಾಂಶಗಳೂ ವರವಾಗಿ ಬರಬೇಕಿದೆ. ಹೀಗಾಗಿ 17ನೇ ಸಲವೂ ಕಪ್ ಕೈತಪು$್ಪತ್ತಿರುವ ಬಗ್ಗೆ ಅಭಿಮಾನಿಗಳಲ್ಲಿ ಅಸಮಾಧಾನ ಕಾಣಿಸಿಕೊಂಡಿದ್ದರೆ, ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಪ್ರೇಮಿಗಳ ಆಕ್ರೋಶವೂ ಜೋರಾಗುತ್ತಿದೆ. ಪ್ರಮುಖವಾಗಿ ಈಗ ತಂಡದ ಆಟಗಾರರಿಗಿಂತ ಟೀಮ್ ಮ್ಯಾನೇಜ್ಮೆಂಟ್ ವಿರುದ್ಧವೇ ಹೆಚ್ಚಿನ ಟೀಕೆಗಳು ವ್ಯಕ್ತವಾಗುತ್ತಿವೆ.
ಟೀಮ್ ಇಂಡಿಯಾ ಮಾಜಿ ಬ್ಯಾಟರ್ ವೀರೇಂದ್ರ ಸೆಹ್ವಾಗ್, ಮನೋಜ್ ತಿವಾರಿ ಆರ್ಸಿಬಿ ಮ್ಯಾನೇಜ್ಮೆಂಟ್ಅನ್ನೇ ಪ್ರಶ್ನೆ ಮಾಡಿದ್ದಾರೆ. ಆರ್ಸಿಬಿ ಕೋಚ್ (ಆಂಡಿ ್ಲವರ್), ನಿರ್ದೇಶಕ (ಮೋ ಬೋಬಟ್) ಸಹಿತ ತಂಡದ ಮ್ಯಾನೇಜ್ಮೆಂಟ್ನಲ್ಲಿ ಬಹುತೇಕ ವಿದೇಶಿಯರೇ ತುಂಬಿದ್ದರೆ, ತಂಡ ಬಹುತೇಕ ಭಾರತೀಯ ಆಟಗಾರರು ಇಂಗ್ಲಿಷ್ ಗೊತ್ತಿಲ್ಲದವರಾಗಿದ್ದಾರೆ. ಹೀಗಾಗಿ ಅವರಿಗೆ ಈ ವಿದೇಶೀಯರು ಹೇಗೆ ಪ್ರೇರಣೆ ನೀಡಲು ಸಾಧ್ಯ? ತರಬೇತಿ ಸಿಬ್ಬಂದಿ ಬಳಗದಲ್ಲಿ ಒಬ್ಬನೇ ಒಬ್ಬ ಭಾರತೀಯನಿಲ್ಲ. ಆಟಗಾರರನ್ನು ಅವರು ವಿಶ್ವಾಸಕ್ಕೆ ತೆಗೆದುಕೊಳ್ಳಲು ಹೇಗೆ ಸಾಧ್ಯ? ಎಂದು ಸೆಹ್ವಾಗ್ ಕಿಡಿಕಾರಿದ್ದಾರೆ. ಇನ್ನು ಮನೋಜ್ ತಿವಾರಿ ಆರ್ಸಿಬಿ ತಂಡದ ಹರಾಜಿನ ಕಾರ್ಯತಂತ್ರವನ್ನು ಪ್ರಮುಖವಾಗಿ ದೂರಿದ್ದು, ಪ್ರಮುಖ ವಿಕೆಟ್ ಟೇಕರ್ ಯಜುವೇಂದ್ರ ಚಾಹಲ್ರನ್ನು ಕೈಬಿಟ್ಟ ಮತ್ತು ವಿರಾಟ್ ಕೊಹ್ಲಿ ನಾಯಕತ್ವವನ್ನು ಉಳಿಸಿಕೊಳ್ಳದ ಬಗ್ಗೆ ಟೀಕೆ ಮಾಡಿದ್ದಾರೆ.
ಮಹೇಶ್ ಭೂಪತಿ ಕಿಡಿ: ಅಭಿಮಾನಿಗಳ ಪ್ರೀತಿಗೆ ಸರಿಯಾದ ಬೆಲೆ ನೀಡದ ಆರ್ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ದಿಗ್ಗಜ ಟೆನಿಸ್ ಆಟಗಾರ ಹಾಗೂ ಕನ್ನಡಿಗ ಮಹೇಶ್ ಭೂಪತಿ ಕೂಡ “ಎಕ್ಸ್’ನಲ್ಲಿ ಕಿಡಿಕಾರಿದ್ದಾರೆ. “ಕ್ರೀಡೆ, ಐಪಿಎಲ್, ಅಭಿಮಾನಿಗಳು ಮತ್ತು ಆಟಗಾರರ ಹಿತದೃಷ್ಟಿಯಿಂದ ಬಿಸಿಸಿಐ, ಆರ್ಸಿಬಿ ತಂಡವನ್ನು ಮಾರಾಟ ಮಾಡಿ, ಹೆಚ್ಚಿನ ಇತರ ್ರಾಂಚೈಸಿಗಳಂತೆ ಬಲಿಷ್ಠವಾದ ತಂಡ ಕಟ್ಟಬಲ್ಲಂಥ ಹೊಸ ಮಾಲೀಕರಿಗೆ ಅದರ ಒಡೆತವನ್ನು ಒಪ್ಪಿಸಬೇಕು’ ಎಂದು ಭೂಪತಿ ಬರೆದುಕೊಂಡಿದ್ದಾರೆ.
ಆರ್ಸಿಬಿ 11 ಬ್ಯಾಟರ್ಗಳನ್ನೇ ಆಡಿಸುವುದು ಉತ್ತಮ. ಡು ಪ್ಲೆಸಿಸ್ ಕೂಡ 2 ಓವರ್ ಬೌಲಿಂಗ್ ಮಾಡಬಹುದು. ವಿರಾಟ್ ಕೊಹ್ಲಿ ಬೌಲಿಂಗ್ ಮಾಡಿದರೂ, ಅಷ್ಟೊಂದು ರನ್ ಬಿಟ್ಟುಕೊಡಲಾರರು.
> ಕೆ. ಶ್ರೀಕಾಂತ್, ಮಾಜಿ ಕ್ರಿಕೆಟಿಗ