More

    ನಮಗದು ಚಿನ್ನಕ್ಕಿಂತಲೂ ಹೆಚ್ಚು; ಒಲಿಂಪಿಕ್ಸ್​ ಕುಸ್ತಿಯಲ್ಲಿ ಬೆಳ್ಳಿ ಗೆದ್ದ ರವಿಯ ಗ್ರಾಮಸ್ಥರು ಹೀಗಂದಿದ್ದೇಕೆ?

    ಹರಿಯಾಣ: ಒಲಿಂಪಿಕ್ಸ್​​ನ ಕುಸ್ತಿ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿಯ ಪದಕವನ್ನು ಗೆದ್ದು ಹೆಮ್ಮೆ ತಂದಿರುವ ಕುಸ್ತಿಪಟು ರವಿಕುಮಾರ್ ದಾಹಿಯ ಬಗ್ಗೆ ಈಗ ಅವರ ಗ್ರಾಮಸ್ಥರು ಮಾತ್ರವಲ್ಲದೆ ದೇಶಾದ್ಯಂತ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಅವರ ಗ್ರಾಮಸ್ಥರು ರವಿಯ ಗೆಲುವನ್ನು ಅತ್ಯಂತ ವಿಶೇಷ ಎಂದು ವ್ಯಾಖ್ಯಾನಿಸಿದ್ದಾರೆ.

    ನಾವು ಈ ಪಂದ್ಯವನ್ನು ನೋಡಿ ತುಂಬಾ ಸಂತೋಷ ಪಟ್ಟಿದ್ದೇವೆ. ರವಿ ಚಿನ್ನ ಗೆದ್ದಿಲ್ಲ ಎಂಬ ಬೇಸರ ನಮಗಿಲ್ಲ. ಯಾವುದೇ ಸಂಪನ್ಮೂಲ ಇಲ್ಲದೆ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ. ಹೀಗಾಗಿ ನಮಗೆ ಅದು ಚಿನ್ನಕ್ಕಿಂತಲೂ ಹೆಚ್ಚು. ಈ ಗೆಲುವನ್ನು ಸಾಧಿಸಿರುವ ಅವರನ್ನು ನಾವು ಅದ್ಧೂರಿಯಾಗಿ ಸ್ವಾಗತಿಸುತ್ತೇವೆ ಎಂದು ಹರಿಯಾಣದಲ್ಲಿರುವ ಅವರ ಗ್ರಾಮಸ್ಥರು ವಿಶೇಷವಾದ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

    ಒಲಿಂಪಿಕ್ಸ್​ ಕುಸ್ತಿ ಸೆಮಿಫೈನಲ್​​ನಲ್ಲಿ ಕಜಕಸ್ತಾನಿನ ನುರಿಸ್ಲಮ್​ ಸನಯೆವ್​ ಸೋಲಿಸಿ, ಫೈನಲ್​ ತಲುಪಿದ್ದ ರವಿಕುಮಾರ್ ದಾಹಿಯ ಫೈನಲ್​ನಲ್ಲಿ ರಷ್ಯಾ ಎದುರಾಳಿ ಜೌರ್​​ ಉಗ್ಯೂವ್​ ಎದುರು ಸೋಲಿಗೀಡಾಗಿ ಚಿನ್ನದ ಪದಕದಿಂದ ವಂಚಿತರಾದರು. ಅದಾಗ್ಯೂ ಅವರು ಬೆಳ್ಳಿ ಪದಕದ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ. (ಏಜೆನ್ಸೀಸ್​)

    ಕಾರವಾರದ ಯುವತಿ, ಗೋವಾದ ಯುವಕನ ನಿಶ್ಚಿತಾರ್ಥ; ಗಡಿಯಲ್ಲಿ ಎರಡು ಗಂಟೆಗೂ ಅಧಿಕ ಕಾಲ ಪರದಾಟ!

    ನಿಮ್ಮಲ್ಲಿ ಈ ಲಕ್ಷಣಗಳಿದ್ದರೆ ತುರ್ತಾಗಿ ಕರೊನಾ ಲಸಿಕೆ ತೆಗೆದುಕೊಳ್ಳುವುದು ಅನಿವಾರ್ಯ..

    ‘ತಂದೆಗೆ ಒಳ್ಳೆಯ ಮಗಳಾಗಲಿಲ್ಲ, ಗಂಡನಿಗೆ ತಕ್ಕ ಹೆಂಡತಿಯಾಗಲಿಲ್ಲ..’: ಮೋಹನಕುಮಾರಿ ಇನ್ನಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts